janadhvani

Kannada Online News Paper

ಕೈಕಂಬ: ಹುಬ್ಬುರ್ರಸೂಲ್ ಕಾನ್ಫರೆನ್ಸ್ ಯಶಸ್ವಿಗೆ ಸುನ್ನೀ ಕೋರ್ಡಿನೇಷನ್ ಕರೆ

ಕೈಕಂಬ.ನ,1:ಶಿಕ್ಷಣ ರಂಗದಲ್ಲಿ ಕ್ರಾಂತಿಯನ್ನೇ ಹಬ್ಬಿಸಿದ ಯುವ ವಿದ್ವಾಂಸ ಬಹು ಬದ್ರುದ್ದೀನ್ ಅಝ್ಹರಿ ಅಲ್ ಕಾಮಿಲ್ ಇವರ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ಮರ್ಕಝ್ ದಅವತುಲ್ ಇಸ್ಲಾಮಿಯ್ಯ ಸಂಸ್ಥೆಯ ವತಿಯಿಂದ ನಾಳೆ ಸಂಜೆ(ನ.2) ಬೃಹತ್ ಹುಬ್ಬುರ್ರಸೂಲ್ ಕಾರ್ಯಕ್ರಮ ನಡೆಯಲಿದೆ

ಪ್ರಸ್ತುತ ಕಾರ್ಯಕ್ರಮದಲ್ಲಿ ಹಲವು ಉಲಮಾ-ಉಮರಾ ನೇತಾರರು ಭಾಗವಹಿಸಲಿದ್ದು, ಪ್ರತ್ಯೇಕವಾಗಿ ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಮುಶಾವರ ಸದಸ್ಯರೂ ಪ್ರಮುಖ ವಿದ್ವಾಂಸರೂ ಆದ ಬಹು ಬದ್ರುಸ್ಸಾದಾತ್ ಸಯ್ಯದ್ ಇಬ್ರಾಹಿಮ್ ಖಲೀಲ್ ತಂಙಳ್ ಕಡಲುಂಡಿ ಭಾಗವಹಿಸಲಿದ್ದಾರೆ.

ಈ ಎಲ್ಲಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸುನ್ನೀ ಕೋರ್ಡಿನೇಷನ್ ಕಮಿಟಿ ಕರೆ ನೀಡಿದೆ. ಸುನ್ನೀ ಕೋರ್ಡಿನೇಷನ್ ಕಮಿಟಿ ಕೈಕಂಬ ಇದರ ಅಂಗ ಸಂಘಟನೆಗಳಾದ SJU,SJM,SMA,SYS,SSF ನೇತಾರರು ಮತ್ತು ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಿ ತನು-ಮನ ಧನಗಳಿಂದ ಸಹಕರಿಸಬೇಕಾಗಿ ಈ ಮೂಲಕ ವಿನಮ್ರ ವಿನಂತಿ.

ಕೆ.ಹೆಚ್ .ಯು ಶಾಫಿ ಮದನಿ ಕರಾಯ
ಪ್ರಧಾನ ಕಾರ್ಯದರ್ಶಿ
ಸುನ್ನೀ ಕೋರ್ಡಿನೇಷನ್ ಕಮಿಟಿ ಕೈಕಂಬ

error: Content is protected !! Not allowed copy content from janadhvani.com