SYS ಉಜಿರೆ ಸೆಂಟರ್ ಮಹಾಸಭೆಯು ದಿನಾಂಕ 24/10/2019 ನೇ ಗುರುವಾರ ಮಧ್ಯಾಹ್ನ 2.30ಕ್ಕೆ ಬದ್ರಿಯಾ ಜುಮಾ ಮಸ್ಜಿದ್ ಉಜಿರೆ ಟೌನ್ ವಠಾರದಲ್ಲಿ ಅಧ್ಯಕ್ಷರಾದ ಇಬ್ರಾಹಿಂ ಕಕ್ಕಿಂಜೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.
SYS ಬೆಳ್ತಂಗಡಿ ಝೋನ್ ಅಧ್ಯಕ್ಷರಾದ S.M ಕೋಯ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಜಿರೆ ಸೆಂಟರ್ ಪ್ರದಾನ ಕಾರ್ಯದರ್ಶಿ ಇಸ್ಮಾಯಿಲ್ ಸಖಾಫಿ ಮಾಚಾರು ವರದಿ ಹಾಗು ಲೆಕ್ಕಪತ್ರ ಮಂಡಿಸಿದರು.
SYS ಉಜಿರೆ ಸೆಂಟರ್’ನ ನೂತನ ಅಧ್ಯಕ್ಷರಾಗಿ ರಶೀದ್ ಬಲಿಪಾಯ,ನೆರಿಯ ಪ್ರ.ಕಾರ್ಯದರ್ಶಿಯಾಗಿ ಖಾಲಿದ್ ಮುಸ್ಲಿಯಾರ್, ಉಜಿರೆ ಕೋಶಾಧಿಕಾರಿಯಾಗಿ ಇಬ್ರಾಹಿಂ ಹಾಜಿ ಅತ್ತಾಜೆ ಉಪಾಧ್ಯಕ್ಷರಾಗಿ ಮುಹಿಯುದ್ದೀನ್ ಉಜಿರೆ ಜೊ.ಕಾರ್ಯದರ್ಶಿಗಳಾಗಿ ಖಾಸಿಂ ಮುಸ್ಲಿಯಾರ್ ಮಾಚಾರು,ಅಬ್ದುಲ್ ಹಮೀದ್ ಮುಂಡಾಜೆ, ಅಶ್ರಫ್ KCF ಉಜಿರೆ,ಉಸ್ಮಾನ್ ಕಾಜೂರು 16 ಸದಸ್ಯರ ಸಮಿತಿಯನ್ನು ಆಯ್ಕೆ ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ SM ಕೋಯ ತಂಙಳ್’ರವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ SYS ದ.ಕ ಜಿಲ್ಲಾ ನಾಯಕರಾದ ಮಹಮ್ಮದಲಿ ಸಖಾಫಿ ಸುರಿಬೈಲು, ಅಶ್ರಫ್ ಕಿನಾರ , ಹಾಗೂ SYS ಉಜಿರೆ ಸೆಂಟರ್ ವ್ಯಾಪ್ತಿಯ ಬ್ರಾಂಚ್ ವ್ಯಾಪ್ತಿಯ ಕೌನ್ಸಿಲರ್’ಗಳು ಉಪಸ್ಥಿತರಿದ್ದರು.
✍ಎಂ.ಎಂ.ಉಜಿರೆ