ಅದು ಅಲ್-ಮದೀನತ್ತುಲ್ ಮುನವ್ವರ ವಿದ್ಯಾ ಸಂಸ್ಥೆ ಮೂಡಡ್ಕದಲ್ಲಿ ವ್ಯಾಸಾಂಗ ಮಾಡುತ್ತಿದ್ದ ಸಂದರ್ಭ ಅಂದರೆ 2013 ನೇ ವಿಸವಿ,
ಅಲ್ಲಿ ನನ್ನ ಅಚ್ಚುಮೆಚ್ಚಿನ ಸ್ನೇಹಿತನಾಗಿದ್ದು ನನ್ನೂಳವಿನ ಮಿತ್ರ,
ಒಬ್ಬ ಪ್ರತಿಬಾವಂತ ವಿದ್ಯಾರ್ಥಿ
ನಾಸಿರ್ ಮುಂಡೂರ್
ಅದೇಕೋ ನನಗೆ ಅವನೆಂದರೆ ಬಹಳ ಅಚ್ಚುಮೆಚ್ಚು, ಕಲಿಕೆಯಲ್ಲಿ ಬಹಳ ಚುರುಕು, ಹೆಚ್ಚು ಅನಾವಶ್ಯಕವಾಗಿ ಯಾರಲ್ಲೂ ಮಾತಡಲ್ಲ, ಜಗಳ ಎಂಬುವುದು ಅವನಿಂದ ನಾನು ನೋಡಿಯೇ ಇಲ್ಲ,
ಶಿಕ್ಷಕರಿಗೆಲ್ಲಾ ಅವನೆಂದರೆ ಬಹಳ ಇಷ್ಟ, ಏಕೆಂದರೆ ಯಾವುದೇ ತಂಟೆ ಮಾಡದೇ, ಬಹಳ ಸಂಯಮದಿಂದ ವರ್ತಿಸುತ್ತಿದ್ದ ಒಬ್ಬ ಆದರ್ಶ ವಿದ್ಯಾರ್ಥಿಯಾಗಿದ್ದ ಆತ, ಸಂಸ್ಥೆಯ ಆದರ್ಶ ವಿದ್ಯಾರ್ಥಿ ಪ್ರಶಸ್ತಿಗೂ ಬಾಜನರಾಗಿದ್ದ
ಇಂತಹ ವಿದ್ಯಾರ್ಥಿ ಯಾರಿಗೆ ತಾನೇ? ಇಷ್ಟವಾಗಲ್ಲ,
ನಾನು ಅಂದರೆ ಬಹಳಷ್ಟು ಹಚ್ಚಿ ಕೊಂಡಿದ್ದ ಆತ, ಕ್ಯಾಂಟೀನ್ ನಲ್ಲಿ ಊಟ ಮಾಡುವುದಾದರೂ, ಯಾವುದಾದರೂ ಪ್ರೋಗ್ರಾಮ್ ಗೆ ಹೋದರೆ ಕುಳಿತುಕೊಳ್ಳುವುದು ನನ್ನ ಜೊತೆಗೆ ಆಗಿತ್ತು,
ಆದರೆ ನಾಸಿರ್ ಎಂಬ ಆ ಹೆಸರು ಇನ್ನು ನೆನಪುಗಳಷ್ಟೇ.
SBS ಸಾಹಿತ್ಯ ಸಮಾಜದಲ್ಲಿ ಬಾಷಣಕ್ಕೆ ನಿಂತರೆ ಕೇಳುಗಾರರು ಒಮ್ಮೆ ಬೆರೆಗಾಗುವರು, ಅಂತಹ ಉಪಯುಕ್ತ ಮಾಹಿತಿಗಳನ್ನೊಳಗೊಂಡ ಅರ್ಥ ಗರ್ಭಿತ ಬಾಷಣ,ಬಾಷಣದಲ್ಲಿ ಉತ್ತಮ ಯುವ ಬಾಷಣಗಾರನಾಗಬೇಕೆಂಬ ಅವನ ಕನಸು, ಚಿತ್ರ ಕಲೆ ಯಲ್ಲಿ ಅವನದೇ ಒಂದು ದಾಖಲೆ, ಅಷ್ಟು ಅಂದಾದ ಬರಹಗಳು,
ಮಾತ್ರವಲ್ಲ ವಯಸ್ಸು ಚಿಕ್ಕದಾದರೂ ಅವನು ಯಾವುದೇ ನಮಾಜನ್ನು ಉಪೇಕ್ಷಿಸಿದ್ದು ನಾನು ಕಂಡಿಲ್ಲ.
ಅಂತಹ ಉತ್ತಮ ಮನಸ್ಸಿನ ಸುನ್ನತ್ ಜಮಾಅತನ್ನು ಅತೀ ಹೆಚ್ಚು ಪ್ರೀತಿಸುತ್ತಿದ್ದ ನಮ್ಮ ಪ್ರೀತಿಯ ನಾಸಿರ್ ಮುಂಡೂರ್ ಕಳೆದ 6 ವರ್ಷಗಳಿಂದ ಚಿರ ನಿದ್ರೆಗೆ ಜಾರಿದ್ದಾನೆ,
ತನ್ನ ಕುಟುಂಬ ಸಹಿತ ಒಂದು ಸ್ವಲಾತ್ ಮಜ್ಲೀಸ್ ಗೆ ಹೋಗಿ ಹಿಂದಿರುಗಿ ಬರುವಾಗ ವೇಗದಿಂದ ಬಂದ ಮಿನಿ ಬಸ್ಸ್ ನಾಸಿರ್ ಇದ್ದ ರಿಕ್ಷಾಗೆ ರಭಸದಿಂದ ಡಿಕ್ಕಿ ಹೊಡೆಯಿತು, ನಾಸಿರ್ ಸಹಿತ ಅವನ ಕುಟುಂಬದ ನಾಲ್ವರು ಡಿಕ್ಕಿಯ ರಭಸಕ್ಕೆ ಮರಣ ಹೊಂದಿದರು, ಇನ್ನಾಲಿಲ್ಲಾಹ್.
ನಾಸಿರ್ ನ ತಾಯಿ ಮರಣ ಹೊಂದಿದ ಒಂದೇ ವರ್ಷದಲ್ಲಿ ಆ ತಾಯಿಯ ಜೊತೆ ಮಗನೂ ಯಾತ್ರೆಯಾಗಿಬಿಟ್ಟ,
ನಾಸಿರ್ ನ ಯಾತ್ರೆ ಅದು ಕೇವಲ ಒಂದು ಯಾತ್ರೆಯಾಗಿರಲಿಲ್ಲ, ಅದೆಷ್ಟೋ ಸಹಪಾಠಿಗಳ, ಗುರು ವೃಂದದ ಕಣ್ಣೀರಿನ ಕುರ್ ಆನ್ ಪಾರಾಯಣಗಳ ಮುಗಿಲು ಮುಟ್ಟಿದ ತಹ್ಲೀಲ್ ಗಳ ನೀನಾದಗಳೊಂದಿಗೆ ಅಂತಿಮ ಯಾತ್ರೆಯಾಗಿತ್ತು.
ನಾಸಿರ್ ಅದೊಮ್ಮೆಯೂ ಮರೆಯಲಾಗದ ಅಮೃತ ಮುತ್ತಾಗಿತ್ತು,
ಅಲ್ಲಾಹು ಮಗ್ಫೀರತ್ ನೀಡಲಿ(ಆಮೀನ್)
ಪ್ರೀತಿಯ ನಾಸಿರ್ ನಮ್ಮನ್ನಗಲಿ ಇಂದಿಗೆ 6 ವರ್ಷಗಳು ಕಳೆಯಿತು, ಆದರೆ ಆತನ ಆ ಆದರ್ಶ ಒಮ್ಮೆಯೂ ಮರೆಯುವಂತಹದು ಅಲ್ಲ,
ಆ ಪುಟ್ಟ ವಿದ್ಯಾರ್ಥಿಯ ಪರಲೋಕ ಮೋಕ್ಷಕ್ಕಾಗಿ ತಾವೆಲ್ಲರೂ ದುವಾ ಮಾಡಿ.
ಕಣ್ಣೀರಿನೊಂದಿಗೆ…
✍ Kp ಬಾತಿಶ್ ತೆಕ್ಕಾರು















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ