ಉಪ್ಪಿನಂಗಡಿ,ಅ19:ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಬೇಡಿಕೆಯ ಪತ್ರ ಎರಡು ದಿವಸದ ಮೊದಲು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು.ಉಪ್ಪಿನಂಗಡಿಯ ಪೇಟೆಯಿಂದ ಸರಕಾರಿ ಕಾಲೇಜು ತನಕ ನಡೆದುಕೊಂಡು ಹೋಗುವಾಗ ಇಲ್ಲಿನ ಗಾಂಧಿಪಾರ್ಕ್ ಬಳಿಯಿಂದ ಹಿರೆಬಂಡಾಡಿ ರಸ್ತೆ ತಿರುವಿನ ತನಕ ಬಹಳ ಕಷ್ಟ ಪಟ್ಟು ನಡೆಯಬೇಕಾಗುತ್ತದೆ.


ಕಾರಣ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ನಡೆಯುವ ಪಾದಚಾರಿ ದಾರಿಯು ಹುಲ್ಲುಪೊದೆಗಳಿಂದ ತುಂಬಿದ್ದು ಪಾದಚಾರಿ ದಾರಿಯಲ್ಲಿ ನಡೆಯಲು ಸಾಧ್ಯವೆನಿಸುವುದಿಲ್ಲ, ನಮ್ಮ ಶಾಲಾ ಮಕ್ಕಳು,ಸೈಂಟ್ ಮೇರೀಸ್ ವಿದ್ಯಾ ಸಂಸ್ಥೆಯ ಸಣ್ಣ ಸಣ್ಣ ಮಕ್ಕಳು ಕಿರಿದಾದ ಹುಲ್ಲುಗಳಿಂದಾವೃತವಾದ ಪಾದಚಾರಿ ದಾರಿಯಲ್ಲಿ ನಡೆಯಲು ಪರದಾಡಬೇಕಾಗುತ್ತದೆ.


ಉಪ್ಪಿನಂಗಡಿ ಜಂಕ್ಷನ್ ನಲ್ಲಿ ಸ್ವಚ್ಚತೆಗಾಗಿ ಮುಂಬರುವ ಸಂಘಸಂಸ್ಥೆಗಳು ದಯವಿಟ್ಟು ಇತ್ತ ಗಮನಿಸಿ ಎಂಬ ವಿದ್ಯಾರ್ಥಿಗಳ ಪತ್ರಕ್ಕೆ ಎಸ್ಸೆಸ್ಸೆಫ್ಫ್ ಉಪ್ಪಿನಂಗಡಿ ಡಿವಿಷನ್ ಇಂದು ಪ್ರಾಯೋಗಿಕವಾಗಿ ಪಾದಚಾರಿ ದಾರಿಯಲ್ಲಿನ ಪೊದೆಗಳನ್ನು ಹುಲ್ಲುಗಳನ್ನು ಕತ್ತರಿಸಿ ಸರಿಯಾದ ದಾರಿ ಮಾಡುವ ಮೂಲಕ ಸ್ವಚ್ಚತೆ ಮಾಡಿ ಪ್ರಾಯೋಗಿಕವಾಗಿ ಉತ್ತರ ಕೊಟ್ಟಿತು.ಸ್ವಚ್ಚತಾ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ಫ್ ಉಪ್ಪಿನಂಗಡಿ ಡಿವಿಷನ್ ಸಮಿತಿ ನಾಯಕರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ