ರಾಣಿಬೆನ್ನೂರು.ಸೆ,20:ಕೇರಳದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿರುವ ಮುಹಿಮ್ಮಾತುಲ್ ಮುಸ್ಲಿಮೀನ್ ಎಜುಕೇಷನ್ ಸೆಂಟರ್ ವತಿಯಿಂದ ನಿರ್ಮಾಣಗೊಂಡ ಅಮೀನ ತ್ವಾಹ ಜಾಮಿಯ ಮಸೀದಿ ಬಿಲ್ಲ ಹಳ್ಳಿ ಇದರ ಉದ್ಘಾಟನೆ ಹಾಗೂ ಬ್ರಹತ್ ಸುನ್ನೀ ಇಜ್ತಿಮಾ ಸಮಾಪ್ತಿಗೊಂಡಿತು.
ಮುಹಿಮ್ಮಾತ್ ಸಂಸ್ಥೆಯ ಶಿಲ್ಪಿ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳರ ಸುಪುತ್ರ ಸಯ್ಯಿದ್ ಹಾಮಿದುಲ್ ಅಹ್ದಲ್, ವಕ್ಫ್ ನಿರ್ವಹಣೆಯನ್ನು ನಿರ್ವಹಿಸಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಜಾಮಿಯಾ ಮಸೀದಿಯನ್ನು ನಿರ್ಮಿಸಿ ಕೊಟ್ಟ ತ್ವಾಹ ಕೊಲ್ಲಂರವರು ಅಧ್ಯಕ್ಷೀಯ ಭಾಷಣ ಮಾಡಿದರು.ದ.ಕ.ಮಾಜಿ ಉಸ್ತುವಾರಿ ಸಚಿವ ಯು.ಟಿ ಖಾದರ್ ಮುಹಿಮ್ಮಾತ್ ಸಂಸ್ಥೆಯ ಪ್ರಸ್ತುತ ಕಾರ್ಯಕ್ರಮವನ್ನು ಶ್ಲಾಘಿಸಿ ಶುಭಹಾರೈಸಿದರು.
ಮುಹಿಮ್ಮಾತ್ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್,ಎಕ್ಸಿಕ್ಯೂಟಿವ್ ಮೂಸ ಸಖಾಫಿ ಕಳತ್ತೂರು, ಸಯ್ಯಿದ್ ತ್ವಾಹ ತಂಙಳ್ ಸವಣೂರು, ಸಲೀಂ ಜವಳಿ ಅಧ್ಯಕ್ಷರು ಹಾವೇರಿ ಜಿಲ್ಲಾ ವಕ್ಫ್ ಸಮಿತಿ, ಡಾ/ಟಿಪ್ಪು ಸಾಬ್ ಕಳಕೋಟಿ ಅಧ್ಯಕ್ಷರು ಹಾವೇರಿ ಜಿಲ್ಲಾ ಕಾಂಗ್ರೆಸ್ ಸಮಿತಿ, ಅಬ್ದುಲ್ ವಹ್ಹಾಬ್ ಶಾಫಿ ಅಧ್ಯಕ್ಷರು ಅಂಜುಮಾನ್ ಕಮಿಟಿ ರಾಣಿಬೆನ್ನೂರು, ನಿಸಾರ್ ಸಖಾಫಿ ಕೊಲ್ಲಂ, ಬಿ.ಎ ಇಬ್ರಾಹೀಂ ಸಖಾಫಿ ದಾವಣಗೆರೆ, ಕೆ.ಕೆ ಅಶ್ರಫ್ ಹಿಮಮಿ ಸಖಾಫಿ SSF ಜಿಲ್ಲಾ ಅಧ್ಯಕ್ಷರು ದಾವಣಗೆರೆ, ಯಾಸೀನ್ ಸಖಾಫಿ SSF ಜಿಲ್ಲಾ ಅಧ್ಯಕ್ಷರು ಹಾವೇರಿ, ಜುನೈದ್ ಹಿಮಮಿ ಸಖಾಫಿ SSF ಜಿಲ್ಲಾ ಅಧ್ಯಕ್ಷರು ಚಿತ್ರದುರ್ಗ, ದಾದಫೀರ್ ಮೇಸ್ತ್ರಿ ಮುಂತಾದ ಹಲವಾರು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಶೇಷವಾಗಿ ದಾನಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಫಕೀರ್ ಸಾಬ್ ಮೇಷ್ಟ್ರು ಸ್ವಾಗತಿಸಿದರು.SSF ರಾಜ್ಯ ಕಾರ್ಯದರ್ಶಿ ಮುಸ್ತಫ ಹಿಮಮಿ ಸಖಾಫಿ ಹಾವೇರಿ ವಂದಿಸಿದರು.