janadhvani

Kannada Online News Paper

ಮುಹರ್ರಮ್ ತಿಂಗಳ ಚಂದ್ರದರ್ಶನ: ಸೆ,9 ತಾಸುಆ- ಕೂರತ್ ತಂಙಳ್ ಘೋಷಣೆ

ಮಂಗಳೂರು.ಸೆ,31: ಇಂದು (ಶನಿವಾರ ಅಸ್ತ ಆದಿತ್ಯವಾರ) ರಾತ್ರಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 1 ನಾಳೆ ಮುಹರ್ರಂ ತಿಂಗಳ ಚಾಂದ್ ಒಂದು ಆಗಿದ್ದು, ಸೆಪ್ಟೆಂಬರ್ 9 ಮತ್ತು 10 ರಂದು ತಾಸೂಆ, ಆಶೂರಾ ದಿನದ ಸುನ್ನತ್ ಉಪವಾಸ ಆಗಿರುತ್ತದೆ ಎಂದು ಗೌರವಾನ್ವಿತ ಉಳ್ಳಾಲ ಖಾಝಿ, ದ.ಕ.ಜಿಲ್ಲಾ ಸಂಯುಕ್ತ ಖಾಝಿ ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಙಳ್ ಹಾಗೂ ಗೌರವಾನ್ವಿತ ತಾಜುಲ್ ಫುಕಹಾಅ್ ಪಿ ಎಂ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ (ಉಡುಪಿ.ಚಿಕ್ಕಮಂಗಳೂರು. ಹಾಸನ ಸಂಯುಕ್ತ ಖಾಝಿಗಳು) ಘೋಷಿಸಿದ್ದಾರೆ ಎಂದು ಅಶ್ರಫ್ ಕಿನಾರ ಮಂಗಳೂರು
(ಕಾರ್ಯದರ್ಶಿ ಸುನ್ನಿ ಕೋ ಆರ್ಡಿನೇಷನ್ ಕರ್ನಾಟಕ.ಪ್ರಧಾನ ಕಾರ್ಯದರ್ಶಿ SჄS ದಕ್ಷಿಣ ಕನ್ನಡ ಜಿಲ್ಲೆ) ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮಂಗಳೂರು ಖಾಝಿ ಘೋಷಣೆ:

ನಾಳೆ ಯಿಂದ ಮೊಹರಂ 1 (ಸೆಪ್ಟೆಂಬರ್ 1) ಆರಂಭ ಎಂದು ಮಂಗಳೂರು ಹಾಗೂ ದ.ಕ.ಜಿಲ್ಲಾ ಸಂಯುಕ್ತ ಖಾಝಿ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾದ್ ರವರು ತೀರ್ಮಾನಿಸಿದ್ದಾರೆ ಎಂದು ಮುಹಮ್ಮದ್ ಹನೀಫ್ ಹಾಜಿ(ಪ್ರಧಾನ ಕಾರ್ಯದರ್ಶಿ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ,& ಈದ್ಗಾ ಮಸೀದಿ ಮಂಗಳೂರು) ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com