ರಿಯಾದ್: ಹಣಕ್ಕಾಗಿ ಕೇರಳೀಯ ವ್ಯಕ್ತಿಯೊಬ್ಬನನ್ನು ಸೌದಿಯಲ್ಲಿ ಅಪಹರಿಸಲಾಗಿದೆ. ಎರ್ನಾಕುಳಂ ಎಡಪಳ್ಳಿ ಮೂಲದವರಾದ ಸನಲ್ ಕುಮಾರ್ ಪೊನ್ನಪ್ಪನ್ ನಾಯರ್ ಅವರನ್ನು ಅಪಹರಿಸಲಾಗಿದ್ದು, ನ್ಯು ಸನಯ್ಯಾದ ಖಾಸಗಿ ಕಂಪನಿಯಲ್ಲಿ ಅವರು ಕಾರ್ಯ ನಿರ್ವಹಿಸುತ್ತಿದ್ದರು.
ಭಾರತೀಯ ರಾಯಭಾರ ಕಚೇರಿ ಮತ್ತು ಸೌದಿ ಪೊಲೀಸರ ಸಮಯೋಚಿತ ಹಸ್ತಕ್ಷೇಪದಿಂದ ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿ ಸನಲ್ ಕುಮಾರ್ರನ್ನು ಬಂಧ ಮುಕ್ತಗೊಳಿಸಲಾಗಿದೆ.
ಆರು ವಿದೇಶಿಯರ ಗುಂಪು ಸನಲ್ ಕುಮಾರ್ ಅವರನ್ನು ಕಾರಿನಲ್ಲಿ ಅಪಹರಿಸಿದ್ದರು. ಅವರ ಬಳಿಯಿದ್ದ 3,500 ರಿಯಾಲ್ಗಳನ್ನು ಅಪಹರಣಗಾರರು ಕದ್ದಿದ್ದರು. ನಂತರ ಅವರನ್ನು ಮೈಲಿಗಳು ದೂರದಲ್ಲಿರುವ ಸೌದಿ ಜರ್ಮನ್ ಆಸ್ಪತ್ರೆಗೆ ಹತ್ತಿರ ಕರೆದೊಯ್ಯಲಾಯಿತು. ಸನಲ್ ಕುಮಾರ್ ಅವರ ಪತ್ನಿಗೆ ವಿಡಿಯೋ ಕಾಲ್ ಮಾಡಿದ ದಾಳಿಕೋರರು, ಸನಲ್ ಕುಮಾರ್ ಅವರ ಬಿಡುಗಡೆಗೆ 70,000 ರಿಯಾಲ್ ನೀಡಬೇಕು. ಇಲ್ಲದಿದ್ದರೆ ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದರು. ಸನಲ್ ಕುಮಾರ್ ಅವರಿಗೆ ಅಕ್ರಣಗೈಯ್ಯುವ ದೃಶ್ಯಗಳನ್ನೂ ಅವರ ಪತ್ನಿಗೆ ಕಳುಹಿಸಿದ್ದರು.
ಪತ್ನಿ ಶ್ರೀಕಲಾ ಅಪಹರಣ ಕುರಿತು ಸಾಮಾಜಿಕ ಕಾರ್ಯಕರ್ತ ಶಿಹಾಬ್ ಕೊಟ್ಟುಕಾಡ್ ಗೆ ಮಾಹಿತಿ ನೀಡಿದರು. ಜೊತೆಗೆ ಸನಲ್ ಕುಮಾರ್ ಕಳುಹಿಸಿದ ಲೊಕೇಷನ್ ಅನ್ನೂ ಹಸ್ತಾಂತರಿಸಿದರು. ರಾಯಭಾರ ಕಚೇರಿಗೆ ಶಿಹಾಬ್ರೊಂದಿಗೆ ತೆರಳಿದ ಶ್ರೀಕಲಾ ದೂರು ನೀಡಿದ್ದರು. ಕಾನ್ಸುಲರ್ ದೇಶ ಭತಿ ಸಹಾಯದಿಂದ ಹಾಫಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿಯಿತು. ವಿಡಿಯೋ ಕರೆಯ ಸಮಯದಲ್ಲಿನ ಹಲ್ಲೆಕೋರರ ಫೋಟೋ ಸೇರಿದಂತೆ ದೂರನ್ನು ನೀಡಲಾಗಿದ್ದವು.
ಶಿಹಾಬ್ ಅವರ ಸಲಹೆಯ ಪ್ರಕಾರ, ದಮಾಂನಿಂದ ಹಣವನ್ನು ತರಬೇಕಾಗಿದ್ದು, ಅಲ್ಲಿ ವರೆಗೆ ಕಾಯಬೇಕು ಎಂದು ಸನಲ್ ಕುಮಾರ್ ಅವರ ಪತ್ನಿ ದಾಳಿಕೋರರಿಗೆ ಮಾಹಿತಿ ನೀಡಿದರು. ಸನಲ್ ಕುಮಾರ್ ಅವರ ಸಂಬಂಧಿಕರು ಭಾರತದ ವಿದೇಶಾಂಗ ಸಚಿವ ಮತ್ತು ಸಂಸದ ಹೈಬಿ ಈಡನ್ ರಿಗೆ ದೂರು ನೀಡಿದ್ದರು.
ಸನಲ್ ಕುಮಾರ್ ನೀಡಿದ ಫೋನ್ ಲೊಕೇಷನ್ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. ಸನಲ್ ಕುಮಾರ್ ಅವರನ್ನು ಹೋಟೆಲ್ ಕೋಣೆಯಲ್ಲಿ ಬಂಧಿಸಿಟ್ಟ ಆರು ಆರೋಪಿಗಳನ್ನು ಪೊಲೀಸರು.ಬಂಧಿಸಿದ್ದಾರೆ. ಆರೋಪಿಗಳ ಪೈಕಿ ಒಬ್ಬಾತ ಹೊರಗೆ ಹೋದ ಕಾರಣ ಆತನನ್ನು ಬಂಧಿಸಲು ಸಾಧ್ಯವಾಗಲಿಲ್ಲ.
ಹೋಟೆಲ್ ಮಾಲೀಕ ಮತ್ತು ಆರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನಂತರ ಅವರನ್ನು ರಿಮಾಂಡ್ ಮಾಡಲಾಗಿದೆ. ಸನಲ್ ಕುಮಾರ್ ಅವರ ದೇಹ, ಮುಖ ಮತ್ತು ಇತರ ಕಡೆ ಗಾಯಗಳಾಗಿದ್ದು, ಕಟ್ಟಡದ ಮೇಲ್ಭಾಗಕ್ಕೆ ಕೊಂಡೊಯ್ದು ಆಕ್ರಮಣಗೈಯ್ಯಲಾಯ್ತು ಎಂದು ಸನಲ್ ಕುಮಾರ್ ಹೇಳಿದ್ದಾರೆ.