ಶಾರ್ಜಾ: ಭವ್ಯ ಭಾರತದ 73ನೇ ಸ್ವಾತಂತ್ರ್ಯೊತ್ಸವವನ್ನು “ಮರೀಚಿಕೆಯಾಗದಿರಲಿ ಭಾರತದ ಸ್ವಾತಂತ್ರ್ಯ”ಎಂಬ ಶೀರ್ಷಿಕೆಯಡಿಯಲ್ಲಿ ದಿನಾಂಕ 16-8-19 ರಂದು ಕೆ.ಸಿ.ಎಫ್ ಶಾರ್ಜಾ ವಲಯ ಸಮಿತಿಯ ವತಿಯಿಂದ ಇದರ ಪ್ರಧಾನ ಕಾರ್ಯದರ್ಶಿ ರಜಬ್ ಮುಹಮ್ಮದ್ ಉಚ್ಚಿಲರವರ ಘನ ಅಧ್ಯಕ್ಷತೆಯಲ್ಲಿ ಅಬ್ದುಲ್ ರಜಾಕ್ ಹುಮೈದಿಯವರ ರೋಲಾ ನಿವಾಸದಲ್ಲಿ ನಡೆಸಲಾಯಿತು.
ಬಹು! ಅಶ್ರಫ್ ಮುಸ್ಲಿಯಾರ್ ಅಳಿಕೆಯವರ ದುಆದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕಛೇರಿ ವಿಭಾಗದ ಕಾರ್ಯದರ್ಶಿ ತಾಜುದ್ದೀನ್ ಅಮ್ಮುಂಜೆಯವರು ಸ್ವಾಗತಿಸಿ, ಇಕ್ಬಾಲ್ ಮಂಜನಾಡಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ರಜಬ್ ಮುಹಮ್ಮದ್ ಉಚ್ಚಿಲರವರು ಅಧ್ಯಕ್ಷ ಭಾಷಣಗೈದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಕೆ.ಸಿ.ಎಫ್ ಯು.ಎ.ಇ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಬಹು! ಮೂಸಾ ಹಾಜಿ ಬಸಾರಾರವರು ಮುಖ್ಯ ಭಾಷಣ ಮಾಡಿದರು.
ನಂತರ ಪಾರುಕ್ ಕುಂಜಿಲಾರವರು ತಮ್ಮ ಮಧುರ ಕಂಠದಿಂದ ಸ್ವಾತಂತ್ರ್ಯದ ಬಗ್ಗೆ ಹಾಡಿ, ಹನೀಫ್ ಬಸರಾ, ತಾಜುದ್ದೀನ್ ಅಮ್ಮುಂಜೆ ಮತ್ತು ನಝೀಮ್ ಮುಈನಿ ಆಶಂಸೆ ಭಾಷಣ ಮಾಡಿದರು. ನಂತರ ನಡೆದ ಕ್ವಿಝ್ ಸ್ಪರ್ಧೆಯಲ್ಲಿ ಮುಸ್ತಫಾ ಪಂಜ ಮೊದಲ ಸ್ಥಾನ ಪಡೆದರು.
ಬಳಿಕ ರಾಷ್ಟ್ರ ಗೀತೆಯನ್ನು ಹಾಡಿ, ಸಿಹಿ ತಿಂಡಿ ಹಂಚಲಾಯಿತು. ಕೊನೆಯಲ್ಲಿ ಅಬ್ದುಲ್ ರಝಾಖ್ ಹುಮೈದಿಯವರು ಧನ್ಯವಾದ ಕೋರಿ ಮೂರು ಸ್ವಲಾತಿನೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.















ಇನ್ನಷ್ಟು ಸುದ್ದಿಗಳು
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ