✍ ಕೆ.ಎ.ಅಬ್ದುಲ್ ಅಝೀಝ್ ಪುಣಚ
ಭಾರತ ಪುರಾತನ ನಾಡು. ಭಾರತದಂಥಾ ಪ್ರಾಚೀನ ಇತಿಹಾಸವಿರುವ ದೇಶ ಜಗತ್ತಿನಲ್ಲಿ ಅಪರೂಪ.ಭಾರತದ ಸಂಪತ್ಸಮೃದ್ಧಿ ವಿದೇಶಿ ಯರನ್ನು ತುಂಬಾ ಆಕರ್ಷಿಸಿತ್ತು. ದ್ರಾವಿಡರು ಭಾರತದ ಆದಿ ನಿವಾಸಿ ಗಳು.ನಂತರ ನಂತರ ಆರ್ಯರು,ಫ್ರೆಂಚರು,ಡೆಚ್ಚರು ಹೀಗೆ ಹಲವರು ಭಾರತದಲ್ಲಿ ವಾಸಿಸಿದರು.
1498 ರಲ್ಲಿ ಪೋರ್ಚುಗೀಸ್ ನಾವಿಕ ವಾಸ್ಕೋಡಗಾಮ ಕಲ್ಲಿಕೋಟೆ ಸಮುದ್ರ ತೀರದಲ್ಲಿ ಬಂದಿಳಿಯುವ ಮೂಲಕ ಭಾರತಕ್ಕೆ ಯುರೋಪಿಯನ್ನರ ಆಗಮನವಾಯಿತು.
1600 ರಲ್ಲಿ ವ್ಯಾಪಾರದ ನೆಪದಲ್ಲಿ ಬ್ರಿಟಿಷರು ಕೂಡ ಆಗಮಿಸುವುದರೊಂದಿಗೆ ಭಾರತ ವಿದೇಶಿಯರ ಸಂಗಮ ಭೂಮಿಯಾಯಿತು.
ಸಂಶಯ ಬಾರದಿರಲು ” ಈಸ್ಟ್ ಇಂಡಿಯಾ ಕಂಪನಿ ” ಹೆಸರಲ್ಲಿ ಬ್ರಿಟಿಷರು ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಿದ್ದರು.
ಆದರೆ ಉದ್ದೇಶ, ಭಾರತದ ಅಮೂಲ್ಯ ಸಂಪತ್ತುಗಳನ್ನು ಬ್ರಿಟನ್ ಗೆ ಸಾಗಿಸುವುದಾಗಿತ್ತು !
1757 ರಲ್ಲಿ ಬಂಗಾಳದ ಮುಸ್ಲಿಂ ಗವರ್ನರ್, ನವಾಬ್ ಸಿರಾಜುದ್ದೌಲ ರನ್ನು ಪ್ಲಾಸಿ ಕದನದಲ್ಲಿ ಸೋಲಿಸುವ ಮೂಲಕ ಪ್ರಥಮವಾಗಿ ಬಿಳಿಯರು ಭಾರತದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿದರು.
ಮೊಗಲ್ ರಾಜವಂಶ ಬ್ರಿಟಿಷ್ ವಸಾಹತು ಶಾಹಿಗಳ ವಿರುದ್ಧ ಕಠಿಣ ಹೋರಾಟ ನಡೆಸಿದರು.
ಆದರೂ ಭಾರತದ ವಿವಿಧ ಪ್ರಾಂತ್ಯಗಳ ರಾಜರುಗಳನ್ನು ಪರಸ್ಪರ ಕಚ್ಚಾಡಿಸುವ ಮೂಲಕ ಹಾಗೂ ಕೆಲವು ಅಧಿಕಾರದಾಹಿಗಳನ್ನು ತಮ್ಮ ಸುಪರ್ದಿಗೆ ತರುವ ಮೂಲಕ ಸಂಪೂರ್ಣವಾಗಿ ಭಾರತವನ್ನು ತಮ್ಮ ಕಪಿಮುಷ್ಟಿಗೆ ತರುವಲ್ಲಿ ಬಿಳಿ ಇಲಿಗಳು ಕೊನೆಗೂ ಯಶಸ್ವಿಯಾದರು!
ಬ್ರಿಟಿಷರು ಭಾರತದ ಅಮೂಲ್ಯ ಸಂಪತ್ತುಗಳನ್ನು ಬ್ರಿಟನ್ ಗೆ ಸಾಗಿಸಿ ಭಾರತೀಯ ಪೌರರನ್ನು ಎರಡನೇ ದರ್ಜೆ ಯವರಾಗಿ ಕಂಡರು.
ಅನ್ಯಾಯ, ಅಕ್ರಮ ಮೂಲಕ ಭಾರತೀಯ ಸಮುದಾಯವನ್ನು ಹೀನವಾಗಿ ನಡೆಸಿಕೊಂಡರು.
ಈ ಅನ್ಯಾಯದ ವಿರುದ್ಧ ಭಾರತೀಯರು ಒಗ್ಗಟ್ಟಾದರು.
1857 ರಲ್ಲಿ ಭಾರತೀಯ ಸಮುದಾಯದ ಬ್ರಿಟಿಷ್ ವಿರೋಧ ಹೊಸ ರೂಪ ಪಡೆಯಿತು.
ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಅಹಮದ್ ಶಾ,ತಾಂತಿಯ ಟೋಪಿ,ಕನ್ವರ್ ಸಿಂಗ್, ನಾನಾ ಸಾಹೇಬ್,ಫಿರೋಝ್ ಶಾ ಮೊದಲಾದ ಧೀರ ದೇಶಪ್ರೇಮಿ ಗಳು ಭಾರತದ ವಿವಿಧ ಕಡೆಗಳಲ್ಲಿ ವಿವಿಧ ಚಳವಳಿಗಳಿಗೆ ನಾಯಕತ್ವ ಕೊಟ್ಟರು.
1885 ರಲ್ಲಿ ದೇಶದ ವಿವಿಧ ರಾಜ್ಯಗಳ ನಾಯಕರು ಒಂದುಗೂಡಿ ಎ.ಒ.ಹ್ಯೂಂ ನೇತೃತ್ವದಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸ್ಥಾಪಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ರೂಪ ನೀಡಿದರು.
1920 ರಲ್ಲಿ ಭಾರತದ ಭರವಸೆಯ ನಾಯಕ ಮಹಾತ್ಮ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷರಾಗುವುದರೊಂದಿಗೆ ಸ್ವಾತಂತ್ರ್ಯ ಹೋರಾಟದ ಕಿಚ್ಚು ಒಮ್ಮೆಲೇ ದೇಶದಲ್ಲೆಡೆ ಹಬ್ಬಿತು!!!
ಗಾಂಧೀಜಿಯವರು ಅಸಹಕಾರ ಚಳವಳಿ ಮೂಲಕ ಬ್ರಿಟಿಷ್ ಆಡಳಿತ ವಿರುದ್ಧ ಸಮರ ಸಾರಿದರು.
ಗಾಂಧೀಜಿಯವರ ಆಹ್ವಾನದ ಮೇರೆಗೆ ದೇಶದ ಜನತೆ ಒಟ್ಟಾಗಿ ಬ್ರಿಟಿಷರನ್ನು ಬಹಿಷ್ಕರಿಸಿದರು.
ಅಧ್ಯಾಪಕರು, ವಿದ್ಯಾರ್ಥಿಗಳು, ಕೃಷಿಕರು,ನ್ಯಾಯವಾದಿಗಳು ಎಲ್ಲರೂ ಸ್ವಾತಂತ್ರ್ಯ ಹೋರಾಟದ ಯಜ್ಞ ಕುಂಡಕ್ಕೆ ಧುಮುಕಿದರು.
ವಿಶ್ವ ಮಹಾಕವಿ ಡಾ.ಅಲ್ಲಾಮ ಮುಹಮ್ಮದ್ ಇಖ್ಬಾಲ್ ರ ಸ್ವಾತಂತ್ರ್ಯ ಕವಿತೆಗಳು ದೇಶದ ಜನರಲ್ಲಿ ಇನ್ನಷ್ಟು ಹುರುಪು ಹೆಚ್ಚಿಸಿತು.
” ಸಾರೇ ಜಹಾಂಸೆ ಅಚ್ಚಾ,ಹಿಂದೂ ಸಿತಾನ್ ಹಮಾರ ಹಮಾರ ” ಶಾಂತಿ ಗೀತೆಯು ಎಲ್ಲೆಲ್ಲೂ ಕ್ರಾಂತಿಯ ಅಲೆಯೆಬ್ಬಿಸಿತು.
1929 ರಲ್ಲಿ ಪಂಡಿತ್ ಜವಹರಲಾಲ್ ನೆಹರೂ ಅಧ್ಯಕ್ಷತೆಯಲ್ಲಿ ನಡೆದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಭೆಯಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ) ಚಳವಳಿ ಆರಂಭಿಸಲಾಯಿತು.
ಭಾರತವನ್ನು ಸಂಪೂರ್ಣವಾಗಿ ಬ್ರಿಟಿಷ್ ಮುಕ್ತ ಮಾಡಿ ಸ್ವಾತಂತ್ರ್ಯ ಪಡೆಯುವುದು ಈ ಚಳವಳಿಯ ಉದ್ದೇಶವಾಗಿತ್ತು.
ಮೌಲಾನಾ ಅಬುಲ್ ಕಲಾಂ ಆಝಾದ್ ರವರು ತಮ್ಮ ಸೇವೆ ದೇಶಕ್ಕೆ ಅಗತ್ಯವಿದೆಯೆಂದು ಮನಗಂಡಾಗ ಉತ್ತರಪ್ರದೇಶದ ಮಸೀದಿಯೊಂದರ ಧರ್ಮಗುರು ಸ್ಥಾನಕ್ಕೆ ರಾಜೀನಾಮೆ ನೀಡಿ ಮಹಾತ್ಮಾ ಗಾಂಧೀಜಿಯವರ ಆಪ್ತರಾಗಿ ಸ್ವಾತಂತ್ರ್ಯ ಹೋರಾಟಗಾರ ರಂಗಕ್ಕೆ ಧುಮುಕಿದರು.
ಮೌಲಾನಾ ಮುಹಮ್ಮದಲಿ,ಮೌಲಾನ ಶೌಕತ್ತಲಿ ಮೊದಲಾದವರು ಕೂಡ ಸ್ವಾತಂತ್ರ್ಯ ಹೋರಾಟ ರಂಗದ ಮುಂಚೂಣಿ ನಾಯಕರಾದರು.
ಹಿಂದೂ ,ಮುಸ್ಲಿಂ ಐಕ್ಯತೆ ಬ್ರಿಟಿಷರ ನಿದ್ದೆಗೆಡಿಸಿತು.
ಉಪ್ಪು ಸತ್ಯಾಗ್ರಹ, ಕಾನೂನು ಉಲ್ಲಂಘನೆ, ವಿದೇಶಿ ವಸ್ತುಗಳ ಬಹಿಷ್ಕಾರ ಮೂಲಕ ದೇಶಪ್ರೇಮಿ ಗಳು ಬ್ರಿಟಿಷ್ ಅಕ್ರಮ ಆಡಳಿತದ ಬುಡಕ್ಕೆ ಕೊಡಲಿಯೇಟು ನೀಡಿದರು.
ಭಾರತೀಯರನ್ನು ಬ್ರಿಟಿಷರು ವಿನಾಕಾರಣ ಜೈಲಿಗಟ್ಟಿದರು.
ದೇಶದ ಬಹುತೇಕ ಜೈಲುಗಳು ದೇಶಪ್ರೇಮಿ ಹೋರಾಟಗಾರರಿಂದ ತುಂಬಿ ಹೋಯಿತು.
1942 ರಲ್ಲಿ ಸುಭಾಷ್ ಚಂದ್ರ ಬೋಸ್ ನೇತೃತ್ವದಲ್ಲಿ ರಚಿಸಿದ ಇಂಡಿಯನ್ ನ್ಯಾಷನಲ್ ಆರ್ಮಿ,ಬ್ರಿಟಿಷರಿಗೆ ಮತ್ತೊಂದು ಆಘಾತ ನೀಡಿತು.
ಭಾರತದ ಧೀರ ಕಲಿಗಳ ಮುಂದೆ ನಿಂತು ಹೋರಾಡಲಾಗದೆ ಮಂಡಿಯೂರಿದ ಬ್ರಿಟಿಷ್ ಆಡಳಿತ 1947 ಫೆಬ್ರವರಿ 20 ರಂದು ಬ್ರಿಟಿಷ್ ಪ್ರಧಾನ ಮಂತ್ರಿ ಆಟ್ಲಿ ನೇತೃತ್ವದಲ್ಲಿ ಸಭೆ ಸೇರಿ 1948 ರ ಮೊದಲು ಆಡಳಿತವನ್ನು ಭಾರತೀಯರಿಗೆ ಒಪ್ಪಿಸುವ ಮಹತ್ವದ ತೀರ್ಮಾನ ಕೈಗೊಂಡಿತು.
ಮಾರ್ಚ್ 14 ರಂದು ಭಾರತದ ವೈಸ್ರಾಯ್ ಆಗಿ ಲಾರ್ಡ್ ಮೌಂಟ್ ಬ್ಯಾಟನ್ ಅಧಿಕಾರ ವಹಿಸಿಕೊಂಡರು.
ಆಗಸ್ಟ್ 14 ರಂದು ಭಾರತಕ್ಕೆ ಅಧಿಕಾರ ಹಸ್ತಾಂತರ ಮಾಡುವ ಐತಿಹಾಸಿಕ ಘೋಷಣೆ ಯನ್ನು ಅವರು ಮೊಳಗಿಸಿದರು.
1947 ಆಗಸ್ಟ್ 14 ರ ಮಧ್ಯರಾತ್ರಿ ಭಾರತ ಸ್ವತಂತ್ರ ಗೊಂಡಾಗ ಪಾಕಿಸ್ತಾನ ಕೂಡ ಅಸ್ತಿತ್ವಕ್ಕೆ ಬಂತು.
ಒಂದೆಡೆ ಬಿಳಿಯರು ಬಿಲ ಸೇರಿದ ಸಂತೋಷ ವಾದರೆ ಇನ್ನೊಂದೆಡೆ ಭಾರತದಿಂದ ಪಾಕಿಸ್ತಾನ ಬೇರ್ಪಟ್ಟ ದುಃಖ ವಾರ್ತೆಯನ್ನು ಕೂಡ ದೇಶದ ಜನರಿಗೆ ಕೇಳಬೇಕಾಗಿ ಬಂತು.
ಸೌಹಾರ್ದತೆಯಿಂದ ಬದುಕುತ್ತಿದ್ದ ಭಾರತೀಯರಿಗೆ ಭಾರತ-ಪಾಕಿಸ್ಥಾನ ವಿಭಜನೆ ಪರಸ್ಪರ ವಿದ್ವೇಷಕ್ಕೆ ಕಾರಣವಾಯಿತು.
ಭಾರತದ ಹಲವೆಡೆ ಗಲಭೆಗಳುಂಟಾದವು.
ಭಾರತ ಸ್ವಾತಂತ್ರ್ಯ ಪಡೆದ ಸಂಭ್ರಮದಲ್ಲಿದ್ದಾಗ ಮಹಾತ್ಮಾ ಗಾಂಧಿಯವರು 24 ಗಂಟೆಗಳ ನಿರಾಹಾರ ಸತ್ಯಾಗ್ರಹ ದಲ್ಲಿದ್ದರು!
ಗಲಭೆ ನಿಲ್ಲಿಸುವ ತನಕ ಆಹಾರ ಸೇವಿಸುವುದಿಲ್ಲವೆಂದು ಗಾಂಧೀಜಿಯವರು ಘೋಷಿಸಿದಾಗ ಗಲಭೆಕೋರರು ತಣ್ಣಗಾದರು.
ಬ್ರಿಟಿಷ್ ಸಾಮ್ರಾಜ್ಯದ ನಿದ್ದೆಗೆಡಿಸಿದ ವಿಶ್ವ ವಿಖ್ಯಾತ ಸ್ವಾತಂತ್ರ್ಯ ಹೋರಾಟಗಾರ, ಸಂತಪುರುಷ,ಶಹೀದೇ ಮಿಲ್ಲತ್ ಟಿಪ್ಪು ಸುಲ್ತಾನ್ (ರ) ರವರ ಕಥೆ ಅತಿ ರೋಚಕವಾದದು.
ಶ್ರೀರಂಗಪಟ್ಟಣ ದಿಂದ ಆರಂಭವಾದ ಜೈತ್ರಯಾತ್ರೆ ಮಂಗಳೂರು, ವಯನಾಡ್, ತ್ರಿಶೂರ್, ಪಾಲಕ್ಕಾಡ್ ಸಹಿತ ವೇಳೆ ವಿವಿಧೆಡೆಗಳಲ್ಲಿ ಕ್ರಾಂತಿ ಸೃಷ್ಟಿಸಿತು.
ಬ್ರಿಟಿಷ್ ವಿರುದ್ಧ ಹೋರಾಟದ ಮುಂಚೂಣಿ ನಾಯಕರಾಗಿದ್ದ ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ (ರ) ರನ್ನು1799 ಮೇ 4 ರಂದು ಶ್ರೀರಂಗಪಟ್ಟಣದ ಕೋಟೆಯಲ್ಲಿ ಬ್ರಿಟಿಷರು ಸುತ್ತುವರಿದು ಗುಂಡಿನ ಮಳೆಗರೆದರು.
ನಂಬಿಗಸ್ತರಾಗಿದ್ದ ಸೇನಾ ನಾಯಕ ಪೂರ್ಣಯ್ಯ ಹಾಗೂ ಮೀರ್ ಸಾದಿಖ್ ಎಂಬ ಇಬ್ಬರು ದೇಶದ್ರೋಹಿ ಗಳ ವಂಚನೆಯ ಫಲವಾಗಿತ್ತು ಟಿಪ್ಪು ಸುಲ್ತಾನ್ (ರ) ರವರ ಅಂತ್ಯ.
ತನ್ನ ಜೀವನದ ಕೊನೆಯ ನಿಮಿಷದಲ್ಲಿ ಕೂಡ ತನ್ನ ಕೈಗೆ ಸಿಕ್ಕಿದ ಬ್ರಿಟಿಷ್ ಸೈನಿಕರ ರುಂಡವನ್ನು ಮುಂಡದಿಂದ ಬೇರ್ಪಡಿಸಿದ ಮಹಾನ್ ತ್ಯಾಗಿ ಟಿಪ್ಪು ಸುಲ್ತಾನ್ (ರ) ತನ್ನ ಮರಣದ ನಂತರವೂ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಿಂಹಸ್ವಪ್ನರಾಗಿ ಮಾರ್ಪಟ್ಟರು !
ಮೈಸೂರನ್ನು18 ವರ್ಷ ಹಾಗೂ ಮಲಬಾರನ್ನು 16 ವರ್ಷ ಆಳ್ವಿಕೆ ನಡೆಸಿದಾಗ ಕೃಷಿ, ಸಾರಿಗೆ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಟಿಪ್ಪು ಸುಲ್ತಾನ್ (ರ) ಇಡೀ ಪ್ರಪಂಚ ಭಾರತದತ್ತ ಕಣ್ಣೆತ್ತಿ ನೋಡುವಂತೆ ಮಾಡಿದ್ದರು.
ಒಬ್ಬ ನಿಷ್ಠಾವಂತ ಮುಸ್ಲಿಂ ಆಗಿದ್ದುಕೊಂಡು ಹಿಂದೂ ಬಾಂಧವರನ್ನು ಅತಿಯಾಗಿ ಪ್ರೀತಿಸಿದ ಟಿಪ್ಪು ಸುಲ್ತಾನ್ (ರ) ತನ್ನ ಆಡಳಿತದಲ್ಲಿ ಹಿಂದೂ ನಾಯಕರಾದ ರಂಗನಾಥನ್, ಶ್ರೀನಿವಾಸ,ಮದ್ದಣ್ಣ,ಶ್ರೀನಿವಾಸ ರಾವ್ ಮೊದಲಾದವರಿಗೆ ಪ್ರಮುಖ ಹುದ್ದೆಗಳನ್ನು ನೀಡಿದ್ದರು !
ಶ್ರೀರಂಗಪಟ್ಟಣ ಕೋಟೆಯ ಹಿಂಬದಿಯಲ್ಲಿ ಶ್ರೀ ರಂಗನಾಥ ದೇವಾಲಯ ವನ್ನು ಇಂದಿಗೂ ಕೂಡ ಕಾಣಬಹುದು.
156 ದೇವಾಲಯಗಳಿಗೆ ವಾರ್ಷಿಕ ಧನ ಸಹಾಯ,ಗುರುವಾಯೂರ್ ದೇವಾಲಯ,ವಯನಾಡು ಜೈನ ವಸತಿಗಳಿಗೆ ಟಿಪ್ಪು ಸುಲ್ತಾನ್ (ರ) ಎಷ್ಟೋ ಎಕ್ರೆ ಭೂಮಿಯನ್ನು ದಾನ ಮಾಡಿದ್ದರು.
ಶ್ರಿಂಗೇರಿ ಮಠಕ್ಕೆ ಎಲ್ಲಾ ರೀತಿಯ ರಕ್ಷಣೆ ನೀಡಿದ ಮಹಾನ್ ಸೌಹಾರ್ದ ಪ್ರೇಮಿ ಟಿಪ್ಪು ಸುಲ್ತಾನ್ (ರ) ಯಾವತ್ತೂ ಹಿಂದೂ ದ್ವೇಷಿಯಾಗಿರಲಿಲ್ಲ.
ಟಿಪ್ಪು ಸುಲ್ತಾನ್ ಮತಾಂತರ ಮಾಡಿದ್ದಾರೆ,ಮಂದಿರಗಳನ್ನು ಧ್ವಂಸ ಮಾಡಿದ್ದಾರೆ ಎಂಬೆಲ್ಲಾ ಆರೋಪಗಳು ಕಪೋಲಕಲ್ಪಿತವಾಗಿದ್ದು ಶಾಂತಿ ಸೌಹಾರ್ದತೆಯಿಂದ ಸಹಬಾಳ್ವೆ ನಡೆಸುವ ಭಾರತದ ಹಿಂದೂ ಮುಸ್ಲಿಮರನ್ನು ವಿಭಜಿಸುವ ಷಡ್ಯಂತ್ರ ಈ ಸುಳ್ಳಾರೋಪದ ಹಿಂದಿರುವುದು ಸ್ಪಷ್ಟ.
ಸಹೋದರ, ಸಹೋದರಿಯರಂತೆ ಬಾಳುತ್ತಿದ್ದ ಹಿಂದೂ ,ಮುಸ್ಲಿಂ ಸಮುದಾಯದ ಮಧ್ಯೆ ಕಂದಕ ಸೃಷ್ಟಿಸಲು ಬ್ರಿಟಿಷರೇ ಹಲವು ವ್ಯವಸ್ಥಿತ ಷಡ್ಯಂತ್ರ ಅಂದೇ ನಡೆಸಿದ್ದರು.
ಹಿಂದೂ ಗಳಗೆ ಪವಿತ್ರ ವಾದ ಕಾರಣ ಗೋವುಗಳನ್ನು ಮುಸ್ಲಿಮರು ತಿನ್ನುತ್ತಾರೆಂದು ಅಂದಿನ ಹಿಂದೂಗಳನ್ನು ಬ್ರಿಟಿಷರು ನಂಬಿಸಿದ್ದರು.
ಆದರೆ ಮುಸ್ಲಿಮರ ಆಹಾರ ಕ್ರಮದಲ್ಲಿ ಗೋವು ಕೂಡ ಇದೆ ಎಂಬುದನ್ನು ಖುರ್ ಆನ್ ಸೂಚಿಸುತ್ತದೆ.
ಇನ್ನೊಬ್ಬರನ್ನು ಕೆರಳಿಸಲು ಯಾವುದೇ ಒಂದು ಕೃತ್ಯ ಮಾಡುವಷ್ಟು ಅವಿವೇಕಿಗಳು ಮುಸ್ಲಿಮರಲ್ಲ.
ದುರದೃಷ್ಟಕರ ವೆಂದರೆ ಅಂದು ಆರಂಭವಾದ ಕಚ್ಚಾಟ ಇಂದಿನ ತನಕ ವಿವಿಧ ನೆಪಗಳಲ್ಲಿ ಆಗಾಗ ಭಾರತದಾದ್ಯಂತ ಪ್ರತ್ಯಕ್ಷ ವಾಗುತ್ತಿದೆ.
ಒಂದಾಗಿ ದೇಶ ಕಟ್ಟಬೇಕಾದವರು ದೇಶವನ್ನು ಒಡೆಯುವ ದಯನೀಯ ಸ್ಥಿತಿ ಇಂದಿಗೂ ಜೀವಂತವಾಗಿದೆ.
ಇದಕ್ಕೆಲ್ಲ ವಿರಾಮ ಹಾಕಿ ಮಹಾತ್ಮಾ ಗಾಂಧಿಯವರು ಕಂಡ ಕನಸಿನ ಸೌಹಾರ್ದ ಭಾರತ ಕಟ್ಟಲು ಹಿಂದೂ ಮುಸ್ಲಿಂ, ಕ್ರೈಸ್ತ ಸಹಿತ ಭಾರತದ ಎಲ್ಲಾ ಸಮುದಾಯ ಬಾಂಧವರು ಒಂದೇ ತಂದೆ ತಾಯಿಯರ ಮಕ್ಕಳಂತೆ ಪರಸ್ಪರ ಕೈ ಜೋಡಿಸಬೇಕು.
ಭಾರತದ ಸರ್ವ ನಾಗರಿಕರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.
🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
☪🕉✝☪🕉✝☪🕉✝☪🕉