ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ “ಈದ್ ಮುಬಾರಕ್”ಶುಭಾಶಯಗಳೊಂದಿಗೆ,
ಕೆ.ಸಿ. ಇಸ್ಮಾಯಿಲ್ ಹಾಜಿ(ಅಧ್ಯಕ್ಷರು, ಕಿನ್ಯ ಜಮಾಅತ್ GCC ಸಮಿತಿ)
ಪವಿತ್ರ ರಂಜಾನ್ ಮಾಸದ ಶಿಸ್ತು ಮತ್ತು ಭಕ್ತಿಯ ಹಾದಿಯಲ್ಲಿ ಸಾಗಿ ಬಂದ ನಾವೆಲ್ಲರೂ ಇಂದು ಈದ್ ಸಂಭ್ರಮದಲ್ಲಿದ್ದೇವೆ. ಆದರೆ, ವಿಶ್ವದ ಕೆಲವು ಭಾಗಗಳಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಸಂಘರ್ಷದ ಕಾರ್ಮೋಡಗಳು ನಮ್ಮ ಮನಸ್ಸಿನಲ್ಲಿ ಆತಂಕ ಮೂಡಿಸಿರುವುದು ಸುಳ್ಳಲ್ಲ.
ಈ ಸಂಕಷ್ಟದ ಸಮಯದಲ್ಲಿ, ಈದ್ ಹಬ್ಬದ ಈ ಸುಸಂದರ್ಭದಲ್ಲಿ, ಜಗತ್ತಿನಾದ್ಯಂತ ನಡೆಯುತ್ತಿರುವ ಯುದ್ಧಗಳು ನಿಂತು ಶಾಂತಿ ನೆಲೆಸಲಿ ಎಂದು ನಾವೆಲ್ಲರೂ ಒಕ್ಕೊರಲಿನಿಂದ ಪ್ರಾರ್ಥಿಸೋಣ.
ಗಡಿ ಮತ್ತು ಸಿದ್ಧಾಂತಗಳಿಗಿಂತ ಮನುಷ್ಯತ್ವ ದೊಡ್ಡದು. ಸಂಕಷ್ಟದಲ್ಲಿರುವವರಿಗೆ ನೆರವಾಗುವ ಗುಣ ನಮ್ಮ ಹಬ್ಬದ ಆಚರಣೆಯ ಭಾಗವಾಗಲಿ.
ಪ್ರಸ್ತುತ ಜಾಗತಿಕ ಸ್ಥಿತಿಗತಿಗಳು ನಮ್ಮ ಮೇಲೆ ಆರ್ಥಿಕವಾಗಿ ಅಥವಾ ಮಾನಸಿಕವಾಗಿ ಪ್ರಭಾವ ಬೀರಬಹುದು. ಅಂತಹ ಸಂದರ್ಭದಲ್ಲಿ ಅನಿವಾಸಿ ಬಾಂಧವರು ಪರಸ್ಪರ ಧೈರ್ಯ ತುಂಬುತ್ತಾ, ಒಗ್ಗಟ್ಟಿನಿಂದ ಇರೋಣ.ಅನಿವಾಸಿ ಸಮುದಾಯವು ಯಾವಾಗಲೂ ಶಾಂತಿ ಮತ್ತು ಸಹಬಾಳ್ವೆಯ ಸಂಕೇತ. ಯುದ್ಧದ ಭೀತಿಯ ನಡುವೆಯೂ ನಮ್ಮ ನಡುವಿನ ಪ್ರೀತಿ ಮತ್ತು ವಿಶ್ವಾಸ ಕುಂದದಂತೆ ನೋಡಿಕೊಳ್ಳೋಣ.
ಪ್ರೀತಿಯ ಅನಿವಾಸಿಗಳೇ,
ದೂರದ ದೇಶದಲ್ಲಿ ನಮ್ಮ ಕುಟುಂಬದ ಸುಖಕ್ಕಾಗಿ ಶ್ರಮಿಸುತ್ತಿರುವ ನಮಗೆ, ಈ ಹಬ್ಬವು ಮಾನಸಿಕ ನೆಮ್ಮದಿಯನ್ನು ನೀಡಲಿ. ಸುಳ್ಳು ಸುದ್ದಿಗಳನ್ನು ಹಂಚಬೇಡಿ ಮತ್ತು ನಂಬಬೇಡಿ. ನೀವು ನೆಲೆಸಿರುವ ರಾಷ್ಟ್ರಗಳ ಕಾನೂನನ್ನು ಗೌರವಿಸಿ, ಪಾಲಿಸುತ್ತಾ ಈದ್ ಹಬ್ಬವನ್ನು ಆಚರಿಸಿ. ಗಲ್ಫ್ ರಾಷ್ಟ್ರಗಳಲ್ಲಿ ಅಲ್ಲಾಹನು ಶಾಂತಿಯನ್ನು ಕರುಣಿಸಲಿ ಹಾಗೂ ಬರ್ಕತ್ ನೀಡಲಿ.
ಕಿನ್ಯಾ ಜಮಾಅತ್ GCC ಸಮಿತಿ
ನಮ್ಮ ಸಮಿತಿಯು ಹಲವಾರು ಮಹತ್ವದ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅವುಗಳನ್ನು ಹಂತ ಹಂತವಾಗಿ ಕಾರ್ಯಗತಗೊಳಿಸಬೇಕಿದೆ.
ಬರುವ ಎಪ್ರಿಲ್ ತಿಂಗಳಲ್ಲಿ ನಮ್ಮ ಕೇಂದ್ರ ಮದರಸ ವಠಾರದಲ್ಲಿ ‘ಗಲ್ಫ್ ಮೀಟ್’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಈ ಸಭೆಯಲ್ಲಿ ನಿಮ್ಮ ಕಷ್ಟ-ಸುಖಗಳ ಬಗ್ಗೆ ಚರ್ಚಿಸಲಾಗುವುದು. ರಜೆಯಲ್ಲಿ ಊರಿಗೆ ಬಂದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಹಕರಿಸಿ. ಗಲ್ಫ್ನಲ್ಲಿರುವವರನ್ನು ‘ಝೂಮ್’ (Zoom) ಮೂಲಕ ಈ ಸಭೆಯಲ್ಲಿ ಸೇರಿಸುವ ಉದ್ದೇಶ ನಮ್ಮದಾಗಿದೆ. ನಮ್ಮ ಜಮಾಅತಿನ ಪ್ರತಿಯೊಂದು ಕುಟುಂಬವನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಲಿಷ್ಠಗೊಳಿಸಲು ಮುಂದಿನ ದಿನಗಳಲ್ಲಿ ವಿಶೇಷ ಯೋಜನೆಗಳನ್ನು ರೂಪಿಸಲಾಗುವುದು.
ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ “ಈದ್ ಮುಬಾರಕ್”
ಶುಭಾಶಯಗಳೊಂದಿಗೆ,
ಕೆ.ಸಿ. ಇಸ್ಮಾಯಿಲ್ ಹಾಜಿ
(ಅಧ್ಯಕ್ಷರು, ಕಿನ್ಯ ಜಮಾಅತ್ GCC ಸಮಿತಿ)

















ಇನ್ನಷ್ಟು ಸುದ್ದಿಗಳು
‘ಇಸ್ಲಾಂ ಮತ್ತು ಕಾರ್ಮಿಕರ ಘನತೆ’ – ಇದು ಕೇವಲ ರಜೆಯಲ್ಲ,ಬದುಕಿನ ದಾರಿ!
ಅನಿವಾಸಿಗಳಿಗಾಗಿ ಜಾಗೃತಿ ಸಂದೇಶ: “ಸಂಯಮವೇ ಸುಕ್ಷೇಮ”-ಕ್ಷಣಿಕ ಕೋಪಕ್ಕೆ ಬಲಿಯಾಗಬೇಡಿ
ವಿಶೇಷ ವರದಿ: ಅನಿವಾಸಿ ಕನ್ನಡಿಗರ ಬದುಕು – ಆಡಂಬರದ ಆಕರ್ಷಣೆಗಿಂತ ಭವಿಷ್ಯದ ಭದ್ರತೆ ಮುಖ್ಯ
ಅಲ್ಲಾ ಸ್ವಾಮಿ, ಯುದ್ಧಕ್ಕೆ ಯಾಕೆ ಹುಲ್ಲು?” ಡಿ.ಪಿ ಬೈತಾರ್
ವಾರದೊಳಗೆ ಮೂರು ಆತ್ಮಹತ್ಯೆ ಪ್ರಕರಣ!- ಮುಸ್ಲಿಂ ಯುವಕರಿಗೇನಾಗಿದೆ..?
ನಿಮ್ಮ ಕಷ್ಟಗಳಿಗೆ ಪರಿಹಾರ ಬೇಕೇ..? ಈ ಮಸೀದಿಗೆ ಬನ್ನಿರಿ….!!!
ಸಮಸ್ತ: ಶತಮಾನೋತ್ಸವದ ಹೆಜ್ಜೆ ಗುರುತುಗಳು
ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ಮೂರನೇ ಕೇರಳ ಯಾತ್ರೆ- “ಮನುಷ್ಯರೊಂದಿಗೆ” ಎಂಬ ಮಾನವೀಯ ಸಂದೇಶದ ಮಹಾ ಪಯಣ
‘ಬೆಲ್ಯೆಚ್ಚ ಅಸ್ಸಲಾಮು ಅಲೈಕುಂ’ ಪ್ರೀತಿಯ ಅಣ್ಣನ ಖಬರಿನ ಬಳಿ ತಂಗಿಯ ಸಲಾಂ
ಮುಅಲ್ಲಿಮ್ ವಿಭಾಗದ ಪ್ರತಿಭೆಗಳನ್ನು ಸಮುದಾಯ ಗುರುತಿಸಲಿ