ಮಕ್ಕಾ: ಕೆ.ಸಿ.ಎಫ್ ಮಕ್ಕತ್ತುಲ್ ಮುಕರ್ರಮಃ ಹರಮ್ ಯೂನಿಟ್ ವತಿಯಿಂದ H.V.C ಹಜ್ಜ್ ಸ್ವಯಂ ಸೇವಕರಿಗೆ ಬಹು| ಶಾಫಿ ಸಖಾಫಿ ಮುಂಡಂಬರ ಕೇರಳ ಇವರು ಬಹಳ ಸಂಕ್ಷಿಪ್ತವಾಗಿ ಹಜ್ಜ್ ತರಗತಿಯನ್ನು ನಡೆಸಿಕೊಟ್ಟರು.
ಭಾರತ ಹಾಗೂ ವಿಶ್ವದ ವಿವಿಧ ದೇಶಗಳಿಂದ ಹಜ್ಜ್ ಕರ್ಮವನ್ನು ನಿರ್ವಹಿಸಲು ಆಗಮಿಸುವ ಅಲ್ಲಾಹನ ಅತಿಥಿಗಳಾದ ಹಾಜಿಗಳ ಸೇವೆಗೆ ಮಕ್ಕಾ ಹಾಗೂ ಮದೀನಾದಲ್ಲಿ ಆಹೋರಾತ್ರಿ ಸನ್ನದ್ಧರಾದ HVC ಸ್ವಯಂ ಸೇವಕರ ಕಾರ್ಯಾಚರಣೆಯನ್ನು ಉಸ್ತಾದರು ಪ್ರಶಂಶಿಸಿದರು.

ಕಾರ್ಯಕ್ರಮವನ್ನು ಪವಿತ್ರ ಖರ್ಆನ್ ವಾಕ್ಯದಿಂದ ಉದ್ಘಾಟಿಸಿ ಮಾತಾನಾಡಿದ ಉಮ್ಮರ್ ಖಾಮಿಲ್ ಸಖಾಫಿ ಪರಪ್ಪು, ಹಜ್ಜ್ ಸ್ವಯಂ ಸೇವಕರಿಗೆ ಅಲ್ಲಾಹನು ನೀಡುವ ಮಹತ್ವಗಳನ್ನು ವಿವರಿಸಿದರು.
HVC ಕೋಡಿನೇಟರ್ ಇಬ್ರಾಹಿಂ ಕಿನ್ಯ ರವರು ಕಾರ್ಯಕ್ರಮಕ್ಕೆ ಶುಭಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹನೀಫ್ ಸಖಾಫಿ ಬೋಳ್ಮಾರ್ ವಹಿಸಿದರು.ವೇದಿಕೆಯಲ್ಲಿ ಮೂಸಾ ಹಾಜಿ ಕಿನ್ಯ ಉಪಸ್ಥಿತರಿದ್ದರು.

ಶಿಕ್ಷಣ ಇಲಾಖೆ ಪ್ರ.ಕಾರ್ಯದರ್ಶಿ ಮುಹಮ್ಮದ್ ಕಲಂದರ್ ಶಾಫೀ ಅಸೈಗೋಳಿ ಸ್ವಾಗತಿಸಿ ಮರ್ಹೂಂ ಜಲಾಲುದ್ದೀನ್ ಸವಾದ್ ಪುಲ್ಲು ಸಾಮಣಿಗೆ ರವರ ಜೀವನ ಶೈಯಲಿಯನ್ನು ವಿವರಿಸಿ ಸಂಘಟನಾ ವಿಷಯದಲ್ಲಿ ಸವಾದ್ ನೊಂದಿಗೆ ತನಗಿದ್ದ ಬಾಂಧವ್ಯತೆಯನ್ನು ನೆನದು ಭಾವುಕರಾದರು.
ಕಾರ್ಯಕ್ರಮದಲ್ಲಿ ಮರ್ಹೂಂ ಸವಾದ್ ರವರ ಹೆಸರಿನಲ್ಲಿ ಬೃಹತ್ ತಹ್ಲೀಲ್ ಸಮರ್ಪಣೆ , ಮಯ್ಯತ್ ನಮಾಜ್ ಹಾಗೂ ಅನ್ನದಾನ ಮಾಡಲಾಯಿತು. ಮುಜೀಬ್ ರಹ್ಮಾನ್ ಹರೇಕಳ ವಂದಿಸಿದರು.















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ