ನವದೆಹಲಿ:ದೇಶದ 17ನೇ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಎನ್ಡಿಎ ಮೈತ್ರಿ ಕೂಟ ಪೂರ್ಣ ಬಹುಮತ ಪಡೆದು ವಿಜಯಪತಾಕೆ ಹಾರಿಸಿದೆ.
ದೇಶದಲ್ಲಿ ಮುಂದಿನ 5 ವರ್ಷ ಚೌಕಿದಾರ್ ಮೋದಿ ಮತ್ತೊಮ್ಮೆ ಅಧಿಕಾರ ನಡೆಸಲಿದ್ದಾರೆ. ಬಹುಮತಕ್ಕೆ 272 ಸೀಟ್ಗಳು ಬೇಕಾಗಿದ್ದು, ಈ ಬಾರಿ ಎನ್ಡಿಎ 350 ಸೀಟ್ಗಳನ್ನ ಗಳಿಸಿದೆ. ಅದರಲ್ಲಿ ಬಿಜೆಪಿಯೊಂದೇ 302 ಸೀಟ್ಗಳನ್ನ ಗೆದ್ದಿದೆ. ಈ ಮೂಲಕ ಎನ್ಡಿಎ ತನ್ನ 2014ರ ಫಲಿತಾಂಶದ ದಾಖಲೆಯನ್ನು ಮುರಿದಿದೆ.
2014ರಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಕೂಟ 336 ಸೀಟ್ಗಳನ್ನ ಗಳಿಸಿತ್ತು. ಅದರಲ್ಲಿ ಬಿಜೆಪಿಯೊಂದೇ 282 ಸೀಟ್ಗಳನ್ನ ತನ್ನದಾಗಿಸಿಕೊಂಡಿತ್ತು. ಇನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಒಟ್ಟಾರೆ 59 ಸೀಟ್ಗಳನ್ನ ಗೆದ್ದರೆ, ಅದರಲ್ಲಿ ಕಾಂಗ್ರೆಸ್ 44 ಸೀಟ್ಗಳನ್ನ ಗಳಿಸಿತ್ತು. 16ನೇ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನ ಖಾಲಿ ಉಳಿದಿತ್ತು. ಯಾಕಂದ್ರೆ ವಿರೋಧ ಪಕ್ಷ ಎಂದು ಪರಿಗಣಿಸಲು ಒಟ್ಟು ಸೀಟ್ಗಳಲ್ಲಿ(545) ಕನಿಷ್ಠ ಶೇ. 10 ರಷ್ಟು ಸೀಟ್ಗಳನ್ನ(55) ಆ ಪಕ್ಷ ಗಳಿಸಿರಬೇಕು. ಆದ್ರೆ ಕಾಂಗ್ರೆಸ್ ಕೇವಲ 44 ಸೀಟ್ಗಳನ್ನ ಮಾತ್ರ ಗಳಿಸಿತ್ತು. ಹೀಗಾಗಿ ಲೋಕಸಭೆಯ ಕಾಂಗ್ರೆಸ್ ನಾಯಕರನ್ನಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನ ಆಯ್ಕೆ ಮಾಡಲಾಗಿತ್ತು.
1984ರ ಚುನಾವಣೆ ನಂತರ ಮೊದಲ ಬಾರಿಗೆ 2014ರಲ್ಲಿ ಪಕ್ಷವೊಂದು ಸಂಪೂರ್ಣ ಬಹುಮತ ಪಡೆದು ದಾಖಲೆ ಬರೆದ ಕೀರ್ತಿ ಬಿಜೆಪಿಯದ್ದಾಗಿತ್ತು. ಅಂದ್ಹಾಗೆ ಇಂದಿರಾಗಾಂಧಿ ನಿಧನದ ನಂತರ 1984ರಲ್ಲಿ ಬಂದ ಚುನಾವಣೆಯಲ್ಲಿ ಕಾಂಗ್ರೆಸ್ ಒಟ್ಟು 514 ಸೀಟ್ಗಳಲ್ಲಿ ಬರೋಬ್ಬರಿ 404 ಸೀಟ್ಗಳನ್ನ ಗೆದ್ದು ಬೀಗಿತ್ತು. ಅಸ್ಸಾಂ ಹಾಗೂ ಪಂಜಾಬ್ ಚುನಾವಣೆ 1985ರವರೆಗೆ ವಿಳಂಬವಾಗಿತ್ತು. ನಂತರ ಅಲ್ಲಿ ನಡೆದ ಚುನಾವಣೆಯಲ್ಲೂ ಕಾಂಗ್ರೆಸ್ 10 ಸೀಟ್ಗಳನ್ನ ಗೆದ್ದು, ಒಟ್ಟು 414 ಸೀಟ್ಗಳನ್ನ ತನ್ನದಾಗಿಸಿಕೊಂಡಿತ್ತು. ಇನ್ನು ಎನ್.ಟಿ ರಾಮರಾವ್ ಅವರ ತೆಲುಗು ದೇಶಂ ಪಾರ್ಟಿ ಆಗ 30 ಸೀಟ್ಗಳನ್ನ ಗೆದ್ದು ಎರಡನೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.















ಇನ್ನಷ್ಟು ಸುದ್ದಿಗಳು
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನ ಹಾರಾಟ ರದ್ದು
ಚೀನಾದಲ್ಲಿ HMPV ವೈರಸ್ ವ್ಯಾಪಕ,ಆಸ್ಪತ್ರೆಗಳು ಫುಲ್: ಆತಂಕ ಬೇಡ- ಕೇಂದ್ರ ಸರ್ಕಾರ
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿ ಖಂಡನೀಯ: ತೆಲಂಗಾಣ ಸಿಎಂಗೆ ಎ ಪಿ ಉಸ್ತಾದ್ ಪತ್ರ
ಲಂಚ: ಮೇಘಾ ಇಂಜಿನಿಯರಿಂಗ್ ವಿರುದ್ಧ ಸಿಬಿಐ ಪ್ರಕರಣ – 966 ಕೋಟಿ ಮೌಲ್ಯದ ಎಲೆಕ್ಟೋರಲ್ ಬಾಂಡ್ಗಳನ್ನು ಖರೀದಿಸಿದ್ದ ಕಂಪನಿ ಮೇಘಾ
ಸಮಗ್ರ ಅಭಿವೃದ್ಧಿ ಗೆ ಅಂಬೇಡ್ಕರ್ ತತ್ವ ಪಾಲನೆ ಅಗತ್ಯ : ದ್ರೌಪದಿ ಮುರ್ಮು
ಹರಿಯಾಣ : ಶಾಲಾ ಬಸ್ ಪಲ್ಟಿ; ಆರು ಮಕ್ಕಳು ಸಾವು ಈದ್ ರಜೆಯಲ್ಲೂ ತೆರೆದಿದ್ದ ಶಾಲೆ!
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಮುಸ್ಲಿಂ 2ಬಿ ಮೀಸಲು ರದ್ಧತಿ ಮತಬ್ಯಾಂಕ್ ಭದ್ರಪಡಿಸುವ ಸರಕಾರದ ನಡೆ ಖಂಡನೀಯ- ಎಸ್ ವೈ ಎಸ್
ದೇವಸ್ಥಾನಕ್ಕೆ ಮಾಂಸ ಎಸೆದು, ಕೋಮುಗಲಭೆ- ಪ್ರಮುಖ ಆರೋಪಿ ಚಂಚಲ್ ತ್ರಿಪಾಠಿ ಬಂಧನ