janadhvani

Kannada Online News Paper

ಉಡುಪಿಯಲ್ಲಿ ರಾಜ್ಯ ಎಸ್ಸೆಸ್ಸೆಫ್ ನಿಂದ ಸ್ಥಾಪಕ ದಿನಾಚರಣೆ ಪ್ರಯುಕ್ತ ಲೀಡರ್ಸ್ ಅಸೆಂಬ್ಲಿ

ಉಡುಪಿ:ಎಸ್ಸೆಸ್ಸೆಫ್ ರಾಜ್ಯ ಸಮಿತಿ ವತಿಯಿಂದ ಎಸ್ಸೆಸ್ಸೆಫ್ ಸ್ಥಾಪಕ ದಿನಾಚರಣೆಯ ಪ್ರಯುಕ್ತ ಲೀಡರ್ಸ್ ಅಸೆಂಬ್ಲಿ ಕಾರ್ಯಕ್ರಮವು ಎಸ್ಸೆಸ್ಸೆಫ್ ರಾಜ್ಯಾಧ್ಯ\nಕ್ಷ ಸಯ್ಯದ್ ಉಮ್ಮರ್ ಅಸ್ಸಖಾಫ್ ಮದನಿ ರವರ ಅಧ್ಯಕ್ಷತೆಯಲ್ಲಿ ಉಡುಪಿಯ ಲಯನ್ಸ್ ಭವನದಲ್ಲಿ ನಡೆಯಿತು.

ಸಯ್ಯದ್ ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ್ ದುಆ: ನಡೆಸಿದರು.

ಎಸ್.ವೈ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಅಬೂ ಸುಫ್ಯಾನ್ ಮದನಿ ಕಾಟಿಪಳ್ಳ ಹಾಗೂ ಇಬ್ರಾಹಿಂ ಸಖಾಫಿ ಕೋಟೂರು ತರಗತಿಯನ್ನು ನಡೆಸಿದರು

ಜಮಾಬ್ ಅಬ್ದುಲ್ ವಹೀದ್ ಸಾಹೆಬ್ ಉಡುಪಿ ಹಾಗೂ ಎಸ್ಸೆಸ್ಸೆಫ್ ಉಡುಪಿ ಜಿಲ್ಲಾಧ್ಯಕ್ಷ ಮುಹಮ್ಮದ್ ಶಬೀರ್ ಸಖಾಫಿ ಪಣಿಯೂರು ಸಂದೇಶ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಎಸ್.ವೈ.ಎಸ್ ರಾಜ್ಯ ಉಪಾಧ್ಯಕ್ಷ ಮೊಯಿದಿನ್ ಹಾಜಿ ಗುಡ್ವಿಲ್, ಎಸ್.ವೈ.ಎಸ್.ಉಡುಪಿ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್,ಸಯ್ಯದ್ ಯೂಸುಫ್ ನವಾಝ್ ಹೂಡೆ,ಅಡ್ವಕೇಟ್ ಹಂಝತ್ ಉಡುಪಿ,ಅಬ್ದುಲ್ ರಹ್ಮಾನ್ ಮೊಗರ್ಪಣೆ, ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ರವೂಫ್ ಖಾನ್ ಕುಂದಾಪುರ, ರಾಜ್ಯ ಉಪಾಧ್ಯಕ್ಷ ಹಾಫಿಳ್ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ,ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿಗಳಾದ ಹಾಫಿಳ್ ಯಾಕೂಬ್ ಸ ಅದಿ ನಾವೂರು,ಸಿರಾಜುದ್ದೀನ್ ಸಖಾಫಿ ಕನ್ಯಾನ,ಮೌಲಾನಾ ಅಶ್ರಫ್ ಅಂಜದಿ ,ಹುಸೈನ್ ಸ ಅದಿ ಹೊಸ್ಮಾರ್,ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು,ನವಾಝ್ ಭಟ್ಕಳ,ಎಸ್ಸೆಸ್ಸೆಫ್ ರಾಜ್ಯ ನಾಯಕರಾದ ನೌಫಳ್ ಸಖಾಫಿ ಕಳಸ,ಅಡ್ವಕೇಟ್ ಶಾಕಿರ್ ಹಾಜಿ ಮಿತ್ತೂರು,ಶರೀಫ್ ಮಡಿಕೇರಿ,ಮುಸ್ತಫಾ ಮಾಸ್ಟರ್ ಉಳ್ಳಾಲ,ಸಫ್ವಾನ್ ಚಿಕ್ಕಮಗಳೂರು,ವಾಜಿದ್ ಹಾಸನ,ಶಾಫಿ ಸ ಅದಿ ಬೆಂಗಳೂರು,ಲತೀಫ್ ಸ ಅದಿ ಶಿವಮೊಗ್ಗ,ರಫೀಕ್ ಮಡಿಕೇರಿ,ಆರಿಫ್ ಸ ಅದಿ ಭಟ್ಕಳ್,ಎನ್.ಸಿ.ರಹೀಂ ಉಡುಪಿ ,ಉನೈಸ್ ಬುಖಾರಿ ತುಮಕೂರು,ಸಿದ್ದೀಕ್ ಸಖಾಫಿ ಭದ್ರಾವತಿ ,ಅಶ್ರಫ್ ಮುಸ್ಲಿಯಾರ್ ಕುಂದಾಪುರ ಮೊದಲಾದವರು ಉಪಸ್ಥಿತರಿದ್ದರು.

ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಮುಸ್ತಫಾ ನಯೀಮಿ ಮೋಂಟುಗೋಳಿ ಸ್ವಾಗತಿಸಿ,ನವಾಝ್ ಭಟ್ಕಳ್ ವಂದಿಸಿದರು.

error: Content is protected !! Not allowed copy content from janadhvani.com