ಕೋಝಿಕ್ಕೋಡ್: ಮುಸ್ಲಿಂ ಮಹಿಳೆಯರ ಮಸೀದಿ ಪ್ರವೇಶ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡುವ ಆದೇಶಗಳು ಧಾರ್ಮಿಕ ವಿಶ್ವಾಸ ವಿಧಿಗಳನ್ನು ಪರಿಗಣಿಸಿ ಇರಬೇಕು ಎಂದು ಇಂಡಿಯನ್ ಗ್ರಾಂಡ್ ಮುಫ್ತಿ, ಸಮಸ್ತ ಕೇರಳ ಜಂಇಯತ್ತುಲ್ ಉಲಮಾದ ಪ್ರಧಾನ ಕಾರ್ಯದರ್ಶಿಯೂ ಆದ ಕಾಂತಪುರಂ ಎ. ಪಿ.ಅಬೂಬಕರ್ ಮುಸ್ಲಿಯಾರ್ ತಿಳಿಸಿದ್ದಾರೆ.
ಮಸೀದಿಯಲ್ಲಿ ಸ್ತ್ರೀ ಪ್ರವೇಶಕ್ಕೆ ಅನುಮತಿ ಕೋರಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ
ಮುಸ್ಲಿಂ ಮಹಿಳೆಯರಿಗೆ ಪ್ರಾರ್ಥಿಸಲು ಅವರ ಮನೆಯೇ ಉತ್ತಮ ಎನ್ನುವುದು ಧಾರ್ಮಿಕ ಸಂಹಿತೆಗಳಲ್ಲಿ ವ್ಯಕ್ತಪಡಿಸಲಾದ ವಿಚಾರವಾಗಿದೆ.
ಮಕ್ಕಾಗೆ ಹಜ್ ಮತ್ತು ಉಮ್ರಾ ನಿರ್ವಹಿಸಲು ಹೋಗಲಾಗುತ್ತಿದ್ದು, ಆ ಹಿನ್ನಲೆಯಲ್ಲಿನ ಮಸೀದಿ ಪ್ರವೇಶವನ್ನು ಇನ್ನಿತರ ಸಂದರ್ಭಗಳಿಗೆ ತುಲನೆ ಮಾಡ ಬೇಕಾಗಿಲ್ಲ. ಮಹಿಳೆಯರಿಗೆ ನಮಾಝ್ ನಿರ್ವಹಿಸಲು ಅವರ ಮನೆಯೇ ಅತ್ಯತ್ತಮವಾಗಿದೆ. ಆ ಕಾರಣಕ್ಕಾಗಿ ಮಸೀದಿಯಲ್ಲಿ ಮಾತ್ರ ನಡೆಯುವ ಜುಮುಅ ನಮಾಝ್ ಮಹಿಳೆಯರಿಗೆ ಕಡ್ಡಾಯವಿಲ್ಲ ಎಂದು ಇಸ್ಲಾಂ ಅದೇಶಿಸಿದೆ ಎಂದು ಕಾಂತಪುರಂ ಹೇಳಿದರು.
ಇಸ್ಲಾಮಿನ ವ್ಯವಹಾರಗಳಲ್ಲಿ ತೀರ್ಮಾನ ಕೈಗೊಳ್ಳುವಾಗ ಆ ಕುರಿತು ಪರಿಜ್ಞಾನವಿರುವ ಧಾರ್ಮಿಕ ಪಂಡಿತರೊಂದಿಗೆ ಸಮಾಲೋಚನೆ ನಡೆಸಿ ನ್ಯಾಯಾಲಯಗಳು ಮುಂದುವರಿಯಬೇಕು. ಧರ್ಮದ ನೈಜ ವಿಚಾರಗಳನ್ನು ಕಡೆಗಣಿಸುವ ಕೆಲವೇ ಕೆಲವು ಮಂದಿಗಳು ಮಾತ್ರ ಮಹಿಳೆಯರ ಮಸೀದಿ ಪ್ರವೇಶಕ್ಕಾಗಿ ವಾದ ಮಂಡಿಸುತ್ತಾರೆ.
ಇಸ್ಲಾಮಿನ ಮೌಲ್ಯಯುತವಾದ ಜ್ಞಾನ ವ್ಯವಸ್ಥೆಯನ್ನು ಉಲ್ಲಂಘಿಸುವರು ಭಯೋತ್ಪಾದನೆ ಮುಂತಾದ ತಪ್ಪಾದ ಹಾದಿಯಲ್ಲೂ ಸಂಚರಿಸುವುದಾಗಿ ಕಾಣಬಹುದಾಗಿದೆ. ಮಹಿಳಾ ಮಸೀದಿ ಪ್ರವೇಶ ಸಂಬಂಧಿಸಿದಂತೆ ಧಾರ್ಮಿಕ ನಿಲುವುಗಳನ್ನು ಸಂಬಂಧಿಸಿದವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಕಾಂತಪುರಂ ಹೇಳಿದರು.
ಮಸೀದಿಯಲ್ಲಿ ಸ್ತ್ರೀ ಪ್ರವೇಶಕ್ಕೆ ಅನುಮತಿ ಕೋರಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ















ಇನ್ನಷ್ಟು ಸುದ್ದಿಗಳು
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನ ಹಾರಾಟ ರದ್ದು
ಚೀನಾದಲ್ಲಿ HMPV ವೈರಸ್ ವ್ಯಾಪಕ,ಆಸ್ಪತ್ರೆಗಳು ಫುಲ್: ಆತಂಕ ಬೇಡ- ಕೇಂದ್ರ ಸರ್ಕಾರ
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿ ಖಂಡನೀಯ: ತೆಲಂಗಾಣ ಸಿಎಂಗೆ ಎ ಪಿ ಉಸ್ತಾದ್ ಪತ್ರ
ಲಂಚ: ಮೇಘಾ ಇಂಜಿನಿಯರಿಂಗ್ ವಿರುದ್ಧ ಸಿಬಿಐ ಪ್ರಕರಣ – 966 ಕೋಟಿ ಮೌಲ್ಯದ ಎಲೆಕ್ಟೋರಲ್ ಬಾಂಡ್ಗಳನ್ನು ಖರೀದಿಸಿದ್ದ ಕಂಪನಿ ಮೇಘಾ
ಸಮಗ್ರ ಅಭಿವೃದ್ಧಿ ಗೆ ಅಂಬೇಡ್ಕರ್ ತತ್ವ ಪಾಲನೆ ಅಗತ್ಯ : ದ್ರೌಪದಿ ಮುರ್ಮು
ಹರಿಯಾಣ : ಶಾಲಾ ಬಸ್ ಪಲ್ಟಿ; ಆರು ಮಕ್ಕಳು ಸಾವು ಈದ್ ರಜೆಯಲ್ಲೂ ತೆರೆದಿದ್ದ ಶಾಲೆ!
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಮುಸ್ಲಿಂ 2ಬಿ ಮೀಸಲು ರದ್ಧತಿ ಮತಬ್ಯಾಂಕ್ ಭದ್ರಪಡಿಸುವ ಸರಕಾರದ ನಡೆ ಖಂಡನೀಯ- ಎಸ್ ವೈ ಎಸ್
ದೇವಸ್ಥಾನಕ್ಕೆ ಮಾಂಸ ಎಸೆದು, ಕೋಮುಗಲಭೆ- ಪ್ರಮುಖ ಆರೋಪಿ ಚಂಚಲ್ ತ್ರಿಪಾಠಿ ಬಂಧನ