ಕೆಸಿಎಫ್ ಒಮಾನ್ ಇದರ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಸಲಾಲ ಝೋನ್ ಇದರ ಮಹಾಸಭೆಯು ಇತ್ತೀಚೆಗೆ ಅಬ್ದುಲ್ ಲತೀಫ್ ಸಿ.ಎ. ಸುಳ್ಯ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
KCF ಒಮಾನ್ ರಾಷ್ಟ್ರೀಯಧ್ಯಕ್ಷರಾದ ಸಯ್ಯದ್ ಆಬಿದ್ ಅಲ್ ಹೈದ್ರೋಸಿ ತಂಙಳ್ ರವರು ಉಧ್ಘಾಟಿಸಿದ ಕಾರ್ಯಕ್ರಮದಲ್ಲಿ ಸಯ್ಯದ್ ಮಹಮ್ಮದ್ ತಂಙಳ್ ಮಂಜೇಶ್ವರ ಅವರುಗಳು ದುಆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟೀಯಧ್ಯಕ್ಷರಾದ ಸಯ್ಯದ್ ಆಬಿದ್ ಅಲ್ ಹೈದ್ರೋಸಿ ತಂಙಳ್, ಪ್ರಧಾನ ಕಾರ್ಯದರ್ಶಿ ಹನೀಫ್ ಸಅದಿ, ಸಂಘಟನಾಧ್ಯಕ್ಷರಾದ ಹಂಝ ಕನ್ನಂಗಾರ್,ಕಾಸಿಂ ಪೊಯ್ಯತ್ತಬೈಲ್ ಹಾಗೂ ಝೋನ್ ನಾಯಕರುಗಳು ಉಪಸ್ಥಿತರಿದ್ದರು.
ನಂತರ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ಸಿ ಎ ಸುಳ್ಯ, ಪ್ರಧಾನ ಕಾರ್ಯದರ್ಶಿಯಾಗಿ ನಾಸಿರ್ ಇಬ್ರಾಹೀಂ ನಂದಾವರ, ಕೋಶಾಧಿಕಾರಿಯಾಗಿ ಬಶೀರ್ ಅಡ್ಕಾರ್, ಎಜುಕೇಷನ್ ವಿಭಾಗದ ಅಧ್ಯಕ್ಷರಾಗಿ ಖಲಂದರ್ ಶಾಫಿ, ಸಂಘಟನಾಧ್ಯಕ್ಷರಾಗಿ ಅಬ್ದುಲ್ ಕಯ್ಯೂಂ ಅಡ್ಕಾರ್, ಆಡಳಿತ ವಿಭಾಗದ ಅಧ್ಯಕ್ಷರಾಗಿ ಅಶ್ರಫ್ ಪಡುಬಿದ್ರೆ, ಸಾಂತ್ವನ ವಿಭಾಗದ ಅಧ್ಯಕ್ಷರಾಗಿ ಅಬ್ದುಲ್ ಕಾದರ್ ಸುಳ್ಯ, ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಕಬೀರ್ ಸುಳ್ಯ, ಇಹ್ಸಾನ್ ಇದರ ಅಧ್ಯಕ್ಷರಾಗಿ ಕಮಾಲ್ ಸುಳ್ಯ ಹಾಗೂ ಸದಸ್ಯರುಗಳಾಗಿ ಸ್ವದಕತುಲ್ಲಾ ಕಳಸ,ಫಾರಿಸ್ ಕೊಡಗು,ರಹೀಂ ಕೊಳ್ಕೇರಿ,ಅಬ್ದುಲ್ ಮಜೀದ್ ಕೊಡಗು,ಹನೀಫ್ ಸುಳ್ಯ,ನಾಸಿರ್ ಪಡುಬಿದ್ರಿ, ಅಬ್ದುಲ್ ಹಮೀದ್ ಮಂಜೇಶ್ವರ, ಅಶ್ರಫ್ ಉಳ್ಳಾಲ, ಹೈದರ್ ಸಜಿಪ,ಸಿದ್ದೀಕ್ ತ್ವೈಬಾ ಇವರುಗಳನ್ನು ಆರಿಸಲಾಯಿತು.
ಶಾಫಿ ಮುಸ್ಲಿಯಾರ್ ಸ್ವಾಗತಿಸಿದ ಕಾರ್ಯಕ್ರಮವನ್ನು ನೂತನ ಕಾರ್ಯದರ್ಶಿ ನಾಸಿರ್ ನಂದಾವರ ವಂಧಿಸಿದರು.