ಸುರತ್ಕಲ್:ಎಸ್ಸೆಸ್ಸೆಫ್ ರಾಜ್ಯ ಸಮಿತಿಯ ನಿರ್ದೇಶನದಂತೆ ಜಿಲ್ಲೆಯ ಸರ್ವ ಡಿವಿಶನ್ ಗಳಲ್ಲಿ ದಅ್ ವಾ ಕಾನ್ಫರೆನ್ಸ್ ನಡೆಯಲಿದ್ದು,ಅಧಿಕೃತ ಚಾಲನೆಯನ್ನು ನಿನ್ನೆ ಸುರತ್ಕಲ್ ಡಿವಿಶನ್ ನಲ್ಲಿ ನೀಡಲಾಯಿತು.
ಡಿವಿಶನ್ ಅಧ್ಯಕ್ಷರಾದ ಫಾರೂಖ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ಕಿನ್ನಿಗೋಳಿ ಮಿಸ್ಬಾಹುಲ್ ಮದೀನದಲ್ಲಿ ನಡೆದ ಕಾನ್ಫರೆನ್ಸನ್ನು ಮುದರ್ರಿಸರಾದ ಎ.ಪಿ. ಅಬ್ದುಲ್ಲ ಮದನಿ ಉಸ್ತಾದರು ಉದ್ಘಾಟಿಸಿದರು.
ಜಿಲ್ಲಾ ಉಪಾಧ್ಯಕ್ಷ ಮುನೀರ್ ಅಹ್ಮದ್ ಸಖಾಫಿ ಮುತಅಲ್ಲಿಮರಿಗೆ ವಿಶೇಷ ತರಬೇತಿ ನೀಡಿದರು.ರಾಜ್ಯ ನಾಯಕ ಅಶ್ರಫ್ ಅಮ್ಜದಿ ಶುಭಾಶಯ ಕೋರಿದರು.ನವಾಝ್ ಸಖಾಫಿ,ಲತೀಫ್ ಸಖಾಫಿ,ಹಸನ್ ಸಖಾಫಿ,ಆರಿಫ್ ಝುಹ್ರಿ,ಬಶೀರ್ ಹಿಮಮಿ,ಫಾರೂಖ್ ಅಹ್ಸನಿ,ಹನೀಫ್ ಅಹ್ಸನಿ,ಅಸ್ವದ್ ಸಾಗ್ ಮುಂತಾದ ನಾಯಕರು ಉಪಸ್ಥಿತರಿದ್ದರು.