ಕಾವಳಕಟ್ಟೆ: ಅಲ್ ಖಾದಿಸ ಕಾಲೇಜ್ ಆಫ್ ಇಸ್ಲಾಮಿಕ್ ಸೈನ್ಸ್ ವಿದ್ಯಾರ್ಥಿಗಳ unakho-2k18 ಕಲಾ ಸಾಹಿತ್ಯ ಸ್ಪರ್ಧೆ ಸಂಸ್ಥೆಯ ಶಿಲ್ಪಿ ಡಾ.ಮುಹಮ್ಮದ್ ಫಾಝಿಲ್ ರಝ್ವಿ ಹಝ್ರತ್ ಕಾವಳಕಟ್ಟೆ ಚಾಲನೆ ನೀಡಿದರು.
ಸಾಹಿತಿ ಡಾ. ಸಿ.ಎಂ ಹನೀಫ್ ಬೆಳ್ಳಾರೆ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಂಶುಪಾಲರಾದ ಹಾಫಿಲ್ ಸುಫ್ಯಾನ್ ಸಖಾಫಿ ದಿಕ್ಸೂಚಿ ಭಾಷಣ ಮಾಡಿದರು.
ಜುನೈದ್ ಸಖಾಫಿ ಜೀರ್ಮುಖಿ, ಅಬ್ದುಲ್ ರಝಾಕ್ ಸಖಾಫಿ ಮಡಂತ್ಯಾರ್, ಶರೀಫ್ ಸಅದಿ ಪೂಂಜಾಲ್ಕಟ್ಟೆ, ಅಯ್ಯೂಬ್ ಮಹ್ಳರಿ, ಮಹಬೂಬ್ ಗಂಗಾವತಿ, ಸಿನಾನ್ ಸಖಾಫಿ ಕೃಷ್ಣಾಪುರ, ಉಬೈದ್ ಸಖಾಫಿ ಅಡ್ಡೂರು ಉಪಸ್ಥಿತರಿದ್ದರು.