ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ದೀರ್ಘಕಾಲ ಕಾರ್ಯದರ್ಶಿ, ಪ್ರಸಕ್ತ ಕೋಶಾಧಿಕಾರಿಯೂ ,
ಅಲ್- ಮಖರ್ ವಿಧ್ಯಾ ಸಂಸ್ಥೆಯ ಅಧ್ಯಕ್ಷರೂ , ಅದರ ಪ್ರಾಂಶುಪಾಲರೂ, ಪ್ರಮುಖ ವಿದ್ವಾಂಸರೂ ಸೂಫೀ ವರ್ಯರೂ ಆಗಿರುವ ಶೈಖುನಾ ಕಂಝುಲ್ ಉಲಮಾ ಕೆ.ಪಿ ಹಂಝ ಮುಸ್ಲಿಯಾರ್ (ಚಿತ್ತಾರಿ ಉಸ್ತಾದ್) ರವರ ವಿಯೋಗದಿಂದ ಮುಸ್ಲಿಮ್ ಸಮಾಜ ಪ್ರಮುಖ ಆದರ್ಶ ನೇತಾರರೊಬ್ಬರನ್ನು ಕಳೆದುಕೊಂಡಿದೆ. ಸಮಸ್ತ ಮತ್ತು ಸುನ್ನೀ ಸಂಘಟನೆಗಳ ಅಭಿವೃದ್ಧಿಯಲ್ಲಿ ಹಲವು ದಶಕಗಳ ಕಾಲ ಮುಂಚೂಣಿಯಲ್ಲಿ ಕಾರ್ಯೋನ್ಮುಖರಾಗಿದ್ದ ಅವರು ಎಲ್ಲರಿಗೂ ಆದರ್ಶ ನೇತಾರರಾಗಿದ್ದರು. ಮುಕ್ತ ಮತ್ತು ನಿರ್ಭೀತ ವ್ಯಕ್ತಿಯಾಗಿದ್ದ ಚಿತ್ತಾರಿ ಉಸ್ತಾದರವರ ಬಲವಾದ ನಿಲುವು ಎಲ್ಲರಿಗೂ ಪ್ರೇರಕ ಶಕ್ತಿಯಾಗಿದೆ. ಅವರ ವಿಯೋಗ ಸುನ್ನೀ ಜಗ್ಗತ್ತಿಗೆ ತುಂಬಲಾರದ ನಷ್ಟವಾಗಿದೆ. ಅವರ ವಿಯೋಗಕ್ಕೆ ಕೆ.ಸಿ ಎಪ್ ಸೌದಿ ಅರೇಬಿಯಾದ ಅಧ್ಯಕ್ಷರು ಡಿ.ಪಿ ಯೂಸುಫ್ ಸಖಾಫಿ ಬೈತಾರ್ , ಪ್ರಧಾನ ಕಾರ್ಯದರ್ಶಿ ಫಾರೂಖ್ ಕಾಟಿಪಳ್ಳ ಮತ್ತು ಫೈನಾನ್ಸಿಯಲ್ ಕಂಟ್ರೋಲರ್ ಅಬೂಬಕ್ಕರ್ ಹಾಜಿ ರೈಸ್ಕೋ ಸಂತಾಪ ವ್ಯಕ್ತಪಡಿಸಿದರು ಹಾಗೂ ಕೆ.ಸಿ ಎಫ್ ನ ಸೌದಿಯ ಎಲ್ಲಾ ಘಟಕಗಳಲ್ಲಿ ಖುರ್ ಆನ್ ಪಾರಾಯಣ, ತಹ್ಲೀಲ್ ಸಮರ್ಪಣೆ ಮತ್ತು ಮಯ್ಯಿತ್ ನಮಾಝ್ ಹಾಗೂ ಪ್ರಾರ್ಥನಾ ಮಜ್ಲಿಸ್ ಗಳನ್ನು ಏರ್ಪಡಿಸಲು ಅವರು ಕರೆ ನೀಡಿದರು.















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ