ಬುರೈದ : ಸುಮಾರು 2 ವರ್ಷಗಳ ಹಿಂದೆ ಮಂಗಳೂರು ವಿಟ್ಲ ಸಮೀಪದ ಉರಿಮಜಲು ನಿವಾಸಿ ಶಾಹುಲ್ ಹಮೀದ್ ಎಂಬ ವ್ಯಕಿಯು ಸೌದಿ ಅರೇಬಿಯಾದ ಬುರೈದದಲ್ಲಿ ರಸ್ತೆ ಅಪಘಾತದಲ್ಲಿ ಮರಣ ಹೊಂದಿದ್ದರು. ಆ ಸಮಯದಲ್ಲಿ ಮೃತರ ಮರಣಾನಂತರ ಎಲ್ಲಾ ಪ್ರಕ್ರಯಿಯನ್ನು ಕೆ.ಸಿ.ಎಫ್ ಬುರೈದ ಸೆಕ್ಟರ್ ನೇತೃತ್ವದಲ್ಲಿ ನೆರವೇರಿಸಿತು.

ಅಪಘಾತವು ಸಂಬಂಧಪಟ್ಟ ಇಲಾಖೆಯಲ್ಲಿ ಕೇಸು ದಾಖಲಾಗಿತ್ತು ಈ ಕೇಸನ್ನು ಮೃತರ ಪರವಾಗಿ ವಕಾಲಾತ್ತು ವಹಿಸಿ ಅದಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ಕ್ಲಪ್ತ ಸಮಯದಲ್ಲಿ ಸಂಗ್ರಹಿಸಿ ಬುರೈದ ಕೆ.ಸಿ.ಎಫ್. ಇಲಾಖೆಗೆ ಒದಗಿಸಿತು. ನಂತರ ಈ ಕೇಸ್ ಕೋರ್ಟ್ ಮೆಟ್ಟಲೇರಿತು. ಕೋರ್ಟಿನಲ್ಲಿ ಈ ಭಾಗದ ಉದ್ಯಮಿ ಮತ್ತು ಸಮಾಜ ಸೇವಕ ಅಬ್ದುಲ್ ಲತೀಫ್ ಶೇರಿ ಮತ್ತು ಕೆ.ಸಿ.ಎಫ್. ಬುರೈದ ಸೆಕ್ಟರ್ ರಿಲೀಫ್ ಚಯರ್ ಮ್ಯಾನ್ ತಾಜುದ್ದೀನ್ ಕೆಮ್ಮಾರ ಸತತ 2 ವರ್ಷಗಳ ಕಾನೂನು ಹೋರಾಟವನ್ನು ನಡೆಸಿ ಕೊನೆಗೆ ಮೊದಲನೇ ಹಂತದ ಪರಿಹಾರವಾಗಿ 50 ಸಾವಿರ ಸೌದಿ ರಿಯಾಲ್ (9,60,746 INR) ಒದಗಿಸಲು ಸಾಧ್ಯವಾಯಿತು. ಈ ಪರಿಹಾರ ಮೊತ್ತವನ್ನು ಮೃತರ ಕುಟುಂಬ ಸದಸ್ಯರು, ರಿಯಾದ್ ನಲ್ಲಿ ಉದ್ಯೋಗದಲ್ಲಿರುವ ನಿಸಾರ್ ಅವರಿಗೆ ಬುರೈದ ಕೆ.ಸಿ.ಎಫ್ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಈ ಪರಿಹಾರ ಒದಗಿಸಲು ಕೆ.ಸಿ.ಎಫ್ ರಾಷ್ಟ್ರೀಯ ನಾಯಕರ ಮಾರ್ಗದರ್ಶನದಂತೆ ಸತತ 2 ವರ್ಷಗಳ ನಿರಂತರವಾಗಿ ಕಾನೂನು ಹೋರಾಟ ನಡೆಸಿದ ಸಮಾಜಸೇವಕ ಅಬ್ದುಲ್ ಲತೀಫ್ ಶೇರಿ ಮತ್ತು ತಾಜುದ್ದೀನ್ ಕೆಮ್ಮಾರ ಅವರನ್ನು KCF ಗೌರವಿಸಿತು.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು