janadhvani

Kannada Online News Paper

ಡಿಕೆಎಸ್ಸಿ ಕುವೈತ್: ಅಬ್ಬಾಸಿಯಾ ಯೂನಿಟ್ ಅಸ್ತಿತ್ವಕ್ಕೆ – ಅಧ್ಯಕ್ಷರಾಗಿ ಮುನೀರ್ ಅಹ್ಮದ್ ಕೃಷ್ಣಾಪುರ

ಕುವೈತ್: ಡಿಕೆಎಸ್ಸಿ ಕುವೈತ್ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿ ನೂತನವಾಗಿ ಅಬ್ಬಾಸಿಯಾ ಯೂನಿಟ್ ಅನ್ನು ಚಾಲನೆಗೊಳಿಸಲಾಯಿತು. ಕಳೆದ ಶುಕ್ರವಾರ ಜುಮುಅ ನಮಾಜಿನ ಬಳಿಕ ರಾಷ್ಟ್ರೀಯ ಅಧ್ಯಕ್ಷರಾದ ಅನ್ವರ್ ಕುಂಜಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗೌರವಾಧ್ಯಕ್ಷರಾದ ಶಫೀಕ್ ಅಹ್ಸನಿ ಉಸ್ತಾದರು ದುಆ ನೆರವೇರಿಸಿ ವಿಷಯ ಮಂಡಿಸಿದರು.

ಮಾಜಿ ರಾಷ್ಟ್ರೀಯ ಅಧ್ಯಕ್ಷರಾದ ಯೂಸುಫ್ ಮಂಚಕಲ್ ಅವರು ನೂತನ ಸಮಿತಿಯನ್ನು ಘೋಷಿಸಿದರು.
ನೂತನ ಸಮಿತಿಯ ಅಧ್ಯಕ್ಷರಾಗಿ ಮುನೀರ್ ಅಹ್ಮದ್ ಕೃಷ್ಣಾಪುರ, ಪ್ರಧಾನ ಕಾರ್ಯದರ್ಶಿಯಾಗಿ ಝಾಹಿದ್ ಮಂಚಕಲ್ ಹಾಗೂ ಹಣಕಾಸು ಕಾರ್ಯದರ್ಶಿಯಾಗಿ ಅಬ್ದುಲ್ ಸಲಾಂ ಮಂಚಕಲ್ ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ರಾಷ್ಟ್ರೀಯ ನೇತಾರರಾದ ಅಬ್ದುಲ್ ಲತೀಫ್ ಶೇಡಿಯ, ಯೂಸುಫ್ ಮುನಿಯಂ, ಅಬ್ದುಲ್ ರಹ್ಮಾನ್ ಕಾನಾ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದು ಶುಭ ಹಾರೈಸಿದರು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಲಿಯಾಕತ್ ಗಂಗಾವಳಿ ಸ್ವಾಗತಿಸಿದರು. ಉಪಾಧ್ಯಕ್ಷರಾದ ಶೌಕತ್ ಶಿರ್ವ ಧನ್ಯವಾದ ಸಮರ್ಪಿಸಿದರು.

ಇದನ್ನೂ ಓದಿರಿ...