janadhvani

Kannada Online News Paper

ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ

ಕರ್ನಾಟಕ ಮುಸ್ಲಿಂ ಜಮಾಅತ್ ಮತ್ತು ಎಸ್ ವೈ ಎಸ್, ಎಸ್ಸೆಸ್ಸೆಫ್ ವಾಮಂಜೂರು ಯೂನಿಟ್ ಸಹಯೋಗದಲ್ಲಿ,ಮೇ 28 ರಂದು ಈದ್ ಸಂಭ್ರಮಾಚರಣೆಯ ಪ್ರಯುಕ್ತ ಮೂಡುಶೆಡ್ಡೆ, ವಾಮಂಜೂರು ಟಿ.ಬಿ. ಕ್ಷಯ ರೋಗ ಹಾಸ್ಪಿಟಲ್‌ನಲ್ಲಿರುವ ರೋಗಿಗಳಿಗೆ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮವನ್ನು ನಡೆಸಲಾಯಿತು.

33 ಕ್ಕೂ ಅಧಿಕ ರೋಗಿಗಳು ಇದರ ಸದುಪಯೋಗ ಪಡೆದುಕೊಂಡರು. ಪ್ರಸ್ತುತ ಸಮಾರಂಭದಲ್ಲಿ ಎಸ್ ವೈ ಎಸ್ ದ.ಕ. ವೆಸ್ಟ್ ಜಿಲ್ಲಾ ಉಪಾಧ್ಯಕ್ಷ ಮರ್ಕಝ್ ಕೈಕಂಬ ಸಾರಥಿ ಬದ್ರುದ್ದೀನ್ ಅಝ್ ಹರಿ ಅಲ್ ಕಾಮಿಲ್, ಮೂಡುಬಿದಿರೆ ಝೋನ್ ಅಧ್ಯಕ್ಷರಾದ ಬಶೀರ್ ಕೈಕಂಬ,ಇಸಾಬ ಕಾರ್ಯದರ್ಶಿ ಝೈನುದ್ದೀನ್ ಅಡ್ಡೂರು ಎಸ್ ವೈ ಎಸ್ ವಾಮಂಜೂರು ಯೂನಿಟ್ ಅಧ್ಯಕ್ಷರಾದ ಶರೀಫ್ ವಾಮಂಜೂರು, ಪ್ರಧಾನ ಕಾರ್ಯದರ್ಶಿ ರಿಯಾಝ್ ವಾಮಂಜೂರು, ಕೋಶಾಧಿಕಾರಿ ಹೈದರ್ ವಾಮಂಜೂರು ಎಸ್ಸೆಸೆಫ್ ನೇತಾರರಾದ ಸೈಫುಲ್ಲಾ ಜೌಹರಿ, ಮುಸ್ತಫಾ ಮರ್ಝೂಖಿ, ಕಾರ್ಯದರ್ಶಿಗಳಾದ ಶರೀಫ್,ಮುಸ್ತಫಾ ಜ್ಯೋತಿ ನಗರ, ಇಲ್ಯಾಸ್ ಜ್ಯೋತಿ ನಗರ,ಜಮಾಲ್ ಜ್ಯೋತಿ ನಗರ, ಸಿದ್ದೀಕ್ ವಾಮಂಜೂರು,

ಯಂಗ್‌ಮೆನ್ಸ್ ಪ್ರಧಾನ ಕಾರ್ಯದರ್ಶಿ ಶಾನವಾಝ್, ಅಬೂಬಕರ್, ಮುಹಮ್ಮದ್ ರಫೀಕ್,ರಿಳ್ವಾನ್ ಮರ್ಕಝ್ ನಗರ ಮುಂತಾದ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಇದನ್ನೂ ಓದಿರಿ...