janadhvani

Kannada Online News Paper

​ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ

ಉಚ್ಚಿಲ: ಉಡುಪಿ ಜಿಲ್ಲೆಯ ಉಚ್ಚಿಲ ಸಮೀಪದ ಎಲ್ಲೂರಿನಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ದೀನಿ ಶಿಕ್ಷಣ ಸಂಸ್ಥೆ ದಾರುಲ್ ಅಮಾನ್ ಎಜ್ಯುಕೇಶನಲ್ ಅಕಾಡೆಮಿಯ ಆಶ್ರಯದಲ್ಲಿ ಏರ್ವಾಡಿ ಶುಹದಾ ನೇರ್ಚೆ, ಬೃಹತ್ ಸ್ವಲಾತ್ ಮಜ್ಲಿಸ್ ಹಾಗೂ ಮಹಿಳಾ ಶರೀಅತ್ ಪದವಿ ಪ್ರದಾನ ಸಮಾರಂಭವು ಮೇ 07, 2026ರ ಗುರುವಾರ ನಡೆಯಲಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ. ಎ. ಅಬ್ದುರ್ರಹ್ಮಾನ್ ರಝ್ವಿ ಅಲ್ ಫುರ್ಖಾನಿ ಕಲ್ಕಟ್ಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಸ್ಥೆಯ ಆವರಣದಲ್ಲಿ ಅಂದು ಬೆಳಿಗ್ಗೆ 9:30 ರಿಂದ ಸಂಜೆ 6:00 ಗಂಟೆಯವರೆಗೆ ಸರಣಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಬೆಳಿಗ್ಗೆ 9:30ಕ್ಕೆ ಶಾದುಲಿಯಾ ಮಜ್ಲಿಸ್ ಮೂಲಕ ಚಾಲನೆ ನೀಡಲಾಗುವುದು. ಪೂರ್ವಾಹ್ನ 11:30ಕ್ಕೆ ಏರ್ವಾಡಿ ಮಜ್ಲಿಸ್, ಮಧ್ಯಾಹ್ನ 2:00 ಗಂಟೆಗೆ ಮಹನೀಯರ ಅನುಸ್ಮರಣಾ ಭಾಷಣ ಹಾಗೂ ಸಂಜೆ 4:00 ಗಂಟೆಗೆ ಆಧ್ಯಾತ್ಮಿಕ ಚೈತನ್ಯ ನೀಡುವ ಸ್ವಲಾತ್ ಮಜ್ಲಿಸ್ ನಡೆಯಲಿದೆ. ಇದೇ ಸುಸಂದರ್ಭದಲ್ಲಿ ವಿದ್ಯಾಭ್ಯಾಸ ಪೂರೈಸಿದ ವಿದ್ಯಾರ್ಥಿನಿಯರಿಗೆ ಮಹಿಳಾ ಶರೀಅತ್ ಪದವಿ ಪ್ರದಾನ ಮಾಡಲಾಗುವುದು.

ಈ ಐತಿಹಾಸಿಕ ಸಮಾವೇಶದಲ್ಲಿ ಅಸ್ಸಯ್ಯಿದ್ ಬಾಫಖಿ ತಂಙಳ್ ಕೊಯಿಲಾಂಡಿ, ಝೈನುಲ್ ಉಲಮಾ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉಸ್ತಾದ್, ತಾನಲ್ಲೂರು ಅಬ್ದುಲ್ಲಾ ಉಸ್ತಾದ್, ಮೌಲಾನಾ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಹಝ್ರತ್, ಉಸ್ತಾದ್ ಮಜೀದ್ ಫೈಝಿ ಪೊಯ್ಯತ್ತಬೈಲು, ಅಲ್ಹಾಜ್ ಉಸ್ತಾದ್ ಸಲೀಂ ಮದನಿ, ಬಹು| ಶರೀಫ್ ಸಅದಿ ಕಿಲ್ಲೂರು ಸೇರಿದಂತೆ ನಾಡಿನ ಖ್ಯಾತ ಉಲಮಾ-ಉಮರಾ ನಾಯಕರು, ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಧರ್ಮಾನುರಾಗಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿರಿ...