janadhvani

Kannada Online News Paper

ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ

ಸುನ್ನೀ ಸಂಘಟನೆಗಳ ಆಸ್ಥಾನದ ಪೂರ್ಣೀಕರಣಕ್ಕಾಗಿ ನಾಲ್ವರು ಉಲಮಾಗಳನ್ನೊಳಗೊಂಡ ಉಪ ಸಮಿತಿಯನ್ನೂ ಇದೇ ಸಂದರ್ಭದಲ್ಲಿ ರಚಿಸಲಾಗಿದೆ.

ಪುತ್ತೂರು: ಕರ್ನಾಟಕ ರಾಜ್ಯ ಸುನ್ನೀ ಜಮಿಯ್ಯತುಲ್ ಉಲಮಾ ಮುಶಾವರಕ್ಕೆ ಪ್ರಸಿದ್ಧ ಸಂಘಟಕ ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್ ಮತ್ತು ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಮೌಲಾನಾ ಎನ್.ಕೆ.ಎಂ. ಶಾಫಿ ಸಅದಿ ಅವರನ್ನು ಸದಸ್ಯರಾಗಿ ನೇಮಕಗೊಳಿಸಲಾಗಿದೆ.

ಪುತ್ತೂರಿನಲ್ಲಿ ನಡೆದ ‘ಮಾದರಿ ಮದುವೆ ಅಭಿಯಾನ’ ಎಸ್.ವೈ.ಎಸ್. ರಾಜ್ಯ ಸಮಾವೇಶದಲ್ಲಿ ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಈ ಮಹತ್ವದ ಘೋಷಣೆ ಮಾಡಿದರು.

ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಎ.ಪಿ. ಉಸ್ತಾದ್, ರಾಜ್ಯದಲ್ಲಿ ಸಂಘಟನೆಯನ್ನು ಬಲಿಷ್ಠಗೊಳಿಸುವ ಮತ್ತು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಸಮುದಾಯದ ಸಂಸ್ಥೆಗಳಿಗೆ ತಲುಪಿಸುವ ನಿಟ್ಟಿನಲ್ಲಿ ಶಾಫಿ ಸಅದಿಯವರ ಅನುಭವ ಮತ್ತು ಸರ್ಕಾರದೊಂದಿಗಿನ ಸಂಪರ್ಕವು ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯಾದ್ಯಂತ ಜಮ್ಇಯ್ಯತುಲ್ ಉಲಮಾವನ್ನು ಮತ್ತಷ್ಟು ಕ್ರಿಯಾಶೀಲಗೊಳಿಸಲು ಮತ್ತು ಸುನ್ನೀ ಸಂಘಟನೆಗಳ ಆಸ್ಥಾನದ ಪೂರ್ಣೀಕರಣಕ್ಕಾಗಿ ನಾಲ್ವರು ಉಲಮಾಗಳನ್ನೊಳಗೊಂಡ ಉಪ ಸಮಿತಿಯನ್ನೂ ಇದೇ ಸಂದರ್ಭದಲ್ಲಿ ರಚಿಸಲಾಗಿದೆ. ಅಸೌಖ್ಯದ ನಡುವೆಯೂ ಸಮಾವೇಶಕ್ಕೆ ಆಗಮಿಸಿದ ಸುಲ್ತಾನುಲ್ ಉಲಮಾ ಅವರು, ಸಂಘಟನೆಯ ಈ ನೂತನ ತೀರ್ಮಾನಗಳು ರಾಜ್ಯದಲ್ಲಿ ಮಹತ್ತರ ಬದಲಾವಣೆಗೆ ನಾಂದಿಯಾಗಲಿವೆ ಎಂಬ ಸಂದೇಶ ನೀಡಿದರು.

ಇದನ್ನೂ ಓದಿರಿ...