ನರಿಂಗಾನ: ಮಂಜನಾಡಿ ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ನ ಶಿಲ್ಪಿ, ಪ್ರಖ್ಯಾತ ವಿದ್ವಾಂಸ ಹಾಗೂ ಬಹುಮುಖ ಸಂಘಟನಾ ಚತುರರಾಗಿದ್ದ ಮರ್ಹೂಮ್ ಶೈಖುನಾ ಅಬ್ಬಾಸ್ ಮುಸ್ಲಿಯಾರ್ (ಶರಫುಲ್ ಉಲಮಾ) ರವರ 7ನೇ ವರ್ಷದ ಅನುಸ್ಮರಣಾ ಕಾರ್ಯಕ್ರಮವು ಇದೇ ಬರುವ ಮೇ 13 ಮತ್ತು 14 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.
ಶೈಖುನಾ ಉಸ್ತಾದ್ ರವರ ಆದರ್ಶಪ್ರಾಯ ಬದುಕು, ಶೈಕ್ಷಣಿಕ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅವರು ನೀಡಿದ ಅಪಾರ ಕೊಡುಗೆಗಳನ್ನು ಹೊಸ ತಲೆಮಾರಿಗೆ ಪರಿಚಯಿಸುವುದು ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ. ಇದರೊಂದಿಗೆ ಸುನ್ನತ್ ಜಮಾಅತಿನ ಆದರ್ಶಗಳ ಪ್ರತಿಪಾದನೆ ಹಾಗೂ ದ್ಸಿಕ್ರ್, ಸ್ವಲಾತ್, ಬುರ್ದಾ ಮಜ್ಲಿಸ್ಗಳ ಮೂಲಕ ಆಧ್ಯಾತ್ಮಿಕ ಚೈತನ್ಯವನ್ನು ಮೂಡಿಸುವ ಉದ್ದೇಶವನ್ನು ಹೊಂದಲಾಗಿದೆ.
ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ ಎಪ್ರಿಲ್ 6 ರಂದು ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಅವರ ನೇತೃತ್ವದಲ್ಲಿ ಸಮಾಲೋಚನಾ ಸಭೆ ನಡೆಯಿತು. ಈ ಸಭೆಯಲ್ಲಿ ಕಾರ್ಯಕ್ರಮದ ನಿರ್ವಹಣೆಗಾಗಿ ಪ್ರತ್ಯೇಕ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಚೆಯರ್ಮಾನ್:ಹಾಜಿ ಎನ್. ಎಸ್. ಕರೀಂ
ಕನ್ವೀನರ್:ಕೆ. ಎಂ. ಕೆ. ಮಂಜನಾಡಿ
ಕೋಶಾಧಿಕಾರಿ: ಮುಹಮ್ಮದ್ ಹಾಜಿ ಬೋಳಿಯಾರ್
ವಿವಿಧ ಉಪಸಮಿತಿಗಳ ಉಸ್ತುವಾರಿಗಳು:
ಫೈನಾನ್ಸ್ ಸಮಿತಿ: ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಮಹೀದ್ ಎಂ. ಹೆಚ್. ಮರಿಕ್ಕಳ, ಕೆ. ಪಿ. ಅಬ್ದುಲ್ಲಾ ಪೆರಡೆ (ಪುತ್ತುಞಿ).
ಆಹಾರ ವಿಭಾಗ:ಮುಹಮ್ಮದ್ ಮದನಿ ಸಾಮಣಿಗೆ, ಪುತ್ತು ಮೋರ್ಲ, ಅಶ್ರಫ್ ನೆಕ್ಕರೆ.
ಸೌಂಡ್ಸ್ & ಲೈಟಿಂಗ್ಸ್: ಶೌಕತ್ ಹಾಜಿ ದೇರಳಕಟ್ಟೆ.
ಸಂದಲ್ ಸಮಿತಿ: ಬಾವುಚ್ಚ ಅನ್ಸಾರ್ ನಗರ, ಲತೀಫ್ ಸುಬ್ಬಗೋಳಿ, ಹನೀಫ್ ಮೀನಂಕೋಡಿ.
ಪ್ರಚಾರ ಸಮಿತಿ:ಪಡಿಕ್ಕಲ್ ಅಬೂಬಕರ್ ಮದನಿ, ಅಬ್ದುರ್ರಹ್ಮಾನ್ ಮದನಿ ನೆಕ್ಕರೆ, ಎಂ. ಎಂ. ಕೆ. ಮುಡಿಪು.
ಸ್ವಯಂಸೇವಕ ದಳ:ಆಸಿಫ್ ಅನ್ಸಾರ್ ನಗರ, ಬಶೀರ್ ಮೋರ್ಲ.
ಸಭೆಯಲ್ಲಿ ಅಬೂಸ್ವಾಲಿಹ್ ಅಝ್ಹರಿ ಸ್ವಾಗತಿಸಿ, ಅಮಾನ್ ಮರ್ಝೂಖಿ ವಂದಿಸಿದರು. ನಾಡಿನ ವಿದ್ವತ್ ಪುರುಷರು ಹಾಗೂ ಸಾದಾತುಗಳ ನೇತೃತ್ವದಲ್ಲಿ ನಡೆಯಲಿರುವ ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳುವಂತೆ ಸಮಿತಿಯು ವಿನಂತಿಸಿದೆ.
















ಇನ್ನಷ್ಟು ಸುದ್ದಿಗಳು
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ
ಮದ್ರಸ ಮುಅಲ್ಲಿಮರ ಮೇಲೆ ಹಲ್ಲೆ ಪ್ರಕರಣ: ಎಸ್ಜೆಎಂ ದ.ಕ. ಸೌತ್ ಜಿಲ್ಲಾ ಸಮಿತಿ ತೀವ್ರ ಖಂಡನೆ
ಮದ್ರಸಾ ಅಧ್ಯಾಪಕರ ಮೇಲೆ ಹಲ್ಲೆ- ಎಸ್.ವೈ.ಎಸ್ ದ.ಕ ಜಿಲ್ಲೆ ವೆಸ್ಟ್ ಖಂಡನೆ
ಇರಾಕ್ನಲ್ಲೂ ಖಾಮ್ನಈ ಅಂತ್ಯಕ್ರಿಯೆ ವಿಧಿವಿಧಾನಗಳು; ನಜಫ್ನತ್ತ ಹರಿದುಬಂದ ಜನಸಾಗರ