ನರಿಂಗಾನ: ಮಂಜನಾಡಿ ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ನ ಶಿಲ್ಪಿ, ಪ್ರಖ್ಯಾತ ವಿದ್ವಾಂಸ ಹಾಗೂ ಬಹುಮುಖ ಸಂಘಟನಾ ಚತುರರಾಗಿದ್ದ ಮರ್ಹೂಮ್ ಶೈಖುನಾ ಅಬ್ಬಾಸ್ ಮುಸ್ಲಿಯಾರ್ (ಶರಫುಲ್ ಉಲಮಾ) ರವರ 7ನೇ ವರ್ಷದ ಅನುಸ್ಮರಣಾ ಕಾರ್ಯಕ್ರಮವು ಇದೇ ಬರುವ ಮೇ 13 ಮತ್ತು 14 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.
ಶೈಖುನಾ ಉಸ್ತಾದ್ ರವರ ಆದರ್ಶಪ್ರಾಯ ಬದುಕು, ಶೈಕ್ಷಣಿಕ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅವರು ನೀಡಿದ ಅಪಾರ ಕೊಡುಗೆಗಳನ್ನು ಹೊಸ ತಲೆಮಾರಿಗೆ ಪರಿಚಯಿಸುವುದು ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ. ಇದರೊಂದಿಗೆ ಸುನ್ನತ್ ಜಮಾಅತಿನ ಆದರ್ಶಗಳ ಪ್ರತಿಪಾದನೆ ಹಾಗೂ ದ್ಸಿಕ್ರ್, ಸ್ವಲಾತ್, ಬುರ್ದಾ ಮಜ್ಲಿಸ್ಗಳ ಮೂಲಕ ಆಧ್ಯಾತ್ಮಿಕ ಚೈತನ್ಯವನ್ನು ಮೂಡಿಸುವ ಉದ್ದೇಶವನ್ನು ಹೊಂದಲಾಗಿದೆ.
ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ ಎಪ್ರಿಲ್ 6 ರಂದು ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಅವರ ನೇತೃತ್ವದಲ್ಲಿ ಸಮಾಲೋಚನಾ ಸಭೆ ನಡೆಯಿತು. ಈ ಸಭೆಯಲ್ಲಿ ಕಾರ್ಯಕ್ರಮದ ನಿರ್ವಹಣೆಗಾಗಿ ಪ್ರತ್ಯೇಕ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಚೆಯರ್ಮಾನ್:ಹಾಜಿ ಎನ್. ಎಸ್. ಕರೀಂ
ಕನ್ವೀನರ್:ಕೆ. ಎಂ. ಕೆ. ಮಂಜನಾಡಿ
ಕೋಶಾಧಿಕಾರಿ: ಮುಹಮ್ಮದ್ ಹಾಜಿ ಬೋಳಿಯಾರ್
ವಿವಿಧ ಉಪಸಮಿತಿಗಳ ಉಸ್ತುವಾರಿಗಳು:
ಫೈನಾನ್ಸ್ ಸಮಿತಿ: ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಮಹೀದ್ ಎಂ. ಹೆಚ್. ಮರಿಕ್ಕಳ, ಕೆ. ಪಿ. ಅಬ್ದುಲ್ಲಾ ಪೆರಡೆ (ಪುತ್ತುಞಿ).
ಆಹಾರ ವಿಭಾಗ:ಮುಹಮ್ಮದ್ ಮದನಿ ಸಾಮಣಿಗೆ, ಪುತ್ತು ಮೋರ್ಲ, ಅಶ್ರಫ್ ನೆಕ್ಕರೆ.
ಸೌಂಡ್ಸ್ & ಲೈಟಿಂಗ್ಸ್: ಶೌಕತ್ ಹಾಜಿ ದೇರಳಕಟ್ಟೆ.
ಸಂದಲ್ ಸಮಿತಿ: ಬಾವುಚ್ಚ ಅನ್ಸಾರ್ ನಗರ, ಲತೀಫ್ ಸುಬ್ಬಗೋಳಿ, ಹನೀಫ್ ಮೀನಂಕೋಡಿ.
ಪ್ರಚಾರ ಸಮಿತಿ:ಪಡಿಕ್ಕಲ್ ಅಬೂಬಕರ್ ಮದನಿ, ಅಬ್ದುರ್ರಹ್ಮಾನ್ ಮದನಿ ನೆಕ್ಕರೆ, ಎಂ. ಎಂ. ಕೆ. ಮುಡಿಪು.
ಸ್ವಯಂಸೇವಕ ದಳ:ಆಸಿಫ್ ಅನ್ಸಾರ್ ನಗರ, ಬಶೀರ್ ಮೋರ್ಲ.
ಸಭೆಯಲ್ಲಿ ಅಬೂಸ್ವಾಲಿಹ್ ಅಝ್ಹರಿ ಸ್ವಾಗತಿಸಿ, ಅಮಾನ್ ಮರ್ಝೂಖಿ ವಂದಿಸಿದರು. ನಾಡಿನ ವಿದ್ವತ್ ಪುರುಷರು ಹಾಗೂ ಸಾದಾತುಗಳ ನೇತೃತ್ವದಲ್ಲಿ ನಡೆಯಲಿರುವ ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳುವಂತೆ ಸಮಿತಿಯು ವಿನಂತಿಸಿದೆ.















ಇನ್ನಷ್ಟು ಸುದ್ದಿಗಳು
ಬಶೀರ್ ಕಿನ್ಯ ಅವರಿಗೆ ಸಮ್ಮೇಳನಾಧ್ಯಕ್ಷತೆಯ ಗೌರವ: ಸಾಹಿತ್ಯ ಲೋಕದ ಬಹುಭಾಷಾ ಪಂಡಿತನಿಗೆ ಒಲಿದ ಮನ್ನಣೆ
ವಿದ್ಯಾರ್ಥಿಗಳಿಗೆ ಕೆಎಸ್ಆರ್ಟಿಸಿ ಉಚಿತ ಪ್ರಯಾಣ- ಐತಿಹಾಸಿಕ ‘ಮಕ್ಕಳ ಸ್ನೇಹಿ ಸಾರಿಗೆ’ ಯೋಜನೆ ಸಿದ್ಧ
ಕಿನ್ಯಾ ‘ಗೋಲ್ಡನ್ ಹೆಲ್ತ್’ ಶಿಲಾನ್ಯಾಸ: ರೋಗ ಬರದಂತೆ ತಡೆಯುವ ಜನಜಾಗೃತಿ ಇಂದಿನ ಅಗತ್ಯ- ಸ್ಪೀಕರ್ ಯು.ಟಿ. ಖಾದರ್
ಡಿಕೆಎಸ್ಸಿ ಅಲ್-ಖೋಬರ್ ಘಟಕ: ಮಾಸಿಕ ಸಭೆ ಹಾಗೂ ಗಣ್ಯರಿಗೆ ಸನ್ಮಾನ
ಗಲ್ಫ್ ಕನಸಿನ ಕರಾಳ ಮುಖ: ಪ್ರತಿದಿನ 20ಕ್ಕೂ ಹೆಚ್ಚು ಭಾರತೀಯ ಕಾರ್ಮಿಕರು ಮೃತ್ಯು – ಒಂದು ವಿಶೇಷ ವರದಿ
ಕಿನ್ಯ ಗ್ರಾಮ ಪಂಚಾಯತ್ ‘ಗಾಂಧಿ ಗ್ರಾಮ ಪುರಸ್ಕಾರ’ ಕ್ಕೆ ಆಯ್ಕೆ- ಸ್ಥಳೀಯ ಆಡಳಿತದ ದಕ್ಷತೆಗೆ ಸಂದ ಗೌರವ
ಟೋಲ್ ಪ್ಲಾಜಾಗಳಲ್ಲಿ ಡಿಜಿಟಲ್ ಪಾವತಿ ಕಡ್ಡಾಯ – ಏಪ್ರಿಲ್ 1ರಿಂದ ನಗದು ಪಾವತಿ ವ್ಯವಸ್ಥೆ ಸ್ಥಗಿತ
ಕಿನ್ಯಾ ಗೋಲ್ಡನ್ ಹೆಲ್ತ್ ಫೌಂಡೇಶನ್: ಏ.5 ರಂದು ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ
ತೊಕ್ಕೊಟ್ಟು ಫ್ಲೈಓವರ್ ಮೇಲೆ ಭೀಕರ ದಾಳಿ- ಅಜ್ಜಿನಡ್ಕ ಆರಿಫ್ ಹತ್ಯೆ
ಭಾರತ ಸಹಿತ ಐದು ರಾಷ್ಟ್ರಗಳಿಗೆ ಹೊರ್ಮುಜ್ ಜಲಸಂಧಿ ಮುಕ್ತ- ಇರಾನ್ ಘೋಷಣೆ