janadhvani

Kannada Online News Paper

ಕೆಎಂಜೆ,ಎಸ್ ವೈಎಸ್,ಎಸ್ಸೆಸ್ಸೆಫ್ ಗೂಡಿನಬಳಿ- ಸಂಭ್ರಮದ ಸ್ವಾತಂತ್ರ್ಯೋತ್ಸವ

ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್,ಎಸ್ಸೆಸ್ಸೆಫ್ ಗೂಡಿನಬಳಿ ಘಟಕದ ವತಿಯಿಂದ ಸರಕಾರಿ ಕಾಲೇಜು ಸಮೀಪ ವಿಜೃಂಭಣೆಯಿಂದ ಸ್ವಾತಂತ್ರ್ಯೋತ್ಸವ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಸೆಸ್ಸೆಫ್ ಗೂಡಿನಬಳಿ ಘಟಕದ ಅಧ್ಯಕ್ಷ ಅಲೀಂ SB ವಹಿಸಿದ್ದರು. ಸುಹೈಲ್ ಸಖಾಫಿ ದುವಾ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. KCF ನಾಯಕರಾದ ಆಸೀಫ್ ಹಾಜಿ ಸೌದಿ ಅರೇಬಿಯಾ ಧ್ವಜಾರೋಹಣ ನೆರವೇಸಿ ಸಂದೇಶ ನೀಡಿದರು. ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಇರ್ಷಾದ್ ಹಾಜಿ ಸಂದೇಶ ಭಾಷಣ ನಡೆಸಿದರು.

ಕಾರ್ಯಕ್ರಮದಲ್ಲಿ ಮಸ್ಜಿದ್ ಏ ಮುತ್ತಲಿಬ್ ಗೂಡಿನಬಳಿ ಉಪಾಧ್ಯಕ್ಷ ಮನ್ಸೂರ್ GK ಪ್ರಧಾನ ಕಾರ್ಯದರ್ಶಿ ಸಿರಾಜ್ MK ಸದಸ್ಯರಾದ ಹಸನಬ್ಬ ಫಾರೂಕ್ MK ರಹ್ಮನ್ T ಹಯತುಲ್ ಇಸ್ಲಾಂ ಸಂಘ ಇದರ ಜೊತೆ ಕಾರ್ಯದರ್ಶಿ ಸಮೀಯುಲ್ಲಾ,ಮುಸ್ತಫಾ ಗ್ರೀನ್ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.