ಮಂಗಳೂರು: ಬೆಳ್ತಂಗಡಿ ತಾಲೂಕಿನ ನಾವೂರು ಹಿರಿಯ ಪ್ರಾಥಮಿಕ ಶಾಲೆಯ 1985 ನೇ ವರ್ಷದ ಏಳನೇ ತರಗತಿಯ ವಿದ್ಯಾರ್ಥಿಗಳ ಮರು ಸಂಗಮ “ರಿಯೂನಿಯನ್-25” ಕಳೆದ ಆಗಸ್ಟ್ ರಂದು ನಡೆಯಿತು. ಮಂಗಳೂರು ಪಂಪ್ ವೆಲ್ ನಲ್ಲಿರುವ, ಕುಡ್ಲ ಹಿಲ್ಸ್ ನ “ದಾಹ್ ಮಾನ್ಶನ್” ಸಭಾಂಗಣ, 40 ವರ್ಷಗಳ ಬಳಿಕದ ಈ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಯಿತು.
ದೇಶ ವಿದೇಶದ ಬೇರೆ ಬೇರೆ ಕಡೆ ಇದ್ದ ಸಹಪಾಠಿಗಳು ಭಾಗವಹಿಸಿ ಬಾಲ್ಯದ ಶಾಲಾ ದಿನಗಳ ರಸ ನಿಮಿಷಗಳನ್ನು ಮೆಲುಕು ಹಾಕುವ ಮೂಲಕ ಹಾಗೂ ತಮ್ಮ ಅಧ್ಯಾಪಕರನ್ನು ಗೌರವದಿಂದ ಸ್ಮರಿಸುವ ಮೂಲಕ ಈ ದಿನವನ್ನು ಸ್ಮರಣೀಯಗೊಳಿಸಿದರು. ಹಲವು ವರ್ಷಗಳ ನಂತರ ಬಾಲ್ಯದ ಸ್ನೇಹಿತರು ಪರಸ್ಪರ ಭೇಟಿಯಾಗಿ ಭಾವುಕಗೊಳ್ಳುವ ರೋಮಾಂಚನ ಕ್ಷಣಕ್ಕೆ ಈ ಸಂಗಮ ಸಾಕ್ಷಿಯಾಯಿತು. ಸಹಪಾಠಿ ಮಿತ್ರ ಅಬ್ದುಲ್ ರಝಾಕ್ (ಇಂಜಿನಿಯರ್ ದುಬೈ) ಈ ಸಂಗಮವನ್ನು ಆಯೋಜಿಸಿ ಸಹಪಾಠಿಗಳನ್ನು ಆಹ್ವಾನಿಸಿದ್ದರು. ಇವರ ಆಹ್ವಾನವನ್ನು ಗೌರವಿಸಿ ಊರಿನಲ್ಲಿರುವ ಹಾಗೂ ಬೆಂಗಳೂರು, ಗೋವಾ, ದುಬೈ ಹಾಗೂ ಕುವೈಟ್ ನಲ್ಲಿ ನೆಲೆಸಿರುವ ಗೆಳೆಯರೂ ಬಿಡುವು ಮಾಡಿಕೊಂಡು ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ವಿಶೇಷ ಆಹ್ವಾನಿತರಾಗಿದ್ದ, ಖ್ಯಾತ ಮೋಟಿವೇಷನಲ್ ಸ್ಪೀಕರ್ ಹಾಗೂ ಕೌನ್ಸಿಲಿಂಗ್ ತಜ್ಞ ರಫೀಕ್ ಮಾಸ್ಟರ್ ರವರು ತಮ್ಮ ಚಿಂತನೀಯ ಹಾಗೂ ಸ್ಫೂರ್ತಿಯುತ ಮಾತುಗಳ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಸಹಪಾಠಿ ಮಿತ್ರರು ಹಾಡು ಹಾಗೂ ಮಾತಿನ ಮೂಲಕ ನೆರೆದವರನ್ನು ರಂಜಿಸಿದರು. ಕಾರ್ಯಕ್ರಮದ ಆಯೋಜಕರಾದ ಇಂಜಿನಿಯರ್ ಅಬ್ದುಲ್ ರಝಾಕ್ ವಿವಿಧ ಪಾನೀಯ ಹಾಗೂ ಭಕ್ಷ್ಯ ಪದಾರ್ಥಗಳ ಭರ್ಜರಿ ಔತಣಕೂಟವನ್ನೂ ಏರ್ಪಡಿಸಿದ್ದರಲ್ಲದೆ, ಆಗತರಿಗೆಲ್ಲ ವಿಶೇಷ ಉಡುಗೊರೆಯನ್ನೂ ಕೊಟ್ಟು ಕೌತುಕಗೊಳಿಸಿದರು.
ಕೆಲವು ಸಹಪಾಠಿಗಳು ಕುಟುಂಬ ಸಹಿತವಾಗಿ ಆಗಮಿಸಿದ್ದು ವಿಶೇಷವಾಗಿತ್ತು. ಈ ತಂಡದ ವತಿಯಿಂದ ಕಲಿತ ಶಾಲೆಗೆ ಏನಾದರೊಂದು ಕೊಡುಗೆ ನೀಡುವ ಬಗ್ಗೆಯೂ ಚರ್ಚಿಸಲಾಯಿತು. ಅಬ್ದುಲ್ ರಝಾಕ್ ನಾವೂರು ಸ್ವಾಗತಿಸಿದರು. ಫಾ. ವಿನ್ಸೆಂಟ್ (ಸಿ.ಒ.ಡಿ.ಪಿ. ಮಂಗಳೂರು), ವರ್ಗೀಸ್ ಪಿ (ಪೊಲೀಸ್ ಅಧಿಕಾರಿ-ಇಂಟಲಿಜೆನ್ಸ್ ವಿಭಾಗ), ಪೊಲಿಕಾರ್ಪ್ ಡಿಸೋಜ( ಉದ್ಯಮಿ, ಬೆಂಗಳೂರು), ಮುಹಮ್ಮದ್ ನೂರುದ್ದೀನ್ ( ಕುವೈಟ್), ವಿಜಯ ಲೋಬೋ, ವಿಶ್ವನಾಥ, ಡೀಕಯ್ಯ, ರಾಜೇಂದ್ರ, ಕೇಶವ, ಉಮಾವತಿ, ದೀಪಿಕ, ಜೆಸಿಂತ, ವಿನ್ನಿ, ಸೇವರಿನ್, ಜೋಹರಾ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಆಯೋಜನೆಗಾಗಿ ಇಂಜಿನಿಯರ್ ಅಬ್ದುಲ್ ರಝಾಕ್ ರವರನ್ನು ಹಾಗೂ ಸಹಪಾಠಿಗಳ ವಾಟ್ಸಾಪ್ ಗ್ರೂಪ್ ರಚನೆ ಮತ್ತು ಸಂಯೋಜನೆಗಾಗಿ ಜೊಹರಾ ರವರನ್ನು ಸನ್ಮಾನಿಸಲಾಯಿತು. ಹಮೀದ್ ಎನ್ಎಸ್ ಕಾರ್ಯಕ್ರಮ ನಡೆಸಿಕೊಟ್ಟರು. ಫಾ. ವಿನ್ಸೆಂಟ್ ಧನ್ಯವಾದವಿತ್ತರು.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ