ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ (DKSC)ಕುವೈಟ್ ರಾಷ್ಟ್ರೀಯ ಸಮಿತಿ ವತಿಯಿಂದ “ನೂರೇ ಮದೀನ” ಎಂಬ ಘೋಷ ವಾಕ್ಯದೊಂದಿಗೆ 2025ರ ಸೆಪ್ಟೆಂಬರ್ 26 ರಂದು ಬೃಹತ್ ಮೀಲಾದ್ ಕಾರ್ಯಕ್ರಮ ನಡೆಯಲಿದೆ.ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣ ಮತ್ತು ದುಆ ನೇತ್ರತ್ವವನ್ನು ಸೈಯ್ಯದ್ ಮುಖ್ತಾರ್ ತಂಙಳ್ ವಹಿಸಲಿದ್ದಾರೆ.
ಕಾರ್ಯಕ್ರಮದ ಯಶಸ್ವಿಗಾಗಿ ಸ್ವಾಗತ ಸಮಿತಿಯನ್ನು ಅಗಸ್ಟ್ 8 ಶುಕ್ರವಾರ ಮಧ್ಯಾಹ್ನ 2:00 ಗಂಟೆಗೆ ಸರಿಯಾಗಿ DKSC ಕುವೈಟ್ ರಾಷ್ಟ್ರೀಯ ಉಪಾಧ್ಯಕ್ಷರಾದ ಅನ್ವರ್ ಕುಂಜಾಲ್ ರವರ ಅಧ್ಯಕ್ಷತೆಯಲ್ಲಿ ಸಾಲ್ಮೀಯ ಹನೀಫ್ ರವರ ಹಾಲ್ ನಲ್ಲಿ ರಚಿಸಲಾಯಿತು.
ಛೇರ್ಮನ್ ಆಗಿ ಯೂಸುಫ್ ಮುನಿಯಾಮ್, ಕನ್ವಿನರ್ ಆಗಿ ಶಫೀಕ್ ಅಹ್ಸನಿ ಮತ್ತು ಕೋಶಾಧಿಕಾರಿಯಾಗಿ ಲತೀಫ್ ಸೇದಿಯಾ ಅವರನ್ನು ಆಯ್ಕೆ ಮಾಡಲಾಯಿತು.
ಹಾಗೂ ಕೆಳಕಂಡ ವಿಭಾಗಕ್ಕೆ ನಾಯಕರನ್ನು ಆಯ್ಕೆಮಾಡಲಾಯಿತು.
ಪ್ರಚಾರ ಮತ್ತು ಮೀಡಿಯಾ : ಲಿಯಾಕತ್ ಗಂಗಾವಳಿ,ಹೈದರ್ ಉಚ್ಚಿಲ.
ಸ್ವಯಂ ಸೇವಕರ ವ್ಯವಸ್ಥೆ: ಹನೀಫ್ ನೇಜಾರ್ ಮತ್ತು ಇಮ್ತಿಯಾಜ್ ಸೂರಿಂಜೆ.
ಉಪಹಾರ ವ್ಯವಸ್ಥೆ: ಅನ್ವರ್ ಕುಂಜಾಲ್ ಮತ್ತು ಇಸ್ಮಾಯಿಲ್ ಉಚ್ಚಿಲ,ಕರೀಂ ಉಚ್ಚಿಲ, ಅಶ್ರಫ್ ಕುಂಜಾಲ್
ಫೈನಾನ್ಸಿಯಲ್ ಮತ್ತು ಅತಿಥಿ ಸ್ವಾಗತ: ಅಬ್ದುಲ್ ರಹ್ಮಾನ್ ಸಖಾಫಿ. ಲತೀಫ್ ಸೇದಿಯಾ, ಯೂಸುಫ್ ಮಂಚಕಲ್, ಅಬ್ದುಲ್ ರಹ್ಮಾನ್ ಖಾನ, ಇಕ್ಬಾಲ್ ಕಾಸ್ಕೊ.
ಸಭಾಂಗಣ ವ್ಯವಸ್ಥೆ: ಫೈಝಲ್ ಕಾಪು
ಸ್ವಾಗತ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಲಿಯಾಕತ್ ಗಂಗಾವಳಿ ಸ್ವಾಗತಿಸಿದರು. ಇಮ್ತಿಯಾಜ್ ಸೂರಿಂಜೆ ಧನ್ಯವಾದಗೈದರು.
ವರದಿ ಹೈದರ್ ಉಚ್ಚಿಲ
ಪ್ರಚಾರ ವಿಭಾಗ







