janadhvani

Kannada Online News Paper

ಇರಾನ್ ದಾಳಿಯಿಂದ ಅಪಾರ ನಾಶ, ನಷ್ಟ- ಭಿಕ್ಷಾಟನೆಗೆ ಮುಂದಾದ ಯಹೂದಿ ರಾಷ್ಟ್ರ ಇಸ್ರೇಲ್

40,000 ಕ್ಕೂ ಹೆಚ್ಚು ಮನೆಗಳು ಮತ್ತು ವ್ಯವಹಾರಗಳು ನಾಶವಾಗಿವೆ. ಪ್ರತಿಯೊಂದರ ಹಿಂದೆಯೂ ಒಂದು ಕುಟುಂಬ ಆರ್ಥಿಕವಾಗಿ ಧ್ವಂಸಗೊಂಡಿದೆ. ಬೀದಿಗಳು ಹಾಳಾಗಿವೆ. ಜೀವನೋಪಾಯಗಳು ನಾಶವಾಗಿವೆ. ಅಂಗಡಿಗಳು ಮುಚ್ಚಲ್ಪಟ್ಟಿವೆ. ವೇತನ ನಿಲ್ಲಿಸಲಾಗಿದೆ. ಬಾಕಿ ಉಳಿದಿರುವ ಮನೆಗಳೂ ವಾಸಯೋಗ್ಯವಾಗಿಲ್ಲ. ಭಾರಿ ಹಾನಿಯುಂಟಾಗಿದೆ

ಟೆಲ್ ಅವಿವ್: ಸುಮಾರು ವರ್ಷಗಳಿಂದೀಚೆಗೆ ಅಮೆರಿಕ ಸೇರಿದಂತೆ ಪಾಶ್ಚಾತ್ಯ ದೇಶಗಳ ದಿಗ್ಬಂಧನಕ್ಕೆ ಒಳಗಾಗಿ, ಯಾವುದೇ ರಫ್ತು ವಹಿವಾಟು ನಡೆಸಲು ಸಾಧ್ಯವಾಗದೇ, ತಾನಾಯಿತು ತನ್ನ ಪಾಡಾಯಿತು ಎಂಬ ನೆಲೆಯಲ್ಲಿ ಮುಂದುವರಿಯುತ್ತಿದ್ದ ಇರಾನನ್ನು ಕೆಣಕಿದ ಇಸ್ರೇಲ್ ಇದೀಗ ಭಿಕ್ಷಾಟನೆಗೆ ಇಳಿದಿರುವ ಬಗ್ಗೆ ವರದಿಯಾಗಿದೆ.

ಜೂನ್ 13 ರಂದು ಇಸ್ರೇಲ್ ನಡೆಸಿದ ದಾಳಿಯ ನಂತರ ಇರಾನ್ ನಡೆಸಿದ ಪ್ರತೀಕಾರದ ದಾಳಿಯಲ್ಲಿ ಇಸ್ರೇಲ್‌ನಲ್ಲಿ 40,000 ಕ್ಕೂ ಹೆಚ್ಚು ಮನೆಗಳು ಮತ್ತು ವ್ಯವಹಾರ ಕೇಂದ್ರಗಳು ನಾಶವಾಗಿವೆ ಮತ್ತು 10,600 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಇವರಿಗೆ ಧನ ಸಹಾಯದ ಮನವಿಯೊಂದಿಗೆ ಇಸ್ರೇಲಿ ಸಹಾಯ ಸಮಿತಿ ಓಜೆನ್ ನಿಧಿಸಂಗ್ರಹಣೆ ಪ್ರಾರಂಭಿಸಿದೆ. ನಷ್ಟದ ಅಂಕಿಅಂಶಗಳನ್ನು ಅವರ ವೆಬ್‌ಸೈಟ್‌ನಲ್ಲಿ ಮತ್ತು ‘ಟೈಮ್ಸ್ ಆಫ್ ಇಸ್ರೇಲ್’ ನ ಸುದ್ದಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

“ಜೂನ್ 13 ರಂದು ಇಸ್ರೇಲ್ ನಡೆಸಿದ ಆಪರೇಷನ್ ರೈಸಿಂಗ್ ಲಯನ್‌ಗೆ ಪ್ರತೀಕಾರವಾಗಿ, ಇರಾನ್ ಇಸ್ರೇಲ್‌ನಾದ್ಯಂತ ನಗರಗಳ ಮೇಲೆ ದೈನಂದಿನ ಕ್ಷಿಪಣಿ ದಾಳಿಗಳನ್ನು ನಡೆಸಿತು. ಇರಾನಿನ ಕ್ಷಿಪಣಿಗಳು ಇಡೀ ನಗರದ ನೆರೆಹೊರೆಗಳನ್ನೂ ನೆಲಸಮಗೊಳಿಸಿವೆ. 10,600 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. 40,000 ಕ್ಕೂ ಹೆಚ್ಚು ಮನೆಗಳು ಮತ್ತು ವ್ಯವಹಾರಗಳು ನಾಶವಾಗಿವೆ. ಪ್ರತಿಯೊಂದರ ಹಿಂದೆಯೂ ಒಂದು ಕುಟುಂಬ ಆರ್ಥಿಕವಾಗಿ ಧ್ವಂಸಗೊಂಡಿದೆ. ಬೀದಿಗಳು ಹಾಳಾಗಿವೆ. ಜೀವನೋಪಾಯಗಳು ನಾಶವಾಗಿವೆ. ಅಂಗಡಿಗಳು ಮುಚ್ಚಲ್ಪಟ್ಟಿವೆ. ವೇತನ ನಿಲ್ಲಿಸಲಾಗಿದೆ. ಬಾಕಿ ಉಳಿದಿರುವ ಮನೆಗಳೂ ವಾಸಯೋಗ್ಯವಾಗಿಲ್ಲ. ಭಾರಿ ಹಾನಿಯುಂಟಾಗಿದೆ. 300,000 ಕ್ಕೂ ಹೆಚ್ಚು ಮೀಸಲು ಸೈನಿಕರನ್ನು ಕರೆಸಲಾಗಿದೆ. ಅನೇಕರು ತಮ್ಮ ಕುಟುಂಬಗಳು ಮತ್ತು ಸಣ್ಣ ವ್ಯವಹಾರಗಳನ್ನು ಬಿಟ್ಟು ಮಿಲಿಟರಿಗೆ ಸೇರಿದ್ದಾರೆ. ಪೀಡಿತ ಪ್ರದೇಶಗಳಲ್ಲಿ ಆರ್ಥಿಕ ವಹಿವಾಟುಗಳು ಸ್ಥಗಿತಗೊಂಡಿವೆ.”

“ಸಾವಿರಾರು ವ್ಯವಹಾರಗಳು ಮುಚ್ಚುತ್ತಿವೆ ಅಥವಾ ಬಿಕ್ಕಟ್ಟನ್ನು ಎದುರಿಸುತ್ತಿವೆ. ಈ ಸಂಖ್ಯೆಗಳು ಪ್ರತಿದಿನ ಹೆಚ್ಚುತ್ತಿವೆ. ಸ್ಥಳೀಯ ಸರ್ಕಾರಿ ವ್ಯವಸ್ಥೆಗಳು ಭೌತಿಕ ಮತ್ತು ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಲು ಹೆಣಗಾಡುತ್ತಿವೆ” ಎಂದು ವರದಿ ಹೇಳುತ್ತದೆ.

ಪರಿಹಾರ ಒದಗಿಸಲು OGEN ಆರಂಭದಲ್ಲಿ 100 ಮಿಲಿಯನ್ ಇಸ್ರೇಲಿ ಶೆಕೆಲ್‌ಗಳನ್ನು (252.72 ಕೋಟಿ ಭಾರತೀಯ ರೂಪಾಯಿಗಳು) ಸಂಗ್ರಹಿಸುವ ಗುರಿಯನ್ನು ಹೊಂದಿದೆ. ಯುದ್ಧದಲ್ಲಿ ಹೆಚ್ಚು ಹಾನಿಗೊಳಗಾದ ಮನೆಗಳು ಮತ್ತು ಸಣ್ಣ ವ್ಯವಹಾರಗಳಿಗೆ ತಕ್ಷಣದ ಸಹಾಯವನ್ನು ಒದಗಿಸಲಾಗುವುದು ಎಂದು ಅವರು ಹೇಳುತ್ತಾರೆ.