ಮಂಗಳೂರು: ಇಂದು ಮಾದಕ ವಸ್ತುಗಳ ಮಾರಾಟ, ಬಳಕೆ ಅತಿಯಾಗಿದ್ದು ಇದಕ್ಕೆ ಕಡಿವಾಣ ಹಾಕುವಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಪ್ರಯತ್ನಿಸಬೇಕು. ಅಲ್ ಸಲಾಮ ಸಂಸ್ಥೆ ಈ ಬಗ್ಗೆ ಹಲವು ಅಧ್ಯಯನ ನಡೆಸಿ ಈ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಬ್ಯಾರಿಸ್ ಚೇಂಬರ್ ಅಧ್ಯಕ್ಷ ಎಸ್ ಎಂ ಆರ್ ರಶೀದ್ ಹಾಜಿ ಹೇಳಿದರು.
ಡ್ರಗ್ಸ್ ಮುಕ್ತ ಅಭಿಯಾನ ಭಾಗವಾಗಿ ಕಾರ್ಯಾಚರಿಸುವ ಅಲ್ ಸಲಾಮ ಸಂಸ್ಥೆಯ ಮುಖಂಡರು ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಮಾದಕ ವಸ್ತುಗಳು ಇಂದು ವ್ಯಾಪಾಕವಾಗಿದ್ದು ಇದರಲ್ಲಿ ನಮ್ಮ ಸಮುದಾಯದ ಮಕ್ಕಳೇ ಬಲಿಯಾಗುತ್ತಿರುವುದು ಅತ್ಯಂತ ದುರಂತ.
ಹೇಗಾದರೂ ಶ್ರಮ ವಹಿಸಿ ಮಾದಕತೆಯನ್ನು ತೊಳಗಿಸಬೇಕು. ಈ ನಿಟ್ಟಿನಲ್ಲಿ ಜಿ ಏ ಬಾವಾ ನೇತೃತ್ವದಲ್ಲಿ ಯುವಕರ ತಂಡ ನಡೆಸುತ್ತಿರುವ ಕಾರ್ಯಾಚರಣೆ ಉತ್ತಮ ಬೆಳವಣಿಗೆ.
ನಿಮ್ಮ ಜೊತೆಗೆ ಸದಾ ನಾವು ಕೈ ಜೋಡಿಸುತ್ತೇವೆ ಎಂದು ರಶೀದ್ ಹಾಜಿ ತಿಳಿಸಿದ್ದಾರೆ.
ಕಾಲದ ಅತ್ಯಂತ ಬೇಡಿಕೆಯ ಡ್ರಗ್ಸ್ ನಿರ್ಮೂಲನೆ ಬಗ್ಗೆ ನಿರ್ವಹಿಸಬೇಕಾದ ಹಲವು ವಿಷಯಗಳನ್ನು ಸಮಿತಿಯೊಂದಿಗೆ ರಶೀದ್ ಹಾಜಿ ಹಂಚಿಕೊಂಡರು.







