janadhvani

Kannada Online News Paper

ಕಾನಕೆರೆ ದುರಂತದಲ್ಲಿ ಮಗು ಮೃತ್ಯು- ಕರ್ನಾಟಕ ಮುಸ್ಲಿಂ ಜಮಾಅತ್ ನಾಯಕರಿಂದ ಸಾಂತ್ವನ

ಉಳ್ಳಾಲ: ದೇರಳಕಟ್ಟೆ. ಕಾನಕೆರೆಯಲ್ಲಿ ಮನೆಯ ಹಿಂಬದಿಯ ಗುಡ್ಡ ಮತ್ತು ತಡೆಗೋಡೆ ಕುಸಿದು ಹತ್ತು ವರ್ಷ ಪ್ರಾಯದ ಪುಟ್ಟ ಮಗು ಅಸುನೀಗಿದ್ದು, ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ.ಜಿಲ್ಲಾ ನಾಯಕರು ಭೇಟಿ ನೀಡಿ ಮನೆ ಮಂದಿಯನ್ನು ಸಾಂತ್ವನ ಪಡಿಸಿ, ಪ್ರಾರ್ಥನೆ ನಡೆಸಿದರು.

ಉಳ್ಳಾಲ ತಾಲೂಕಿನ ಬೆಳ್ಮ ಗ್ರಾಮದ ಕಾನಕರೆಯಲ್ಲಿರುವ ನೌಶಾದ್ ಅವರ ಮನೆಗೆ ಹಿಂಬದಿಯ ಗುಡ್ಡೆ, ತಡೆಗೋಡೆ ಕುಸಿದು ಬಿದ್ದು ನೌಶಾದ್ ರ ಪುತ್ರಿ ಫಾತಿಮ ನಈಮ (10) ರವರು ನಿಧನರಾಗಿದ್ದರು.

ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ ಜಿಲ್ಲಾಧ್ಯಕ್ಷ ಹನೀಫ್ ಹಾಜಿ ಬಜ್ಪೆ, ಪ್ರ.ಕಾರ್ಯದರ್ಶಿ ಕತಾರ್ ರಹೀಂ ಸಅದಿ, ಜಿಲ್ಲಾ ಮುಖಂಡರಾದ ಅಲಿ ಕುಂಞಿ ಪಾರೆ, ಇಸ್ಮಾಯಿಲ್ ಕಿನ್ಯ, ಇಸ್ಮಾಯಿಲ್ ಸಅದಿ ಉರುಮನೆ, ಯೂಸುಫ್ ರಝ್ವಿ ದೇರಳಕಟ್ಟೆ, ಕೆಎಂಜೆ ದೇರಳಕಟ್ಟೆ ವಲಯ ಅಧ್ಯಕ್ಷರಾದ ಕೆ ಇ ರಝ್ವಿ ಸಾಲೆತ್ತೂರು, ಝೋನ್ ಮುಖಂಡರಾದ ಅಬ್ದುಲ್ ರಝಾಕ್ ಆಲಡ್ಕ, SYS ವಲಯಾಧ್ಯಕ್ಷ ಮುತ್ತಲಿಬ್ ಸಖಾಫಿ,
ಉಪಾಧ್ಯಕ್ಷ ಹಮೀದ್ ಕಿನ್ಯಾ,
ಎಸ್ ಎಸ್ ಎಫ್ ಡಿವಿಷನ್ ಮುಖಂಡರಾದ ನೌಫಲ್ ಅಹ್ಸನಿ, ಹಾರಿಸ್ ಅಡ್ಕರೆ ಮುಂತಾದವರು ಉಪಸ್ಥಿತರಿದ್ದರು.