ಕರುನಾಡುಕಂಡ ಶ್ರೇಷ್ಠ ರಾಜಕಾರಣಿ ಯು ಟಿ ಖಾದರ್ ಹೆಸರು ಎಳೆದು ತರುವ ವಾಟ್ಸಪ್ ವೀರರಿಗೆ ಅಭಿಮಾನಿಗಳು ತಕ್ಕ ಉತ್ತರ ನೀಡಿದ್ದಾರೆ.
ಯಾವ ವಿಚಾರ ಬಂದ್ರು ಸನ್ಮಾನ್ಯ ಯು ಟಿ ಖಾದರ್ ರವರನ್ನು ಎಳೆದುತಂದು ವ್ಯೆಯಕ್ತಿಗವಾಗಿ ತೇಜೋವದೆ ಮಾಡುವುದು, ಅವರ ಕುಟುಂಬದ ಹೆಸರು ಎಳೆದು ತರುವುದು ಶೋಭೆಯಲ್ಲ ಎಂದು ಮುಸ್ತಫಾ ಅಬ್ದುಲ್ಲಾ ಉಳ್ಳಾಲ ಹಾಗೂ ಅಭಿಮಾನಿ ಬಳಗ ತಿಳಿಸಿದ್ದಾರೆ
ನಿಂತರೂ ಬೈಗುಳ ಕೂತರೂ ಬೈಗುಳ ಒಟ್ಟಿನಲ್ಲಿ ಹೇಗಾದ್ರು ಹೆಮ್ಮೆಯ ನಾಯಕನನ್ನು ಮಟ್ಟ ಹಾಕಬೇಕು ಅಂತ ಪ್ರಯತ್ನ ಪಡುವವರ ಕುತಂತ್ರ ನಿನ್ನೆ ಮೊನ್ನೆದಲ್ಲ.
ಆದರೆ ನೀವು ಎಷ್ಟು ಅಸೂಯೇ ಪಡುತ್ತಿರೋ ಯು ಟಿ ಸರ್ ಬೆಳೆಯುತ್ತನೇ ಇರುತ್ತಾರೆ. ಅಸೂಯೇ ಪಡುವವರು ವಾಟ್ಸಾಪಿನಲ್ಲೇ ಇರ್ತಾರೆ.
ವಖ್ಫ್ ವಿಷಯದಲ್ಲಿ ಉಲಮಾಗಳು ಒಟ್ಟು ಸೇರಿ ಪ್ರತಿಭಟನೆ ಮಾಡಿದಾಗ ಅದಕ್ಕೆ ಬೇಕಾದ ಎಲ್ಲಾ ಸಹಕಾರ ನೀಡಿದ ಮೊಟ್ಟ ಮೊದಲಿಗ ಯು ಟಿ ಖಾದರ್.
ಮೊನ್ನೆಯ ಕೊಲೆ ನಡೆದ ಸಂದರ್ಭದಲ್ಲಿ ಯು ಟಿ ಖಾದರ್ ಪವಿತ್ರ ಮಕ್ಕಾದಲ್ಲಿ ಇಬಾದತಿನಲ್ಲಿದ್ದರು.
ಈ ವಿಷಯ ಅವರಿಗೆ ಗೊತ್ತಾದ ತಕ್ಷಣ ಮುಖ್ಯ ಮಂತ್ರಿಯಿಂದ ಹಿಡಿದು ಎಲ್ಲರಿಗೂ ಕರೆ ಮಾಡಿ ತಪ್ಪಿತಸ್ತರಿಗೆ ಕಠಿಣ ಶಿಕ್ಷೆ ಆಗುವಂತೆ ಅದರ ಹಿಂದೆ ಕೈವಾಡ ಇರುವುವವರನ್ನು ಪಟ್ಟಹಚ್ಚುವಂತೆ ಅರಬಿ ನಾಡಿನಿಂದ ಪ್ರಯತ್ನಿಸಿದರು ಟೀಕೆಗಳು ನಿಲ್ಲಲಿಲ್ಲ.
ನಿಮಗೆ ತಾಕತ್ತು ಇದ್ರೆ ಅವರ ಮುಂದೆ ಬಂದು ಕೇಳಿ. ಅದು ಬಿಟ್ಟು ವಾಟ್ಸಾಪಿನಲ್ಲಿ ಬೊಬ್ಬೆ ಹಾಕಿ ಸುಳ್ಳು ವದಂತಿಗಳನ್ನು ಹಂಚದಿರಿ ಎಂದು ಕಿಡಿಕಾರಿದ್ದಾರೆ.
ಯು ಟಿ ಸರ್ ಈ ಸಮುದಾಯಕ್ಕಾಗಿ ಮಾಡಿದ ಸೇವೆಯ ಒಂದು ರೋಮದಷ್ಟು ಕೆಲಸ ಮಾಡದ ವಾಟ್ಸಾಪ್ ವೀರರಿಗೆ ಇವರ ಹೆಸರೇಳದಿದ್ದರೆ ನಿದ್ದೆ ಬರಲ್ಲ.
ನಿಮಗೆ ಹಾಗೇನಾದ್ರೂ ಅವರ ಬಗ್ಗೆ ಚರ್ಚೆಗೆ ಬರುವುದಾದರೆ ನೇರವಾಗಿ ಚರ್ಚೆಗೆ ಬನ್ನಿ ಎಂದು ಮುಸ್ತಫಾ ಅಬ್ದುಲ್ಲಾ ಸಾವಲಾಕಿದ್ದಾರೆ.
ಎಲ್ಲದಕ್ಕೂ ಒಂದು ಮಿತಿ ಬೇಕು
ಅನ್ಯಾಯವಾದ್ರೆ ಮಾತನಾಡೋಣ ಅದು ಬಿಟ್ಟು ಯು ಟಿ ಖಾದರ್ ಹೆಸರನ್ನು ಎಳೆದು ತಂದು ಹೀರೋ ಆಗಲು ಬರಬೇಡಿ ಎಂದು ಅವರು ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ