ಅಡ್ಡೂರು ಪೊಳಲಿ ಸಮೀಪದ ಕೊಳ್ತಮಜಲು ಎಂಬಲ್ಲಿ ಅಮಾಯಕನೊಬ್ಬನ ಕೊಲೆ ಮಾಡಿರುವುದನ್ನು ದಕ್ಷಿಣ ಕನ್ನಡ ಜಿಲ್ಲಾ ಸಖಾಫಿ ಕೌನ್ಸಿಲ್ ಸಮಿತಿ ತೀವ್ರವಾಗಿ ಖಂಡಿಸಿದೆ.
ಇತ್ತೀಚೆಗೆ ದಕ ಜಿಲ್ಲೆಯಲ್ಲಿ ಕೋಮುವಾದಿ ಶಕ್ತಿಗಳಿಂದ ದ್ವೇಷ ಭಾಷಣ ನಿರಂತರವಾಗಿ ನಡೆಯುತ್ತಿದ್ದು,ಇದರಿಂದ ಪ್ರಚೋದನೆ ಗೊಂಡು ಬಹಿರಂಗವಾಗಿ ಹಾಡ ಹಗಲೇ ಹತ್ಯೆಗಳು ನಡೆಯುತ್ತಿದೆ,ಈ ದ್ವೇಷ ಭಾಷಣಕಾರರ ವಿರುದ್ಧ
ಕ್ರಮ ಕೈಗೊಳ್ಳದಿರುವುದೇ ಸರಣಿ ಕೊಲೆಗಳು ಮುಂದುವರಿಯಲು ಕಾರಣವಾಗಿದೆ.
ವರ್ಷಗಳ ಹಿಂದೆ ನಡೆದ ಯಾವುದೋ ಹತ್ಯೆಗೆ ಪ್ರತೀಕಾರವಾಗಿ ಫಾಝಿಲ್ ಮಸೂದ್ ಎಂಬವರನ್ನು ಕೊಂದು ಪ್ರತೀಕಾರ ತೀರಿಸಿದ್ದೇವೆ ಎಂಬರ್ಥದಲ್ಲಿ ಮಂಗಳೂರಿನ ದ್ವೇಷ ಭಾಷಣಕಾರನೋರ್ವ ಬಹಿರಂಗ ಹೇಳಿಕೆ ಕೊಟ್ಟಿದ್ದ.
ಅಂತಹ ಪುಂಡರ ವಿರುದ್ಧ ಈ ತನಕ ಕ್ರಮ ಜರಗಿಸಿಲ್ಲ.ಸರಕಾರ ಹಾಗೂ ಪೊಲಿಸ್ ಇಲಾಖೆಯ ಇಂತಹ ಮೃದುಧೋರಣೆಗಳಿಂದಾಗಿಯೇ ಅಮಾಯಕರು ಬಲಿಯಾಗುತ್ತಿದ್ದಾರೆ .
ಆದ್ದರಿಂದ ರಾಜ್ಯದ ಅಸಮರ್ಥ ಗೃಹ ಸಚಿವರನ್ನು ಬದಲಾವಣೆ ಮಾಡಿ ಗೃಹ ಇಲಾಖೆಗೆ ಸಮರ್ಥ ಸಚಿವರನ್ನು ನೇಮಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಖಾಫಿ ಕೌನ್ಸಿಲ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.







