janadhvani

Kannada Online News Paper

ಅಮಾಯಕ ಯುವಕನ ಕೊ*ಲೆ ಖಂಡನೀಯ, ಕಠಿಣ ಕಾನೂನಿನಡಿಯಲ್ಲಿ ಶಿಕ್ಷೆ ನೀಡುವಂತೆ ಗೃಹಮಂತ್ರಿಯೊಂದಿಗೆ ಸಮಾಲೋಚನೆ- ನಿವೃತ್ತ DCP ಜಿ ಏ ಬಾವಾ

ಕೊಲೆಗಾರ ಎಷ್ಟೇ ದೊಡ್ಡ ಜಾಲವಿದ್ದರೂ ಕಠಿಣ ಕಾನೂನು ಜರಗಿಸುವ ಬಗ್ಗೆ ಈಗಾಗಲೇ ಗೃಹಮಂತ್ರಿಯ ಜೊತೆಗೆ ಮಾತನಾಡಿದ್ದೇನೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಳ್ತಮಜಲು ಬೆಳ್ಳೂರು ನಿವಾಸಿ ಪಿಕಪ್ ವಾಹನ ಚಾಲಕ ಅಬ್ದುಲ್ ರಹಿಮಾನ್ ಎಂಬ ಅಮಾಯಕ ಯುವಕನನ್ನು ದುಷ್ಕರ್ಮಿಗಳು ಕೊಲೆ ಮಾಡಿದ ವರದಿ ಕೇಳಿ ತುಂಬಾ ನೋವಾಗಿದೆ.

ಕೊಲೆಗಾರ ಎಷ್ಟೇ ದೊಡ್ಡ ಜಾಲವಿದ್ದರೂ ಕಠಿಣ ಕಾನೂನು ಜರಗಿಸುವ ಬಗ್ಗೆ ಈಗಾಗಲೇ ಗೃಹಮಂತ್ರಿಯ ಜೊತೆಗೆ ಮಾತನಾಡಿದ್ದೇನೆ.
ಈ ಸಂಭಂದವಾಗಿ ಮಂಗಳೂರು ಪೊಲೀಸ್ ಕಮಿಷನರ್ ಸೇರಿದಂತೆ ಸಂಭಂದಪಟ್ಟ ಎಲ್ಲಾ ಅಧಿಕಾರಿಗಳ ಜೊತೆಗೆ ಮಾತನಾಡಿದ್ದೇನೆ.

ಜಿಲ್ಲೆಯ ಎಲ್ಲಾ ಜನತೆ ಶಾಂತಿಯನ್ನು ಕಾಪಾಡುವಂತೆ ಮನವಿ ಮಾಡುತ್ತೇನೆ.
ಯಾರ ತಂಟೆಗೂ ಹೋಗದೆ ಎಲ್ಲರೊಂದಿಗೂ ಪ್ರೀತಿಯಿಂದ ಬೆರೆಯುವ ಅಮಾಯಕ ಯುವಕನನ್ನು ಕೊಲೆ ಮಾಡುವಷ್ಟು ಕಠೋರ ಮನಸ್ಸಿನ ಕೊಲೆಗಟುಕರು ಯಾರೇ ಆದರೂ ಪತ್ತೆಹಚ್ಚಿ ಅದರ ಹಿಂದೆ ಯಾರಾ ಕೖವಾಡವಿದೆಯೋ ಅವರನ್ನು ಬಂಧಿಸಿ ಮುಂದೆ ಇಂತಹಾ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳುವಂತೆ ಗೃಹಮಂತ್ರಿಯಲ್ಲಿ ಮಾತನಾಡಿದ್ದೇನೆ ಎಂದು ಪತ್ರಿಕಾ ಪ್ರಕಟಣೆಗೆ ಜಿ ಏ ಬಾವಾ ತಿಳಿಸಿದ್ದಾರೆ.