ಅಲ್ ಮದೀನತುಲ್ ಮುನವ್ವರ, ಮೂಡಡ್ಕ, ಮಸ್ನಾ ಇದರ 7ನೇ ವಾರ್ಷಿಕ ಮಹಾಸಭೆಯು ಸಮಿತಿಯ ಅಧ್ಯಕ್ಷರಾದ ಜನಾಬ್ ಅಬ್ದುಲ್ ರಝಾಖ್ ಉಜಿರೆ ಇವರ ಘನ ಅಧ್ಯಕ್ಷತೆಯಲ್ಲಿ ತಾರೀಖು 11-05-2018ರ ಶುಕ್ರವಾರ ಜುಮಾ ನಮಾಝಿನ ಬಳಿಕ ಶಿಫಾದಲ್ಲಿರುವ ಅಲೀಫ್ ಇಂಟರ್-ನೇಷನಲ್ ಸ್ಕೂಲಿನಲ್ಲಿ ಜರಗಿತು.
ಸಭೆಯು ಅಲ್ ಮದೀನತುಲ್ ಮುನವ್ವರ ಮೂಡಡ್ಕ ಇದರ ಜನರಲ್ ಮ್ಯಾನೇಜರ್ ಜನಾಬ್ ಅಶ್ರಫ್ ಸಖಾಫಿ ಮಾಡಾವು ಇವರ ದುಆದೊಂದಿಗೆ ಶುಭಾರಂಭಗೊಂಡಿತು.ಅಲ್ ಮುರೂಜ್ ಘಟಕದ ಪ್ರಧಾನ ಕಾರ್ಯದರ್ಶಿ ಜನಾಬ್ ದಾವೂದ್ ಸಅದಿ ಖಿರಾಆತ್ ಪಠಿಸಿದರು.ದಾರುಲ್ ಇರ್ಷಾದ್ ಇದರ ರಿಸೀವರರಾದ ಉಸ್ತಾದ್ ರಶೀದ್ ಮದನಿಯವರು ಸ್ವಾಗತಿಸಿದರು.
ಕೆ.ಸಿ.ಎಫ್. ರಿಯಾಧ್ ಝೋನಲ್ ಅಧ್ಯಕ್ಷರಾದ ಜನಾಬ್ ಹನೀಫ್ ಬೆಳ್ಳಾರೆ ಪವಿತ್ರ ಖುರ್’ಆನಿನ ಸೂಕ್ತವನ್ನು ಪಠಿಸಿ ಸಭೆಯನ್ನು ಉದ್ಘಾಟಿಸಿದರು.
ಬತ್ತಾ ಘಟಕದ ಪ್ರಧಾನ ಕಾರ್ಯದರ್ಶಿ ಜನಾಬ್ ಹಬೀಬ್ ಟಿ.ಹೆಚ್ 2017-2018ರ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರವನ್ನು ಸವಿಸ್ತಾರವಾಗಿ ಸಭೆಯಲ್ಲಿ ಮಂಡಿಸಿ ಸಭೆಯ ಅಂಗೀಕಾರವನ್ನು ಪಡೆದುಕೊಂಡರು.
2018-2019ರ ಸಾಲಿಗೆ ಈ ಕೆಳಗಿನಂತೆ ನೂತನ ಸಮಿತಿಯನ್ನು ರಚಿಸಲಾಯಿತು.
ಗೌರವಾಧ್ಯಕ್ಷರು:ಅಬ್ದುಲ್ ರಝಾಖ್ ಉಜಿರೆ,ಅಧ್ಯಕ್ಷರು:ದಾವೂದ್ ಕಜಮಾರ್,ಉಪಾಧ್ಯಕ್ಷರುಗಳು:1. ಯೂಸುಫ್ ಕಳಂಜಿಬೈಲ 2. ಹೈದರ್ ಸರಳೀಕಟ್ಟೆ
ಪ್ರಧಾನ ಕಾರ್ಯದರ್ಶಿ:ಶರೀಫ್ ಗುಂಪಕಲ್ಲು, ಜೊತೆ ಕಾರ್ಯದರ್ಶಿಗಳು:1. ಉವೈಸ್ ಜೋಗಿಬೆಟ್ಟು 2. ಹಕೀಂ ಪಾತೂರು.ಕೋಶಾಧಿಕಾರಿ: ಖಾಸಿಂ ಕನರಾಜೆ
ಸದಸ್ಯರು: ಅಬ್ಬಾಸ್ ಮಾಣಿ, ಇಬ್ರಾಹಿಂ ಮಾಣಿ, ಇಬ್ರಾಹಿಂ ಮುರ, ಅಬ್ದುಲ್ ಕಾದರ್ ಮಠ, ಶೇಕಬ್ಬ ಜೋಗಿಬೆಟ್ಚು, ಉಸ್ಮಾನ್ ಮುರ, ಕರೀಂ ಕೊಡ್ಲುಪೇಟೆ, ದಾವೂದ್ ಮಡಿಕೇರಿ, ಇಬ್ರಾಹಿಂ ಬೇಂಗಿಲ
ಮುಖ್ಯ ಅತಿಥಿಗಳಾಗಿ ಅಲ್ ಮದೀನತುಲ್ ಮುನವ್ವರ ಮೂಡಡ್ಕ ಇದರ ಜನರಲ್ ಮ್ಯಾನೇಜರ್ ಉಸ್ತಾದ್ ಅಶ್ರಫ್ ಸಖಾಫಿ ಮಾಡಾವು ಹಾಗೂ ಖಮರುಲ್ ಉಲಮಾ ಎ.ಪಿ. ಉಸ್ತಾದರ ಸುಪುತ್ರ ಉಸ್ತಾದ್ ಅಬ್ದುಲ್ ಹಕೀಂ ಅಝ್ಹರಿ ಸಭೆಯಲ್ಲಿ ಹಾಜರಿದ್ದರು.
ನೂತನ ಪ್ರಧಾನ ಕಾರ್ಯದರ್ಶಿ ಜನಾಬ್ ಶರೀಫ್ ಗುಂಪಕಲ್ಲು ಸಭಿಕರಿಗೆ ಧನ್ಯವಾದಗೈದರು.















ಇನ್ನಷ್ಟು ಸುದ್ದಿಗಳು
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ