janadhvani

Kannada Online News Paper

ಕೆಸಿಎಫ್ ಒಮಾನ್ ಹುಬ್ಬುರ್ರಸೂಲ್ ಮೀಲಾದ್ ಕಾನ್ಫರೆನ್ಸ್ ಯಶಸ್ವಿಗೆ ಕರೆ

ಮಸ್ಕತ್ : ಪ್ರವಾದಿ ಪೈಗಂಬರ್ ಮುಹಮ್ಮದ್ ಮುಸ್ತಫಾ (ಸ.ಅ) ರವರ 1499 ನೇ ಜನ್ಮ ದಿನಾಚರಣೆಯ ಭಾಗವಾಗಿ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿ ಅಯೋಜಿಸಲ್ಪಡುವ ಬೃಹತ್ ಮೀಲಾದ್ ಸಮಾವೇಶ 2024
ಸಪ್ಟೆಂಬರ್ 27 ಶುಕ್ರವಾರ ರಂದು KCF ಒಮಾನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಯ್ಯೂಬ್ ಕೋಡಿ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.“ಮುತ್ತು ನಬಿ ﷺ ಮಾನವೀಯತೆಯ ಮಾರ್ಗದರ್ಶಿ” ಎಂಬ ಧ್ಯೇಯ ವಾಕ್ಯದೊಂದಿಗೆ ಅಲ್ ಫಾಮ್ ಬಾಲ್ ರೂಮ್,ಝಾಖರ್ ಮಾಲ್ ,ಅಲ್ ಖುವೈರ್ ನಲ್ಲಿ ವಿಜೃಂಭಣೆಯಿಂದ ನಡೆಯಲಿರುವ ಮೀಲಾದ್ ಸಮಾವೇಶ ದಲ್ಲಿ ಮೀಲಾದ್ ಸ್ವಾಗತ ಸಮಿತಿ ಚಯರ್ಮೆನ್ ಸಯ್ಯದ್ ಆಬಿದ್ ತಂಙಳ್ ಅಲ್ ಐದ್ರೋಸಿ ರವರು ದುಅ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಡಿಪಿ ಯೂಸುಫ್ ಸಖಾಫಿ ಬೈತಾರ್ (ಅಧ್ಯಕ್ಷರು, KCF ಅಂತರಾಷ್ಟ್ರೀಯ ಸಮಿತಿ)ಮತ್ತು ಮೌಲಾನ NKM ಶಾಫಿ ಸಅದಿ ಬೆಂಗಳೂರು ರವರು ಹುಬ್ಬುರ್ರಸೂಲ್ (ಸ.ಅ) ಪ್ರಭಾಷಣ ಹಾಗೂ ಮದೀನಾದ ಮದ್ಹ್ ಗೀತೆಗಳ ಮೂಲಕ ಗುರಿತಿಸಿಕೊಂಡಿರುವ ಮುಹಮ್ಮದ್ ನಬೀಲ್ ಬರಕಾತಿ ಬೆಂಗಳೂರು ರವರು ನಅತೇ ಶರೀಫ್ ಆಲಾಪನೆ ಮಾಡಲಿದ್ದಾರೆ.ಮುಖ್ಯ ಅತಿಥಿಗಳಾಗಿ‌ ಅಲಿ ಮುಸ್ಲಿಯಾರ್ ಬಹರೈನ್ ( ಫೈನಾನ್ಸ್ ಕಂಟ್ರೋಲರ್, KCF ಅಂತರಾಷ್ಟ್ರೀಯ ಸಮಿತಿ)
ಅಬ್ದುಲ್ ಹಮೀದ್ ಈಶ್ವರಮಂಗಳ (ಪ್ರದಾನ ಕಾರ್ಯದರ್ಶಿ KCF ಅಂತರಾಷ್ಟ್ರೀಯ ಸಮಿತಿ) ಭಾಗವಹಿಸಲಿದ್ದಾರೆ. ಹಾಗೂ ಶಫೀಕ್ ಬುಖಾರಿ (ಅಧ್ಯಕ್ಷರು, ICF ಒಮಾನ್), ಮೊನಬ್ಬ ಹಾಜಿ ( ಅಧ್ಯಕ್ಷರು, DKSC ಒಮಾನ್), ಎಸ್ ಮುಹಮ್ಮದ್ ಹಾಜಿ, ಕೆ ಟಿ ಮುಹಮ್ಮದ್, ಆಬಿದ್ ಪಾಷ, ಡಾ. ಹಾಫಿಝ್ ಅಬ್ದುಲ್ ರಝಾಖ್ ಹಾಜಿ
ಹಾಗೂ ಇನ್ನಿತರ ಪ್ರಮುಖ ಸಯ್ಯಿದರು, ಉಲಮಾ, ಉಮಾರಾ ನೇತಾರರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು
ಮೀಲಾದ್ ಸ್ವಾಗತ ಸಮಿತಿಯು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.

error: Content is protected !! Not allowed copy content from janadhvani.com