janadhvani

Kannada Online News Paper

ದಾರುಲ್ ಹಿಕ್ಮ ಬೆಳ್ಳಾರೆ ಜುಬೈಲ್ ಸಮಿತಿ ಅಸ್ತಿತ್ವಕ್ಕೆ

ಜುಬೈಲ್ : ದಾರುಲ್ ಹಿಕ್ಮ ಎಜುಕೇಷನ್ ಸೆಂಟರ್ ಬೆಳ್ಳಾರೆ ಇದರ ಜುಬೈಲ್ ಸಮಿತಿ ದಿನಾಂಕ 09-09-2024 ರಂದು ಜುಬೈಲ್ KCF ಹಾಲ್ ನಲ್ಲಿ ನಡೆದ ಸಂಸ್ಥೆಯ ಅಧ್ಯಕ್ಷರಾದ ಕಾಜೂರ್ ತಂಗಳ್ ಅವರ ನೇತೃತ್ವದಲ್ಲಿ ನಡೆದ ಇಶ್ಕೆ ಮದೀನಾ ಮಜಲಿಸ್ ನಂತರ ನಡೆದ ಸಭೆಯಲ್ಲಿ ಅಸ್ತಿತ್ವಕ್ಕೆ ಬಂದಿದೆ.

ದಾರುಲ್ ಹಿಕ್ಮ ಒರ್ಗನೈಸರ್ ಅಬ್ಬಾಸ್ ಮುಸ್ಲಿಯಾರ್ ಅವರ ದುಃವಾದೊಂದಿಗೆ ಆರಂಭಗೊಂಡ ಸಭೆಯನ್ನು KCF ಜುಬೈಲ್ ಝೋನ್ ಅಧ್ಯಕ್ಷರು ಅಝೀಜ್ ಸಹದಿ ಕುಡ್ತಮುಗೇರು ಉದ್ಘಾಟಿಸಿದರು. ಸಾಲಿಹ್ ಬೆಳ್ಳಾರೆ ದಾರುಲ್ ಹಿಕ್ಮ ಸಂಸ್ಥೆಯ ಪರಿಚಯ ಮತ್ತು ಮುಂದಿನ ಕಾರ್ಯಪದ್ಧತಿ ಕುರಿತು ಸಭೆಯಲ್ಲಿ ವಿವರಿಸಿದರು. ದಾರುಲ್ ಹಿಕ್ಮ ಸೌದಿ ರಾಷ್ಟ್ರೀಯ ಅಧ್ಯಕ್ಷರಾದ ರಶೀದ್ ಹಾಜಿ ಹೊಸ ಸಮಿತಿಯನ್ನು ಘೋಷಿಸಿದರು. ಹೊಸ ಸಮಿತಿ ಪದಾಧಿಕಾರಿಗಳ ವಿವರ
ಮುಖ್ಯ ಸಲಹೆಗಾರರಾಗಿ :- ಅಬ್ದುಲ್ ಅಝೀಜ್ ಸಹದಿ ಕುಡ್ತೆಮುಗೇರು
ಶಾಫಿ ಮದನಿ ಮಾಡವು
ಆಸ್ಲಮ್ ಕಬಕ

ಅಧ್ಯಕ್ಷರಾಗಿ :-ಅಕ್ಬರ್ ಮುಲ್ಕಿ
ಪ್ರಧಾನ ಕಾರ್ಯದರ್ಶಿ : ಶಾಕಿರ್ ರೆಂಜಲಾಡಿ
ಕೋಶಾಧಿಕಾರಿ :- ಅಬೂಬಕ್ಕರ್ ಅತ್ರಾಡಿ

ಉಪಾಧ್ಯಕ್ಷರು :- ರಿಯಾಜ್ ಕಿನ್ಯ
ಜೊತೆ ಕಾರ್ಯದರ್ಶಿ : ತೌಫೀರ್ ಬಜ್ಪೆ

ಸದಸ್ಯರು : ಸಮಿಉಲ್ಲ ಗೂಡಿನಬಳಿ
ಅಬ್ದುಲ್ ರಹ್ಮಾನ್ ಕೆಮ್ಮಾರ
ಹನೀಫ್ ಮಾಂತೂರ್
ಖಲೀಲ್ ಬೆಳ್ಳಾರೆ
ಸತ್ತಾರ್ ಚೆನ್ನಾರ್
ಶಮೀರ್ ಪೂಂಜಾಳಕಟ್ಟೆ
ಹುಸೈನ್ ಕುಲಾಯಿತೋಡಿ.

ಇದನ್ನೂ ಓದಿರಿ...