ಮಂಗಳೂರು : ಇತ್ತೀಚೆಗೆ ತುಮಕೂರಲ್ಲಿ ಅತೀ ಕ್ರೂರವಾಗಿ ಕೊಲೆಯಾದವರ ಮನೆಗೆ ದಕ್ಷಿಣ ಕನ್ನಡ ಜಿಲ್ಲಾ ವಕ್ಪ್ ಸಲಹಾ ಸಮಿತಿ ಅಧ್ಯಕ್ಷ ಬಿಎ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ ಭೇಟಿ ನೀಡಿದ್ದರು. ಕುಟುಂಬದವರೊಂದಿಗೆ ಚರ್ಚಿಸಿದ ಅಧ್ಯಕ್ಷರು ನಡೆದ ಘಟನೆಗಳ ಬಗ್ಗೆ ಮಾಹಿತಿಗಳನ್ನು ಪಡೆದುಕೊಂಡರು ಈ ಘಟನೆಯಿಂದ ಮೂವರು ಕೂಡ ತಮ್ಮ ತಮ್ಮ ಮನೆಗಳನ್ನು ಕಳೆದುಕೊಂಡಿದ್ದು ಮುಂದಕ್ಕೆ ಇವರ ಮನೆಗಳು ಕಟ್ಟುವ ಸಂದರ್ಭದಲ್ಲಿ ನಮ್ಮಿಂದಾಗುವ ಸಹಾಯ ಸಹಕಾರಗಳನ್ನು ನೀಡುವುದಾಗಿ ಅಧ್ಯಕ್ಷರು ಕುಟುಂಬದವರೊಂದಿಗೆ ತಿಳಿಸಿದರು.
ನಂತರ ಅಲ್ಲಿ ಸಿಕ್ಕಿದ ಕೆಲವು ಮಾಹಿತಿಗಳ ಪ್ರಕಾರ ಈ ಮೊದಲು ಕೂಡ ಹಲವಾರು ಜನರನ್ನು ಇದೇ ರೀತಿ ಕರೆಸಿ, ಹಲವರಿಗೆ ಪಂಗನಾಮ ಹಾಕಿದ ವಿಷಯಗಳು ಒಂದೊಂದಾಗಿ ಹೊರಬರುತ್ತಿರುವುದನ್ನು ಅಲ್ಲಿ ಜನರು ಹೇಳಿಕೊಳ್ಳುತ್ತಿದ್ದರು. ಅಲ್ಲದೆ ಆ ಒಂದು ಪ್ರದೇಶದಲ್ಲಿ ಇರುವ ಹೊಲದಲ್ಲಿ ಹಲವರನ್ನು ಇದೇ ರೀತಿ ಕರೆಸಿ ಕೊಲೆ ಮಾಡಿ ಹೊಲಕ್ಕೆ ಎಸೆಯಲಾಗಿದೆ ಎಂಬ ಮಾಹಿತಿ ಕೂಡ ಅಲ್ಲಿ ಕೇಳಿಸುತ್ತಿತ್ತು ಇವೆಲ್ಲ ಘಟನೆಗಳನ್ನು ಮನವರಿಕೆ ಮಾಡಿಕೊಂಡ ಅಧ್ಯಕ್ಷರು ಸರಕಾರಕ್ಕೆ ಈ ಒಂದು ಹೇಳಿಕೆಯ ಮೂಲಕ ಹಲವಾರು ಜನರನ್ನು ಆಮಿಷಕ್ಕೆ ಒಳಪಡಿಸಿ ಅವರಿಂದ ದುಡ್ಡುಗಳನ್ನು ಕಸಿದು ಅವರ ಜೀವಗಳನ್ನು ಬಳಿ ಪಡೆದುಕೊಳ್ಳುವ ಇಂಥವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಸರಕಾರಕ್ಕೆ ಒತ್ತಾಯಿಸುತ್ತಾ ಈ ಒಂದು ಗ್ಯಾಂಗಿನ ಹಿಂದಿರುವ ಎಲ್ಲಾ ವಿಷಯಗಳನ್ನು ಸರಕಾರ ತನಿಖೆಗೊಳಪಡಿಸಬೇಕೆಂದು ಈ ಮೂಲಕ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಸದಸ್ಯರಾದ ಅಶ್ರಫ್ ಕಿನಾರ ಮಂಗಳೂರು ,ಸಿದ್ದಿಖ್ ಕಾಜೂರು , ಬಿಕೆ ಹಿದಾಯ ಉಪಸ್ಥಿತರಿದ್ದರು.
















ಇನ್ನಷ್ಟು ಸುದ್ದಿಗಳು
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ