ಬದ್ರಿಯಾ ಜುಮಾ ಮಸ್ಚಿದ್ ಕನ್ಯಾಡಿ, KMJ 𝙎Ⴤ𝙎 SSF ವತಿಯಿಂದ ಕನ್ಯಾಡಿ ಜುಮಾ ಮಸ್ಚಿದ್ ವಠಾರದಲ್ಲಿ ತಾಜುಲ್ ಉಲಮಾ ಅನುಸ್ಮರಣೆಯ ದಶವಾರ್ಷಿಕ ಪ್ರಯುಕ್ತ ಎರಡು ದಿನಗಳ ಧಾರ್ಮಿಕ ಕಾರ್ಯಕ್ರಮಗಳಿಗೆ ಇಂದು(ಜ.10)ಚಾಲನೆ.
ಇಂದು ರಾತ್ರಿ ಪ್ರಭಾಷಣ ಜಗತ್ತಿನ ಧ್ರುವತಾರೆ, ಸಲೀಸಾಗಿ ಮನುಷ್ಯರ ಮನಸ್ಸುಗಳಿಗೆ ಮಾಧುರ್ಯ ನೀಡುವ ಮಧುರ ಸ್ವರದೊಂದಿಗೆ ಪ್ರಭಾಷಣಗೆಯ್ಯಬಲ್ಲ ಬಹು| ಹಂಝ ಮಿಸ್ಬಾಹಿ ಓಟಪದವು ಉಸ್ತಾದರ ಪ್ರೌಢಗಂಭೀರ ಭಾಷಣ ನಡೆಯಲಿದೆ.ಅಸ್ಸಯ್ಯಿದ್ ಕಾಜೂರು ತಂಙಳ್ ಅಧ್ಯಕ್ಷತೆ ವಹಿಸಿ ದುಆ ಆಶಿರ್ವಚನಕ್ಕೆ ನೇತೃತ್ವ ನೀಡಲಿದ್ದಾರೆ.
ನಾಳೆ ರಾತ್ರಿ, ಅಸ್ಸಯ್ಯಿದ್ ಬಾಯಾರ್ ತಂಙಳ್ ಕನ್ಯಾಡಿ ಮಣ್ಣಿಗೆ ಬರಲಿದ್ದಾರೆ.ಅವರ ದುಆ ಮಜ್ಲಿಸ್ ಮತ್ತು ಪ್ರಾರ್ಥನೆ ನಡೆಯಲಿದೆ.ಜತೆಗೆ ಕರ್ನಾಟಕದ ಸಭಾಪತಿ ಯುಟಿ ಖಾದರ್ ಸಾಬ್ ಆಗಮಿಸಲಿದ್ದಾರೆ.ಅಸ್ಸಯ್ಯಿದ್ ತ್ವಾಹ ತಂಙಳ್ ನೇತೃತ್ವದಲ್ಲಿ ಬೃಹತ್ ಗ್ರ್ಯಾಂಡ್ ಬುರ್ದಾ ಮಜ್ಲಿಸ್ ಕೂಡಾ ನಡೆಯಲಿದೆ. ಎರಡೂ ದಿನಗಳಲ್ಲಿ ತಾಜುಲ್ ಉಲಮಾ ಹೆಸರಿನಲ್ಲಿ ತಬರ್ರುಕ್ ವಿತರಣೆ ನಡೆಯಲಿದೆ.

















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ