ದುಬೈ : ವಿಶ್ವ ಪ್ರವಾದಿ ﷺ ರವರ ಜನ್ಮ ದಿನಾಚರಣೆಯನ್ನು ವಿಶ್ವಾದ್ಯಂತ ಸಂಭ್ರಮದಿಂದ ಆಚರಿಸಲ್ಪಡುತ್ತಿದ್ದು, ಯುಎಇ ಪ್ರಧಾನಿ, ದುಬೈ ಆಡಳಿತಗಾರ ಶೈಖ್ ಮುಹಮ್ಮದ್ ಬಿನ್ ರಾಶಿದ್ ಆಲ್ ಮಖ್ತೂಂ ಮುಸ್ಲಿಂ ಜಗತ್ತಿಗೆ ತಮ್ಮ ಮೀಲಾದ್ ಸಂದೇಶವನ್ನು ನೀಡಿದ್ದಾರೆ.
ಎಕ್ಸ್ ಪ್ಲಾಟ್ಫಾರ್ಮ್ ಮೂಲಕ ಸಂದೇಶ ರವಾನಿಸಿರುವ ಶೈಖ್ ರವರು. ಪ್ರವಾದಿ ಸ್ಮರಣೆಯ ಮೂಲಕ ನಾವು ಅವರ ಮೇಲಿನ ಪ್ರೀತಿಯನ್ನು ನವೀಕರಿಸುತ್ತೇವೆ ಎಂದಿದ್ದಾರೆ.
ಅವರ ಟ್ವೀಟ್ ನ ಪೂರ್ಣ ರೂಪ
“ಶ್ರೇಷ್ಠ ವ್ಯಕ್ತಿಯ ಜನ್ಮದಿನವು ಆಗಮನವಾಗಿದೆ. ಅವರ ಜನ್ಮದಿಂದಾಗಿ ಭೂಮಿಯ ಪೂರ್ವ ಮತ್ತು ಪಶ್ಚಿಮವು ಬೆಳಗಿತು. ಅವರು ತಂದ ಬೆಳಕು ನಮ್ಮ ಮತ್ತು ಇಡೀ ಮಾನವ ಕುಲದ ಹೃದಯಗಳನ್ನು ಬೆಳಗಿಸಿತು, ಅವರ ಜೀವನಚರಿತ್ರೆ ಮತ್ತು ವಿಧಾನವು ನಮಗೆ ಮತ್ತು ಅಂತ್ಯ ದಿನದವರೆಗಿನ ಇಡೀ ಸಮುದಾಯಕ್ಕೆ ದಾರಿದೀಪವಾಗಿದೆ.”
“ನಮ್ಮ ಪ್ರವಾದಿಯವರ ಜನ್ಮ ವಾರ್ಷಿಕೋತ್ಸವದಂದು, ನಾವು ಅವರ ಮೇಲಿನ ಪ್ರೀತಿಯನ್ನು ನವೀಕರಿಸುತ್ತೇವೆ … ನಾವು ಅವರಿಗೆ ನಮ್ಮ ವಿಧೇಯತೆಯನ್ನು ನವೀಕರಿಸುತ್ತೇವೆ … ಅವರು ಜಗತ್ತಿಗೆ ತಂದ ಕರುಣೆ ಮತ್ತು ಒಳ್ಳೆಯತನದ ಮೌಲ್ಯಗಳನ್ನು ನಾವು ನವೀಕರಿಸುತ್ತೇವೆ.”
” ಈ ಸುಗಂಧಭರಿತ ವಾರ್ಷಿಕೋತ್ಸವದಂದು ನಾವು ಇಸ್ಲಾಮಿಕ್ ರಾಷ್ಟ್ರವನ್ನು ಅಭಿನಂದಿಸುತ್ತೇವೆ … ಅಲ್ಲಾಹನ ಸೃಷ್ಟಿ … ಅವನ ಸಿಂಹಾಸನ … ಮತ್ತು ಅವನ ಪದಗಳ ಶಾಯಿಯ ಸಂಖ್ಯೆಯ ಪ್ರಕಾರ ಇಂದು ಮತ್ತು ಪ್ರತಿದಿನ ಪ್ರವಾದಿ ರ ಮೇಲೆ ಸ್ವಲಾತ್ ಹೇಳುವೆವು (ಪ್ರಾರ್ಥನೆ) … ಆಮೀನ್”
















ಇನ್ನಷ್ಟು ಸುದ್ದಿಗಳು
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್