ದೇರಳಕಟ್ಟೆ ; ಎಸ್ವೈಎಸ್ ದೇರಳಕಟ್ಟೆ ಝೋನ್ ವತಿಯಿಂದ “ಗ್ಲೋರಿಯಸ್ ಇಂಡಿಯಾ ಹಾಗೂ ಕ್ಯಾಬ್ ಸಿ” ಕ್ಯಾಂಪ್ ಝೋನ್ ಅಧ್ಯಕ್ಷರಾದ ತೌಸೀಫ್ ಸಅದಿ ಹರೇಕಳರವರ ಅಧ್ಯಕ್ಷತೆಯಲ್ಲಿ ತಿಬ್ಲೆಪದವು ಮದ್ರಸಾದಲ್ಲಿ ನಡೆಯಿತು. ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಕಿನ್ಯ ಪ್ರಾರ್ಥಿಸಿದರು.
ಮುತ್ತಲಿಬ್ ಸಖಾಫಿ ಬೆಳ್ಮ ಸಭೆಯನ್ನು ಉದ್ಘಾಟಿಸಿದರು. ಎಸ್ವೈಎಸ್ ವೆಸ್ಟ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೆಹಬೂಬ್ ಸಖಾಫಿ ಕಿನ್ಯ ಪ್ರಸ್ತಾವಿಕ ಮಾತುಗಳನ್ನಾಡಿದರು.
ಎಸ್ವೈಎಸ್ ದ.ಕ ವೆಸ್ಟ್ ಜಿಲ್ಲಾ ನಾಯಕರಾದ ಹಾಫಿಳ್ ಯಾಕೂಬ್ ಸಅದಿ ನಾವೂರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತರಗತಿ ಮಂಡಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ದೇರಳಕಟ್ಟೆ ಅಧ್ಯಕ್ಷರಾದ ಇಸ್ಮಾಈಲ್ ಸಅದಿ ಉರುಮಣೆ, ಎಸ್ವೈಎಸ್ ದೇರಳಕಟ್ಟೆ ಝೋನ್ ಪ್ರಧಾನ ಕಾರ್ಯದರ್ಶಿ ಸಾಲಿಹ್ ರೆಂಜಾಡಿ, ಕೋಶಾಧಿಕಾರಿ ಉಸ್ಮಾನ್ ಝುಹ್ರಿ ಕಿನ್ಯ, ಉಪಾಧ್ಯಕ್ಷರಾದ ಹನೀಫ್ ಕಾಮಿಲ್ ಸಖಾಫಿ ನಾಟೆಕಲ್, ಕಾರ್ಯದರ್ಶಿಗಳಾದ ಹೈದರಲಿ ಹಿಮಮಿ ಮಲಾರ್, ಉಸ್ಮಾನ್ ಫಜೀರ್, ಹನೀಫ್ ಬದ್ಯಾರ್, ಹಮೀದ್ ಕಿನ್ಯ, ಎಸ್ವೈಎಸ್ ದೇರಳಕಟ್ಟೆ ಝೋನ್ ಕಾರ್ಯಕಾರಿ ಸಮಿತಿ ಸದಸ್ಯರು ಸಹಿತ 5 ಸರ್ಕಲ್ಗಳ ಎಕ್ಸಿಕ್ಯೂಟಿವ್ ಸದಸ್ಯರು ಹಾಗೂ 32 ಶಾಖೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಎಸ್ವೈಎಸ್ ದೇರಳಕಟ್ಟೆ ಝೋನ್ ಸಂಘಟನಾ ಕಾರ್ಯದರ್ಶಿ ಮುಸ್ತಫಾ ಸಅದಿ ಹರೇಕಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.