janadhvani

Kannada Online News Paper

ಕೆ.ಸಿ.ಎಫ್ ಖತ್ತರ್ : ಪಿಎಮ್ ಹಮೀದ್ ಈಶ್ವರಮಂಗಳ ರವರಿಗೆ ಭವ್ಯ ಸ್ವಾಗತ

ದೋಹಾ : ದಿನಾಂಕ 10-08-2023 ರಂದು ಹೃಸ್ವ ಸಂದರ್ಶನಕ್ಕಾಗಿ ಖತ್ತರ್ ಗೆ ಭೇಟಿ ನೀಡಿದ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಜನಾಬ್ ಪಿ.ಎಮ್. ಹಮೀದ್ ಈಶ್ವರಮಂಗಳ ರವರಿಗೆ ಖತ್ತರ್ ಕೆಸಿಎಫ್ ವತಿಯಿಂದ ದೋಹಾದಲ್ಲಿ ಭವ್ಯ ಸ್ವಾಗತ ನೀಡಲಾಯಿತು.

ಖತ್ತರ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪಿಎಮ್ ಹಮೀದ್ ಈಶ್ವರಮಂಗಳ ರವರನ್ನು ಕೆಸಿಎಫ್ ರಾಷ್ಟ್ರೀಯ ನಾಯಕರು ಬರಮಾಡಿಕೊಂಡು, ತದನಂತರ ಕೆಸಿಎಫ್ ನಾಯಕರೂ ಹಾಗೂ ಅಂತರಾಷ್ಟ್ರೀಯ ಸಮಿತಿ ಅಡ್ಮಿನ್ ವಿಭಾಗ ಅಧ್ಯಕ್ಷರಾದ ಕಬೀರ್ ದೇರಳಕಟ್ಟೆಯವರ ನಿವಾಸದಲ್ಲಿ ಭವ್ಯ ಸ್ವಾಗತ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೆಸಿಎಫ್ ಸಂಘಟನೆಯ ಕಾರ್ಯಾಚರಣೆ ಹಾಗೂ ರೂಪುರೇಷೆಗಳ ಬಗ್ಗೆ ನೆರೆದಿದ್ದ ಸದಸ್ಯರೊಂದಿಗೆ ಚರ್ಚೆ ನಡೆಸಿದರು.ಅತಿಥಿ ಸತ್ಕಾರದ ಭಾಗವಾಗಿ, ಕೆಸಿಎಫ್ ಖತ್ತರ್ ರಾಷ್ರ್ಟೀಯ ಸಮಿತಿ ವತಿಯಿಂದ ಗಣ್ಯ‌ ಅತಿಥಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಅಂತರಾಷ್ಟ್ರೀಯ ಸಮಿತಿ ಸಂಘಟನಾ ಕಾರ್ಯದರ್ಶಿ ಹಾಫಿಳ್ ಉಮರುಲ್ ಫಾರೂಖ್ ಸಖಾಫಿ ಕೊಡಗು, ರಾಷ್ಟ್ರೀಯ ಅಧ್ಯಕ್ಷರಾದ ಮೊಹಮ್ಮದ್ ಹನೀಫ್ ಪಾತೂರು, ಪ್ರಧಾನ ಕಾರ್ಯದರ್ಶಿ ಫಾರೂಖ್ ಕೃಷ್ಣಾಪುರ, ಫೈನಾನ್ಸ್ ಕಂಟ್ರೋಲರ್ ಮುನೀರ್ ಮಾಗುಂಡಿ,ಸಂಘಟನಾ ವಿಭಾಗ ಅಧ್ಯಕ್ಷ ಮಿರ್ಶಾದ್ ಕನ್ಯಾನ, ಅಡ್ಮಿನ್ ವಿಭಾಗ ಅಧ್ಯಕ್ಷ ಸತ್ತಾರ್ ಅಶ್ರಫಿ ಮಠ ಹಾಗೂ ಕಾರ್ಯದರ್ಶಿ ಹಕೀಂ ಪಾತೂರು ರವರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com