ಪ್ರಯೋಗ ಶಾಲೆಯ ಕೇಂದ್ರವಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಆಡಳಿತದಡಿ “ಪೊಲೀಸ್ ರಾಜ್” ನಿರ್ಮಾಣಗೊಂಡಿತ್ತು.
ಮೆರವಣಿಗೆ, ಪ್ರತಿಭಟನೆಗೆ ಅನುಮತಿ ಪಡೆಯಲು ಹರಸಾಹಸ ಪಡಬೇಕಿತ್ತು. ಪೊಲೀಸರು ಸೂಚಿಸಿದ ಸ್ಥಳದಲ್ಲಷ್ಟೇ ಪ್ರತಿಭಟನೆಗೆ ಅವಕಾಶ ದೊರಕುತ್ತಿತ್ತು. ಒಂದು ಸಣ್ಣ ಪ್ರತಿಭಟನೆಗೂ ಪೊಲೀಸ್ ಕಮೀಷನರ್ ಕಚೇರಿಯಲ್ಲೇ ಅನುಮತಿ ಪಡೆಯಬೇಕಿತ್ತು. ಪ್ರತಿಭಟನೆಗೆ ಅನುಮತಿ ಪಡೆಯುವುದೇ ಒಂದು ಹೋರಾಟವಾಗಿತ್ತು.
ಗ್ಯಾಂಬ್ಲಿಂಗ್, ಬೆಟ್ಟಿಂಗ್, ಮರಳುಗಾರಿಕೆ ಮುಂತಾದ ಅಕ್ರಮ ದಂಧೆಗಳಿಗೆ ಮಾತ್ರ ಎಗ್ಗಿಲ್ಲದ “ಸ್ವಾತಂತ್ರ್ಯ” ವಿತ್ತು. ಅಂತಹ ಲಾಬಿಗಳ ಪಂಟರುಗಳೆಲ್ಲಾ ಬಿಜೆಪಿ ಶಾಸಕರುಗಳು ಎಡಭಾಗ, ಬಲಭಾಗಗಳಲ್ಲಿ ಮಿಂಚುತ್ತಿದ್ದರು. ಇಂತಹ ದಂಧೆಕೋರರ ವಿರುದ್ದ ದೂರು ನೀಡಿದರೆ, ದೂರುದಾರರ ಮೊಬೈಲ್ ನಂಬರ್ ಸಹಿತ ಪೂರ್ತಿ ವಿವರ ನೇರವಾಗಿ ದಂಧಕೋರರಿಗೆ ತಲುಪುತ್ತಿತ್ತು. ಇದರಿಂದ ಜನ ದಂಧೆಕೋರ ಕ್ರಿಮಿನಲ್ ಗಳ ಸುದ್ದಿ ಎತ್ತಲು ಭಯಪಡುವಂತಾಗಿತ್ತು.
ಪೊಲೀಸ್ ಇಲಾಖೆಯನ್ನು ಸರಿಪಡಿಸುವುದು ಅಂದರೆ, ಕೋಮುವಾದೀಕರಣದಿಂದ ಹೊರತರುವುದು ಮಾತ್ರ ಅಲ್ಲ, ಕ್ರಿಮಿನಲೀಕರಣದಿಂದಲೂ ಮುಕ್ತಗೊಳಿಸುವುದು. ಅದು ಒಂದನ್ನು ಬಿಟ್ಟು ಮತ್ತೊಂದಿಲ್ಲ.ಜನತೆಗೆ ಅದರ ಅನುಭವ ಆಗುವಂತೆ ನೋಡಿಕೊಳ್ಳುವುದು.
ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸರಕಾರ ದಕ್ಷಿಣ ಕನ್ನಡ ಜಿಲ್ಲೆಯಿಂದಲೇ ಪೊಲೀಸ್ ಇಲಾಖೆಯನ್ನು ಸರಿಪಡಿಸುವ ಕೆಲಸವನ್ನು ಆರಂಭಿಸಬೇಕು. ಜನಪರ ಹೋರಾಟಗಳಿಗೆ ಇರುವ ನಿರ್ಬಂಧ, ಅತಿಯಾದ ನಿಯಂತ್ರಣಗಳನ್ನು ತೆಗೆದು ಹಾಕಬೇಕು. ದಂಧೆಕೋರರಿಗೂ ಪೊಲೀಸ್ ಠಾಣೆಗಳಿಗೂ ಇರುವ ಸುಮಧುರ ಸಂಬಂಧವನ್ನು ಕಡಿದು ಹಾಕಬೇಕು. ಆ ಮೂಲಕ ಜನ ಸರಾಗವಾಗಿ ಉಸಿರಾಡುವ ವಾತಾವರಣ ನಿರ್ಮಿಸಬೇಕು. ಆ ಮೂಲಕ ತುಳುನಾಡಿನಲ್ಲೂ ಕಾಂಗ್ರೆಸ್ ಜನತೆಗೆ ಹತ್ತಿರವಾಗಬಹುದು.
ಮುನೀರ್ ಕಾಟಿಪಳ್ಳ ಅವರ ಫೇಸ್ಬುಕ್ ಪುಟದಿಂದ
















ಇನ್ನಷ್ಟು ಸುದ್ದಿಗಳು
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ