ಪ್ರಯೋಗ ಶಾಲೆಯ ಕೇಂದ್ರವಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಆಡಳಿತದಡಿ “ಪೊಲೀಸ್ ರಾಜ್” ನಿರ್ಮಾಣಗೊಂಡಿತ್ತು.
ಮೆರವಣಿಗೆ, ಪ್ರತಿಭಟನೆಗೆ ಅನುಮತಿ ಪಡೆಯಲು ಹರಸಾಹಸ ಪಡಬೇಕಿತ್ತು. ಪೊಲೀಸರು ಸೂಚಿಸಿದ ಸ್ಥಳದಲ್ಲಷ್ಟೇ ಪ್ರತಿಭಟನೆಗೆ ಅವಕಾಶ ದೊರಕುತ್ತಿತ್ತು. ಒಂದು ಸಣ್ಣ ಪ್ರತಿಭಟನೆಗೂ ಪೊಲೀಸ್ ಕಮೀಷನರ್ ಕಚೇರಿಯಲ್ಲೇ ಅನುಮತಿ ಪಡೆಯಬೇಕಿತ್ತು. ಪ್ರತಿಭಟನೆಗೆ ಅನುಮತಿ ಪಡೆಯುವುದೇ ಒಂದು ಹೋರಾಟವಾಗಿತ್ತು.
ಗ್ಯಾಂಬ್ಲಿಂಗ್, ಬೆಟ್ಟಿಂಗ್, ಮರಳುಗಾರಿಕೆ ಮುಂತಾದ ಅಕ್ರಮ ದಂಧೆಗಳಿಗೆ ಮಾತ್ರ ಎಗ್ಗಿಲ್ಲದ “ಸ್ವಾತಂತ್ರ್ಯ” ವಿತ್ತು. ಅಂತಹ ಲಾಬಿಗಳ ಪಂಟರುಗಳೆಲ್ಲಾ ಬಿಜೆಪಿ ಶಾಸಕರುಗಳು ಎಡಭಾಗ, ಬಲಭಾಗಗಳಲ್ಲಿ ಮಿಂಚುತ್ತಿದ್ದರು. ಇಂತಹ ದಂಧೆಕೋರರ ವಿರುದ್ದ ದೂರು ನೀಡಿದರೆ, ದೂರುದಾರರ ಮೊಬೈಲ್ ನಂಬರ್ ಸಹಿತ ಪೂರ್ತಿ ವಿವರ ನೇರವಾಗಿ ದಂಧಕೋರರಿಗೆ ತಲುಪುತ್ತಿತ್ತು. ಇದರಿಂದ ಜನ ದಂಧೆಕೋರ ಕ್ರಿಮಿನಲ್ ಗಳ ಸುದ್ದಿ ಎತ್ತಲು ಭಯಪಡುವಂತಾಗಿತ್ತು.
ಪೊಲೀಸ್ ಇಲಾಖೆಯನ್ನು ಸರಿಪಡಿಸುವುದು ಅಂದರೆ, ಕೋಮುವಾದೀಕರಣದಿಂದ ಹೊರತರುವುದು ಮಾತ್ರ ಅಲ್ಲ, ಕ್ರಿಮಿನಲೀಕರಣದಿಂದಲೂ ಮುಕ್ತಗೊಳಿಸುವುದು. ಅದು ಒಂದನ್ನು ಬಿಟ್ಟು ಮತ್ತೊಂದಿಲ್ಲ.ಜನತೆಗೆ ಅದರ ಅನುಭವ ಆಗುವಂತೆ ನೋಡಿಕೊಳ್ಳುವುದು.
ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸರಕಾರ ದಕ್ಷಿಣ ಕನ್ನಡ ಜಿಲ್ಲೆಯಿಂದಲೇ ಪೊಲೀಸ್ ಇಲಾಖೆಯನ್ನು ಸರಿಪಡಿಸುವ ಕೆಲಸವನ್ನು ಆರಂಭಿಸಬೇಕು. ಜನಪರ ಹೋರಾಟಗಳಿಗೆ ಇರುವ ನಿರ್ಬಂಧ, ಅತಿಯಾದ ನಿಯಂತ್ರಣಗಳನ್ನು ತೆಗೆದು ಹಾಕಬೇಕು. ದಂಧೆಕೋರರಿಗೂ ಪೊಲೀಸ್ ಠಾಣೆಗಳಿಗೂ ಇರುವ ಸುಮಧುರ ಸಂಬಂಧವನ್ನು ಕಡಿದು ಹಾಕಬೇಕು. ಆ ಮೂಲಕ ಜನ ಸರಾಗವಾಗಿ ಉಸಿರಾಡುವ ವಾತಾವರಣ ನಿರ್ಮಿಸಬೇಕು. ಆ ಮೂಲಕ ತುಳುನಾಡಿನಲ್ಲೂ ಕಾಂಗ್ರೆಸ್ ಜನತೆಗೆ ಹತ್ತಿರವಾಗಬಹುದು.
ಮುನೀರ್ ಕಾಟಿಪಳ್ಳ ಅವರ ಫೇಸ್ಬುಕ್ ಪುಟದಿಂದ
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ