ಪ್ರಯೋಗ ಶಾಲೆಯ ಕೇಂದ್ರವಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಆಡಳಿತದಡಿ “ಪೊಲೀಸ್ ರಾಜ್” ನಿರ್ಮಾಣಗೊಂಡಿತ್ತು.
ಮೆರವಣಿಗೆ, ಪ್ರತಿಭಟನೆಗೆ ಅನುಮತಿ ಪಡೆಯಲು ಹರಸಾಹಸ ಪಡಬೇಕಿತ್ತು. ಪೊಲೀಸರು ಸೂಚಿಸಿದ ಸ್ಥಳದಲ್ಲಷ್ಟೇ ಪ್ರತಿಭಟನೆಗೆ ಅವಕಾಶ ದೊರಕುತ್ತಿತ್ತು. ಒಂದು ಸಣ್ಣ ಪ್ರತಿಭಟನೆಗೂ ಪೊಲೀಸ್ ಕಮೀಷನರ್ ಕಚೇರಿಯಲ್ಲೇ ಅನುಮತಿ ಪಡೆಯಬೇಕಿತ್ತು. ಪ್ರತಿಭಟನೆಗೆ ಅನುಮತಿ ಪಡೆಯುವುದೇ ಒಂದು ಹೋರಾಟವಾಗಿತ್ತು.
ಗ್ಯಾಂಬ್ಲಿಂಗ್, ಬೆಟ್ಟಿಂಗ್, ಮರಳುಗಾರಿಕೆ ಮುಂತಾದ ಅಕ್ರಮ ದಂಧೆಗಳಿಗೆ ಮಾತ್ರ ಎಗ್ಗಿಲ್ಲದ “ಸ್ವಾತಂತ್ರ್ಯ” ವಿತ್ತು. ಅಂತಹ ಲಾಬಿಗಳ ಪಂಟರುಗಳೆಲ್ಲಾ ಬಿಜೆಪಿ ಶಾಸಕರುಗಳು ಎಡಭಾಗ, ಬಲಭಾಗಗಳಲ್ಲಿ ಮಿಂಚುತ್ತಿದ್ದರು. ಇಂತಹ ದಂಧೆಕೋರರ ವಿರುದ್ದ ದೂರು ನೀಡಿದರೆ, ದೂರುದಾರರ ಮೊಬೈಲ್ ನಂಬರ್ ಸಹಿತ ಪೂರ್ತಿ ವಿವರ ನೇರವಾಗಿ ದಂಧಕೋರರಿಗೆ ತಲುಪುತ್ತಿತ್ತು. ಇದರಿಂದ ಜನ ದಂಧೆಕೋರ ಕ್ರಿಮಿನಲ್ ಗಳ ಸುದ್ದಿ ಎತ್ತಲು ಭಯಪಡುವಂತಾಗಿತ್ತು.
ಪೊಲೀಸ್ ಇಲಾಖೆಯನ್ನು ಸರಿಪಡಿಸುವುದು ಅಂದರೆ, ಕೋಮುವಾದೀಕರಣದಿಂದ ಹೊರತರುವುದು ಮಾತ್ರ ಅಲ್ಲ, ಕ್ರಿಮಿನಲೀಕರಣದಿಂದಲೂ ಮುಕ್ತಗೊಳಿಸುವುದು. ಅದು ಒಂದನ್ನು ಬಿಟ್ಟು ಮತ್ತೊಂದಿಲ್ಲ.ಜನತೆಗೆ ಅದರ ಅನುಭವ ಆಗುವಂತೆ ನೋಡಿಕೊಳ್ಳುವುದು.
ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸರಕಾರ ದಕ್ಷಿಣ ಕನ್ನಡ ಜಿಲ್ಲೆಯಿಂದಲೇ ಪೊಲೀಸ್ ಇಲಾಖೆಯನ್ನು ಸರಿಪಡಿಸುವ ಕೆಲಸವನ್ನು ಆರಂಭಿಸಬೇಕು. ಜನಪರ ಹೋರಾಟಗಳಿಗೆ ಇರುವ ನಿರ್ಬಂಧ, ಅತಿಯಾದ ನಿಯಂತ್ರಣಗಳನ್ನು ತೆಗೆದು ಹಾಕಬೇಕು. ದಂಧೆಕೋರರಿಗೂ ಪೊಲೀಸ್ ಠಾಣೆಗಳಿಗೂ ಇರುವ ಸುಮಧುರ ಸಂಬಂಧವನ್ನು ಕಡಿದು ಹಾಕಬೇಕು. ಆ ಮೂಲಕ ಜನ ಸರಾಗವಾಗಿ ಉಸಿರಾಡುವ ವಾತಾವರಣ ನಿರ್ಮಿಸಬೇಕು. ಆ ಮೂಲಕ ತುಳುನಾಡಿನಲ್ಲೂ ಕಾಂಗ್ರೆಸ್ ಜನತೆಗೆ ಹತ್ತಿರವಾಗಬಹುದು.
ಮುನೀರ್ ಕಾಟಿಪಳ್ಳ ಅವರ ಫೇಸ್ಬುಕ್ ಪುಟದಿಂದ
















ಇನ್ನಷ್ಟು ಸುದ್ದಿಗಳು
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್