janadhvani

Kannada Online News Paper

ಮೂಡಬಿದ್ರೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಎಸ್ಸೆಸ್ಸೆಫ್ ಅಪೂರ್ವ ನಗರ ಶಾಖೆ

ದಿನಾಂಕ 31-3-2023 ಶುಕ್ರವಾರ ಎಸ್ಸೆಸ್ಸೆಫ್ ಅಪೂರ್ವ ನಗರ ಯುನೀಟ್ ವತಿಯಿಂದ ಹೊಸಂಗಡಿಯಲ್ಲಿ ಸಾಂತ್ವನ ಭಾಗವಾಗಿ ಮೂಡಬಿದ್ರೆ ಪರಿಸರದ ಕಡುಬಡವರನ್ನು ಆಯ್ಕೆಮಾಡಿ ಅರ್ಹರಿಗೆ 50 ರಂಝಾನ್ ಕಿಟ್ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಎಸ್.ವೈ.ಎಸ್ ಮೂಡಬಿದ್ರೆ ಸರ್ಕಲ್ ಸಾಂತ್ವನ ಕಾರ್ಯದರ್ಶಿ ಬಹು ಇಕ್ಬಾಲ್ ಹನೀಫೀ ಸರ್ವರಿಗೂ ಸ್ವಾಗತಿಸಿದರು.

ಕರ್ನಾಟಕ ಮುಸ್ಲಿಂ ಜಮಾಅತ್ ಮೂಡುಬಿದಿರೆ ಝೋನ್ ಪ್ರ.ಕಾರ್ಯದರ್ಶಿ ಬಹು ಅಬ್ದುಲ್ ಸಲಾಂ ಮದನಿ. ಎಸ್ ವೈ ಎಸ್ ಮೂಡುಬಿದಿರೆ ಸರ್ಕಲ್ ಅಧ್ಯಕ್ಷರಾದ ಅಬ್ದುಲ್ ಬಹು ಅಬ್ದುಲ್ ಹಮೀದ್ ಸಖಾಫಿ, ಎಸ್ಸೆಸ್ಸೆಫ್ ಮೂಡುಬಿದಿರೆ ಡಿವಿಜನ್. ಉಪಾಧ್ಯಕ್ಷರಾದ ಬಹು ಫಾರೂಕ್ ಹನೀಫಿ ಬಜ್ಪೆ. ಎಸ್ಸೆಸ್ಸೆಫ್ ಮೂಡಬಿದಿರೆ ಸೆಕ್ಟರ್ ಅಧ್ಯಕ್ಷರಾದ ರಶೀದ್ ಸಖಾಫಿ ಅಲ್ ಹಿಮಾಮಿ, ಹಲವಾರು ಉಮರಾ ನಾಯಕರು ಭಾಗವಹಿಸಿದರು. ಎಸ್ಸೆಸ್ಸೆಫ್ ಮೂಡುಬಿದಿರೆ ಸೆಕ್ಟರ್ ಪ್ರ.ಕಾರ್ಯದರ್ಶಿ ನೂರುದ್ದೀನ್ ಗಂಟಲ್ ಕಟ್ಟೆ ಸರ್ವರಿಗೂ ಧನ್ಯವಾದವಿತ್ತರು.

ವರದಿ :
ಅಬ್ದುಲ್ ಲತೀಫ್ ಕೆರೆಬಳಿ
(ಕರ್ನಾಟಕ ಮುಸ್ಲಿಂ ಜಮಾಅತ್ ಮೂಡುಬಿದಿರೆ ಝೋನ್ ಕಾರ್ಯದರ್ಶಿ)