✍️ಇಸ್ಹಾಕ್ ಸಿ.ಐ.ಫಜೀರ್(ಗಲ್ಫ್ ಕನ್ನಡಿಗ)
ವಿಶ್ವದ ಭೂಕಂಪ ವಲಯಗಳಲ್ಲಿ ಒಂದಾಗಿರುವ ಟರ್ಕಿಯಲ್ಲಿ ಸೋಮವಾರ ಮಂಜಾನೆ ಉಂಟಾದ ಪ್ರಬಲ ಭೂಕಂಪನಕ್ಕೆ ಆಗ್ನೇಯ ಟರ್ಕಿಯಲ್ಲಿ ಗಗನಚುಂಬಿ ಕಟ್ಟಡಗಳು, ಮೇಲ್ಸೇತುವೆಗಳು ಧರೆಗುರುಳಿವೆ, ನರ ಭಕ್ಷಕನಂತೆ ರಸ್ತೆಗಳು ಬಾಯ್ದೆರೆದಿವೆ,
ಮನೆ ಮಠಗಳು ಧೂಳೀಪಟವಾಗಿವೆ.
ಭೂಕಂಪನದ ತೀವ್ರತೆಗೆ ಮನೆಯೊಳಗಿದ್ದವರು ತೊಟ್ಟಿಲಲ್ಲಿರುವ ಮಗುವಿನಂತೆ ತೂಗಾಡಿದ್ದಾರೆ,
ಕನಿಷ್ಠ 3500 ಜನರು ಕಟ್ಟಡಗಳ ಅವಶೇಷಗಳಡಿಯಲ್ಲಿ ಜೀವಂತ ಸಮಾಧಿಯಾಗಿದ್ದಾರೆ.
2000ಕ್ಕೂ ಮಿಕ್ಕ ಜನರು ಗಾಯಗೊಂಡಿದ್ದಾರೆ
5600 ಕ್ಕೂ ಹೆಚ್ಚು ಕಟ್ಟಡಗಳು ಕುಸಿದು ಬಿದ್ದಿವೆ.
ಟರ್ಕಿಯ ಪ್ರಬಲ ಭೂಕಂಪಕ್ಕೆ ನೆರೆಯ ಲೆಬನಾನ್, ಸಿರಿಯಾ ಮತ್ತು ಇಸ್ರೇಲ್ ಕೂಡ ಗಡಗಡ ನಡುಗಿದೆ.
ಈ ನಡುವೆ ಟರ್ಕಿಯ ಮಳೆ ಅಬ್ಬರ, ದಟ್ಟವಾಗಿ ಕವಿದ ಮಂಜಿನಿಂದ ಜನರ ರಕ್ಷಣೆಗೆ ಟರ್ಕಿ ರಕ್ಷಣಾ ತಂಡ ಹರಸಾಹಸ ಪಡುತ್ತಿದೆ.
1948 ರಿಂದ ಭಾರತ ಮತ್ತು ಟರ್ಕಿಯ ನಡುವೆ ರಾಜತಾಂತ್ರಿಕ ಸಂಬಂಧಗಳಿರುವುದರಿಂದ ಭಾರತ ಸಹಿತ ಜಗತ್ತಿನ 44 ದೇಶಗಳು ಟರ್ಕಿಯ ಬೆಂಬಲಕ್ಕೆ ನಿಂತಿದೆ.
ಕಣ್ಣೆದುರೆ ಕುಸಿದು ಬೀಳುತ್ತಿರುವ ಬಹುಮಹಡಿ ಕಟ್ಟಡಗಳನ್ನು ನೋಡುತ್ತಿದ್ದ ಯುಬಕನೊಬ್ಬನು
ಉಮ್ಮಳಿಸಿ ಬರುವ ದುಃಖವನ್ನು ಗಂಟಲಿನಲ್ಲೇ ಬಿಗಿ ಹಿಡಿದು
“ಭೂಕಂಪನವಾಗಿದೆ, ಒಂದೇ ಸ್ಥಳದಲ್ಲಿ ಒಟ್ಟಿಗೆ ಸಾಯೋಣ” ಅನ್ನುವ ವೀಡಿಯೋ ತುಣುಕು ಕಟುಕನ ಹೃದಯವನ್ನೂ ಕರಗುವಂತೆ ಮಾಡಿದೆ.
ಖುರ್ಆನ್ ಅಧ್ಯಾಯ: 99 ಶ್ಲೋಕ: 3
وَقَالَ ٱلْإِنسَٰنُ مَا لَهَا
(ಆಗ) ಮನುಷ್ಯನು ಹೇಳುವನು ‘ಭೂಮಿಗೆ ಏನು ಸಂಭವಿಸಿದೆ?
ಎಂಬ ಖುರ್ಆನ್ ಸಂದೇಶ ಮತ್ತೊಮ್ಮೆ ನೆನಪಿಗೆ ಬಂತು
ಟರ್ಕಿಗಾಗಿ ಪ್ರಾರ್ಥಿಸೋಣ..
















ಇನ್ನಷ್ಟು ಸುದ್ದಿಗಳು
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ
ಮದ್ರಸ ಮುಅಲ್ಲಿಮರ ಮೇಲೆ ಹಲ್ಲೆ ಪ್ರಕರಣ: ಎಸ್ಜೆಎಂ ದ.ಕ. ಸೌತ್ ಜಿಲ್ಲಾ ಸಮಿತಿ ತೀವ್ರ ಖಂಡನೆ
ಮದ್ರಸಾ ಅಧ್ಯಾಪಕರ ಮೇಲೆ ಹಲ್ಲೆ- ಎಸ್.ವೈ.ಎಸ್ ದ.ಕ ಜಿಲ್ಲೆ ವೆಸ್ಟ್ ಖಂಡನೆ
ಇರಾಕ್ನಲ್ಲೂ ಖಾಮ್ನಈ ಅಂತ್ಯಕ್ರಿಯೆ ವಿಧಿವಿಧಾನಗಳು; ನಜಫ್ನತ್ತ ಹರಿದುಬಂದ ಜನಸಾಗರ