✍️ಇಸ್ಹಾಕ್ ಸಿ.ಐ.ಫಜೀರ್(ಗಲ್ಫ್ ಕನ್ನಡಿಗ)
ವಿಶ್ವದ ಭೂಕಂಪ ವಲಯಗಳಲ್ಲಿ ಒಂದಾಗಿರುವ ಟರ್ಕಿಯಲ್ಲಿ ಸೋಮವಾರ ಮಂಜಾನೆ ಉಂಟಾದ ಪ್ರಬಲ ಭೂಕಂಪನಕ್ಕೆ ಆಗ್ನೇಯ ಟರ್ಕಿಯಲ್ಲಿ ಗಗನಚುಂಬಿ ಕಟ್ಟಡಗಳು, ಮೇಲ್ಸೇತುವೆಗಳು ಧರೆಗುರುಳಿವೆ, ನರ ಭಕ್ಷಕನಂತೆ ರಸ್ತೆಗಳು ಬಾಯ್ದೆರೆದಿವೆ,
ಮನೆ ಮಠಗಳು ಧೂಳೀಪಟವಾಗಿವೆ.
ಭೂಕಂಪನದ ತೀವ್ರತೆಗೆ ಮನೆಯೊಳಗಿದ್ದವರು ತೊಟ್ಟಿಲಲ್ಲಿರುವ ಮಗುವಿನಂತೆ ತೂಗಾಡಿದ್ದಾರೆ,
ಕನಿಷ್ಠ 3500 ಜನರು ಕಟ್ಟಡಗಳ ಅವಶೇಷಗಳಡಿಯಲ್ಲಿ ಜೀವಂತ ಸಮಾಧಿಯಾಗಿದ್ದಾರೆ.
2000ಕ್ಕೂ ಮಿಕ್ಕ ಜನರು ಗಾಯಗೊಂಡಿದ್ದಾರೆ
5600 ಕ್ಕೂ ಹೆಚ್ಚು ಕಟ್ಟಡಗಳು ಕುಸಿದು ಬಿದ್ದಿವೆ.
ಟರ್ಕಿಯ ಪ್ರಬಲ ಭೂಕಂಪಕ್ಕೆ ನೆರೆಯ ಲೆಬನಾನ್, ಸಿರಿಯಾ ಮತ್ತು ಇಸ್ರೇಲ್ ಕೂಡ ಗಡಗಡ ನಡುಗಿದೆ.
ಈ ನಡುವೆ ಟರ್ಕಿಯ ಮಳೆ ಅಬ್ಬರ, ದಟ್ಟವಾಗಿ ಕವಿದ ಮಂಜಿನಿಂದ ಜನರ ರಕ್ಷಣೆಗೆ ಟರ್ಕಿ ರಕ್ಷಣಾ ತಂಡ ಹರಸಾಹಸ ಪಡುತ್ತಿದೆ.
1948 ರಿಂದ ಭಾರತ ಮತ್ತು ಟರ್ಕಿಯ ನಡುವೆ ರಾಜತಾಂತ್ರಿಕ ಸಂಬಂಧಗಳಿರುವುದರಿಂದ ಭಾರತ ಸಹಿತ ಜಗತ್ತಿನ 44 ದೇಶಗಳು ಟರ್ಕಿಯ ಬೆಂಬಲಕ್ಕೆ ನಿಂತಿದೆ.
ಕಣ್ಣೆದುರೆ ಕುಸಿದು ಬೀಳುತ್ತಿರುವ ಬಹುಮಹಡಿ ಕಟ್ಟಡಗಳನ್ನು ನೋಡುತ್ತಿದ್ದ ಯುಬಕನೊಬ್ಬನು
ಉಮ್ಮಳಿಸಿ ಬರುವ ದುಃಖವನ್ನು ಗಂಟಲಿನಲ್ಲೇ ಬಿಗಿ ಹಿಡಿದು
“ಭೂಕಂಪನವಾಗಿದೆ, ಒಂದೇ ಸ್ಥಳದಲ್ಲಿ ಒಟ್ಟಿಗೆ ಸಾಯೋಣ” ಅನ್ನುವ ವೀಡಿಯೋ ತುಣುಕು ಕಟುಕನ ಹೃದಯವನ್ನೂ ಕರಗುವಂತೆ ಮಾಡಿದೆ.
ಖುರ್ಆನ್ ಅಧ್ಯಾಯ: 99 ಶ್ಲೋಕ: 3
وَقَالَ ٱلْإِنسَٰنُ مَا لَهَا
(ಆಗ) ಮನುಷ್ಯನು ಹೇಳುವನು ‘ಭೂಮಿಗೆ ಏನು ಸಂಭವಿಸಿದೆ?
ಎಂಬ ಖುರ್ಆನ್ ಸಂದೇಶ ಮತ್ತೊಮ್ಮೆ ನೆನಪಿಗೆ ಬಂತು
ಟರ್ಕಿಗಾಗಿ ಪ್ರಾರ್ಥಿಸೋಣ..
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ