ಮಂಗಳೂರು: ಮುಸ್ಲಿಮ್ ಹೊರತಾದ ಭಾರತ ಸಂವಿಧಾನ ರಚಿಸುತ್ತೇವೆ, ಈ ದೇಶದ ಮುಸ್ಲಿಮರಿಗೆ ಸರಕಾರಿ ಸವಲತ್ತನ್ನು ನಿರಾಕರಿಸುವ ಆಡಳಿತ ವ್ಯವಸ್ಥೆಯನ್ನೂ ಸೃಷ್ಟಿಸುತ್ತೇವೆ ,ಎಂಬಿತ್ಯಾದಿಯಾಗಿ ವಿ.ಎಚ್.ಪಿ ನಾಯಕ ಪ್ರವೀಣ್ ತೊಗಾಡಿಯಾ ರವರು ತಮ್ಮ ಭಾಷಣದಲ್ಲಿ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ ಮತ್ತು ಇಂತಹ ಹೇಳಿಕೆ ನಿರ್ಲಕ್ಷ್ಯಕ್ಕೆ ಅರ್ಹವಾಗಿದೆ ಎಂದು ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತದಂತಹ ಪ್ರಾಚೀನ ಪರಂಪರೆಯುಳ್ಳ ಭೌಗೋಳಿಕ, ನಿಸರ್ಗ ವ್ಯವಸ್ಥೆಯಲ್ಲಿ ಕೊಡು ಕೊಳ್ಳುವಿಕೆ ರಕ್ತ ಸಹಜ.ಇಂತಹಾ ಜನ ಸಹಕಾರ ವ್ಯವಸ್ಥೆಯಲ್ಲಿ ಧರ್ಮಾನುಯಾಯಿ ಸಮುದಾಯ ಹೊರತಾದ ಸಂವಿಧಾನ ವ್ಯವಸ್ಥೆ ಸೃಷ್ಟಿಸುವುದು ಅಪ್ರಾಯೋಗಿಕ ಎಂದು ಪ್ರವೀಣ್ ತೊಗಾಡಿಯಾರ ಅನುಯಾಯಿಗಳು ಅರಿಯುವುದು ಒಳಿತು.
ಪ್ರವೀಣ್ ತೊಗಾಡಿಯಾ ಅನುಯಾಯಿಗಳು ಅಂತಹ ಕನಸು ಕಾಣುವುದನ್ನು ಈಗಲೇ ತ್ಯಜಿಸುವುದು ಅಷ್ಟೇ ಒಳಿತು. ಭಾರತ ನೆಲೆ ಹೊಂದಿರುವುದೇ ಶಾಸನಗಳ ಚರಿತ್ರೆಯಿಂದ ಎಂದು ಇತಿಹಾಸವೇ ಹೇಳುತ್ತದೆ. ಭಾರತ ಉಪಖಂಡದ ಅಷ್ಟೂ ಶಾಸನಗಳು ಧರ್ಮಾಧಾರಿತ ವಾಗಿದೆ ಮತ್ತು ಧರ್ಮಕ್ಕೆ ಆತಿಥ್ಯ ನೀಡಿದ ಹೊರತಾದ ಒಂದೇ ಒಂದು ಶಾಸನವೂ ಈ ದೇಶದಲ್ಲಿ ಲಭ್ಯವಿಲ್ಲ ಎಂಬುದನ್ನು ತೊಗಾಡಿಯಾ ಅನುಯಾಯಿಗಳು ಅರಿಯುವುದು ಒಳಿತು ಎಂದು ಕೆ.ಅಶ್ರಫ್(ಮಾಜಿ ಮೇಯರ್)ಅಧ್ಯಕ್ಷರು,ದ.ಕ.ಮುಸ್ಲಿಮ್ ಒಕ್ಕೂಟ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ