janadhvani

Kannada Online News Paper

ಕರ್ನಾಟಕ ಮುಸ್ಲಿಂ ಜಮಾಅತ್ ಸದಸ್ಯತ್ವ ಪಡೆದ ಮುಫ್ತಿ ಅನ್ವರ್ ಅಲಿ ಸಾಹೇಬ್, ವಕ್ಫ್ ಬೋರ್ಡ್ ಛೇರ್ಮೆನ್ ಶಾಫೀ ಸ‌ಅದಿ

ಬೆಂಗಳೂರು, ಜನವರಿ 5; ಕರ್ನಾಟಕ ಮುಸ್ಲಿಂ ಜಮಾಅತಿನ ಸದಸ್ಯತ್ವ ಅಭಿಯಾನವು ಜನವರಿ ಒಂದರಿಂದ ರಾಜ್ಯದಾದ್ಯಂತ ಆರಂಭಗೊಂಡಿದ್ದು,ಮುಫ್ತಿ ಏ ಕರ್ನಾಟಕ ಮುಫ್ತಿ ಅನ್ವರ್ ಅಲಿ ಸಾಹೇಬ್, ಕರ್ನಾಟಕ ವಕ್ಫ್ ಬೋರ್ಡ್ ಛೇರ್ಮನ್ ಮೌಲಾನಾ ಶಾಫೀ ಸಾದಿ ಬೆಂಗಳೂರು ಸದಸ್ಯತ್ವವನ್ನು ಪಡೆದರು.

ಖಾಸಗಿ ನಿಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸದಸ್ಯತ್ವ ಅಭಿಯಾನದ ಭಾಗವಾದರು.
ಈ ಸಂದರ್ಭದಲ್ಲಿ ಮೌಲಾನಾ ಖಾಝಿ ಝುಲ್ಫಿಕಾರ್ ನೂರಿ, ಮರ್ಕಝೇ-ಏ-ಅಹ್ಲುಸ್ಸುನ್ನ ಹಝ್ರತ್ ಜಾಮಿಯ ಬಿಲಾಲ್ ಛೇರ್ಮೇನ್ ಜನಾಬ್ ಅಮೀರ್ ಜಾನ್ ಸಾಹೇಬ್, ಬಾಗಲಕೋಟ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಮೆಹಬೂಬ್ ಸರ್ಕವಾಶ್, ಹಾವೇರಿ ಜಿಲ್ಲಾ ವಕಫ್ ಸಮಿತಿ ಅಧ್ಯಕ್ಷ ನಾಸಿರ್ ಪಠಾನ್,ರಾಜ್ಯ ದರ್ವೇಶ್ ಸಮಿತಿ ಕಾರ್ಯದರ್ಶಿ ಸುಲ್ತಾನ್ ಬಾಬ,ಮೌಲಾನಾ ಹುಸೈನ್ ಮಿಸ್ಬಾಹಿ,ಮುಂತಾದ ನಾಯಕರು ಭಾಗವಹಿಸಿದ್ದರು.