ಸಅದಿಯಾ ಎಜುಕೇಶನ್ ಫೌಂಡೇಶನ್ ಇದರ ಮಹಾಸಭೆ ರಿಯಾದಿನ ಅಲ್-ಮಾಸ್ ಆಡಿಟೋರಿಯಂನಲ್ಲಿ ತಾರೀಖು 28 ಅಕ್ಟೋಬರ್ 2022 ರಂದು ಜರುಗಿಸಲಾಯಿತು.
ಸಅದಿಯಾ ಎಜುಕೇಶನ್ ಫೌಂಡೇಶನ್ ಇದರ ಸಾರಥಿ ಹಾಗೂ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರಾದ ಸನ್ಮಾನ್ಯ ಕೆ.ಎನ್.ಎಮ್ ಶಾಫಿ ಸಅದಿ ಉಸ್ತಾದರನ್ನು ಅತಿಥಿಯಾಗಿ ಕ್ರಾಯಕ್ರಮಕ್ಕೆ ಆಹ್ವಾನಿಸಲಾಗಿತ್ತು.
ಕೆಸಿಎಫ್ ರಿಯಾದ್ ಸಮಿತಿ ಅಧ್ಯಕ್ಷರಾದ ಮುಸ್ತಫಾ ಸಅದಿ ಉಸ್ತಾದರು ಇಸ್ಲಾಮಿನಲ್ಲಿ ಶಿಕ್ಷಣ ಹಾಗೂ ಶಿಕ್ಷಕರ ಮಹತ್ವವನ್ನು ಹದೀಸಿನ ಆಧಾರದಲ್ಲಿ ಸಭಿಕರಿಗೆ ವಿವರಿಸಿ ಕೊಟ್ಟರು. ಸನ್ಮಾನ್ಯ ಶಾಫಿ ಸಅದಿ ಉಸ್ತಾದರು ಸಅದಿಯಾ ಫೌಂಡೇಶನ್ ನಡೆದು ಬಂದ ಹಾದಿ, ಇಷ್ಟರವರೆಗಿನ ಸಾಧನೆಗಳು, ವರ್ತಮಾನ ಹಾಗೂ ಭವಿಷ್ಯತ್ತಿನ ಯೋಜನೆಗಳನ್ನು ಸಾಕ್ಷ್ಯ ಚಿತ್ರಗಳ ಮೂಲಕ ಹಾಗೂ ಮುಸ್ಲಿಂ ಸಮಾಜದ ಮುಂದಿರುವ ಸಮಸ್ಯೆಗಳನ್ನು ಸಭಿಕರಿಗೆ ತಿಳಿಸಿ ಕೊಟ್ಟರು .
ಸಅದಿಯಾ ಎಜುಕೇಶನ್ ಫೌಂಡೇಶನ್ ರಿಯಾದ್ ಸಮಿತಿಯ ನೂತನ ಅಧ್ಯಕ್ಷರಾಗಿ ಸನ್ಮಾನ್ಯ ಬಷೀರ್ ಲಾಯಿಲ , ಪ್ರಧಾನ ಕಾರ್ಯದರ್ಶಿಯಾಗಿ ನಿಝಾಮುದ್ದೀನ್ ಉಸ್ಮಾನ್
ಹಾಗೂ ಕೋಶಾಧಿಕಾರಿಯಾಗಿ ಶಮೀರ್ ಅಮ್ಮುನ್ಜೆ ಇವರನ್ನು ಆರಿಸಲಾಯಿತು. ಸಆದಿಯಾ ಎಜುಕೇಶನ್ ರಿಯಾದ್ ಸಮಿತಿಯ ವತಿಯಿಂದ ಮಾನ್ಯ ಶಾಫಿ ಸಆದಿ ಉಸ್ತಾದರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಹಲವಾರು ಸಂಘ ಸಂಸ್ಥೆಗಳ ನೇತಾರರು ಹಾಗೂ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಅದಿಯಾ ಎಜುಕೇಶನ್ ಫೌಂಡೇಶನ್ ಸಂಸ್ಥೆಯ ಸದಸ್ಯರಾದ ಅಶ್ರಫ್ ಕಿಲ್ಲೂರ್ ಸ್ವಾಗತಿಸಿದರು ಹಾಗೂ ಬಷೀರ್ ಲಾಯಿಲ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ