ಮಂಗಳೂರು: ಇಲ್ಲಿನ, ಸುರತ್ಕಲ್ ಟೋಲ್(Suratkal Toll Gate) ವಿರುದ್ಧದ ಹೋರಾಟದ ಸಂದರ್ಭದಲ್ಲಿ ನಡೆದ ಪೊಲೀಸ್ ಕಾರ್ಯಾಚಣೆ ಘಟನೆಗೆ ಸಂಬಂಧಿಸಿ ಪ್ರತಿಭಾ ಕುಳಾಯಿಯ ವಿರುದ್ಧ ಶ್ಯಾಮ್ ಸುದರ್ಶನ್ ಭಟ್ ರವರು, ಲೈಂಗಿಕ ದೌರ್ಜನ್ಯ ಭಾಷೆಯಲ್ಲಿ, ಅಶ್ಲೀಲವಾಗಿ, ಅವಹೇಳನಾತ್ಮಕವಾಗಿ, ನಿಂದಿಸಿರುವುದನ್ನು ಮಾಜಿ ಮೇಯರ್, ಕೆ.ಅಶ್ರಫ್ ರವರು ಖಂಡಿಸಿದ್ದಾರೆ.
ಪ್ರತಿಭಾ ಕುಳಾಯಿರವರು ತನ್ನ ಪ್ರಜಾಸತ್ತಾತ್ಮಕ ಹೋರಾಟದ ಸಂದರ್ಭದಲ್ಲಿ ಓರ್ವ ಸ್ತ್ರೀ ಹೋರಾಟಗಾರಳಾಗಿ ಇದ್ದುಕೊಂಡು, ನ್ಯಾಯದ ಬೇಡಿಕೆ, ಪರಿಸ್ಥಿತಿಯ ಸವಾಲು, ಕಾನೂನಿಗೆ ಗೌರವ, ನೈತಿಕತೆಯ ಪರಿಪಾಲನೆ ಯೊಂದಿಗೆ ತನ್ನ ವ್ಯಕ್ತಿ ಗೌರವವನ್ನು ಸಂರಕ್ಷಿಸುವ ಪದಗಳನ್ನು ಆಡಿದ್ದಕ್ಕೆ, ಅದನ್ನೇ ದೊಡ್ಡ ಸೂಕ್ಷ್ಮ ಘಟನೆಯಾಗಿಸಿ ದ್ವಂದ ದೃಷ್ಟಿಯ ಮನಸ್ಥಿತಿಯಲ್ಲಿ ಕಂಡು, ಓರ್ವ ಸ್ತ್ರೀ ಸಹೋದರಿಯನ್ನು , ಸಾಮಾಜಿಕ ಜಾಲ ತಾಣಗಳ ಮೂಲಕ ಅಶ್ಲೀಲ ಮತ್ತು ಲೈಂಗಿಕ ದೌರ್ಜನ್ಯದ ಭಾಷೆಯಲ್ಲಿ ನಿಂದಿಸುವುದು ಅಪರಾಧ.
ಇಂತಹ ನೀಚ ಮನಸ್ಥಿತಿಯ ವ್ಯಕ್ತಿ ಪತ್ರಿಕಾ ವೃತ್ತಿಯಲ್ಲಿ ಇರುವುದು, ಸಾಮಾಜಿಕ ಸ್ವಾಸ್ಥ್ಯ ವನ್ನು ಕೆಡಿಸುವುದಕ್ಕಾಗಿದೆ. ಪತ್ರಕರ್ತರು ಸಮಾಜದ ದರ್ಪಣವಾಗಿ ವೃತ್ತಿ ಗೌರವವನ್ನು ಪಾಲಿಸುವುದರೊಂದಿಗೆ, ಸಮಾಜದಲ್ಲಿನ ಶೋಷಣೆಯ ವಿರುದ್ಧ ಹೋರಾಡುವ ಸ್ತ್ರೀವರ್ಗದ ಗೌರವವನ್ನು ಸಂರಕ್ಷಿಸುವ ಮಾತುಗಳನ್ನು ಆಡುವ ಬದಲು ಶ್ಯಾಮ್ ಸುದರ್ಶನ್ ಭಟ್, ಸ್ತ್ರೀ ಅಪಮಾನವನ್ನು ಮಾಡುವ ಮೂಲಕ, ಸ್ತ್ರೀಯರ ಬಗ್ಗೆಗಿನ ತನ್ನ ಮನಸ್ಥಿತಿಯನ್ನು ಹೊರಗೆಡಹಿರುವುದು, ಅವರ ನೈಜ ದೃಷ್ಟಿ ಏನು ಎಂದು ಬಿಂಬಿಸುತ್ತದೆ.ಇಂತಹ ವ್ಯಕ್ತಿಯಿಂದ ಸ್ತ್ರೀಪರ ಬರಹಗಳನ್ನು ನಿರೀಕ್ಷಿಸುವುದು ವ್ಯರ್ಥ.
ಸಹೋದರಿ ಪ್ರತಿಭಾ ಕುಳಾಯಿ ಅವರು ಬಲ್ಕೀಸ್ ಬಾನು ಸಂತ್ರಸ್ತೆಯ ಮತ್ತು ಈ ಹಿಂದೆ ಆಸಿಫಾ ಅತ್ಯಾಚಾರ ವಿರುದ್ಧ ನೇರ ದ್ವನಿ ಎತ್ತಿದ ಓರ್ವ ಧೀರ ಮಹಿಳೆ, ಅವರ ಅವಹೇಳನ ವಿರುದ್ಧದ ಸ್ತ್ರೀ ಶಕ್ತಿ ಹೋರಾಟಕ್ಕೆ ಮುಸ್ಲಿಮ್ ಒಕ್ಕೂಟ ಸಂಪೂರ್ಣ ಬೆಂಬಲವಿದೆ. ಸಹೋದರಿ ಕುಳಾಯಿರವರ ಅವಹೇಳನದ ಆರೋಪಿಯ ವಿರುದ್ಧ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ. ಜಿಲ್ಲೆಯಲ್ಲಿ ಮುಂದೆಂದೂ ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸರು ಎಚ್ಚರಿಕೆ ನೀಡಬೇಕು ಎಂದು ಕೆ.ಅಶ್ರಫ್
(ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ) ಆಗ್ರಹಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ