ಮಾಣಿ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಸೂರಿಕುಮೇರು ಯುನಿಟ್ ಇದರ ವತಿಯಿಂದ ಮೀಲಾದುನ್ನಬಿ ಪ್ರಯುಕ್ತ ಪ್ರವಾದಿ (ಸ.ಅ) ರವರ ಕೀರ್ತನೆಗಳ ಬೃಹತ್ ಬುರ್ದಾ ಮಜ್ಲಿಸ್ ಕಾರ್ಯಕ್ರಮವು ಅಕ್ಟೋಬರ್14 ಶುಕ್ರವಾರ ದಂದು ಮಗ್ರಿಬ್ ನಮಾಝ್ ಬಳಿಕ ಸೂರಿಕುಮೇರು ಜಂಕ್ಷನ್ ನಲ್ಲಿ ನಡೆಯಲಿರುವುದು.
ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಮತ್ತು ಅಸ್ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದ್ರೋಸ್ ತಂಙಳ್ ದುಆ ನೇತೃತ್ವ ವಹಿಸುವರು,ಜಾಫರ್ ಸಅದಿ ಪಳ್ಳತ್ತೂರು,ಸಾಬಿತ್ ಕಾಸರಗೋಡು, ಶಿಬಿಲಿ ಕಾಸರಗೋಡು,ಅಲೀ ಕಾಸರಗೋಡು,ಉನೈಸ್ ಕಡಂಬಾರ್,ಮಿಸ್ಬಾಹ್ ಕಳಂಜಿಬೈಲ್,ಹಸೈನಾರ್ ಸಅದಿ ಕಳಂಜಿಬೈಲ್ ನೇತೃತ್ವದ ತಂಡ ಬುರ್ದಾ ಆಲಾಪನೆ ನಡೆಸಿಕೊಡಲಿದೆ,ಹಲವಾರು ಉಲಮಾ ಉಮರಾ ನೇತಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಎಂದು ಸ್ವಾಗತ ಸಮಿತಿಯ ಪ್ರಮುಖರಾದ ಹನೀಫ್ ಸಂಕ,ಇಬ್ರಾಹಿಂ ಸಅದಿ ಮಾಣಿ,ರಝಾಕ್ ಮದನಿ ಸೂರಿಕುಮೇರು, ಯೂಸುಫ್ ಹಾಜಿ ಸೂರಿಕುಮೇರು, ಸುಲೈಮಾನ್ ಸೂರಿಕುಮೇರು, ಹಸೈನ್ ಸಂಕ,ಅಝೀಂ ಸೂರಿಕುಮೇರು,ಸಲೀಂ ಮಾಣಿ,ಬಶೀರ್ ಝುಹ್ರಿ, ಅಶ್ರಫ್ ಸಖಾಫಿ, ಕರೀಂ ನೆಲ್ಲಿ ,ಹಂಝ ಸೂರಿಕುಮೇರು,ಇಬ್ರಾಹಿಂ ಮಾಣಿ ತಿಳಿಸಿದರು.